ಹಂತಿ

Author : ಹೊರಪೇಟೆ ಮಲ್ಲೇಶಪ್ಪ

Pages 56

₹ 20.00




Year of Publication: 2018
Published by: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ
Address: ಪ್ರಕಾಶಕರು: ಆಯುಕ್ತರು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಬ್ಯಾಡಗಿ ತಾಲ್ಲೂಕು, ಹಾವೇರಿ ಜಿಲ್ಲೆ
Phone: 08375-289388

Synopsys

‘ಹಂತಿ’ ಹೊರಪೇಟೆ ಮಲ್ಲೆಶಪ್ಪ ಅವರು ಸಂಪಾದಿಸಿರುವ ಕೃತಿಯಾಗಿದೆ. ಕನಕದಾಸರು 'ಕುರುಬರ ಜಾತಿಯಲ್ಲಿ ಹುಟ್ಟಿದರೂ ಕುರುಬರಾಗಿ ಉಳಿಯಲಿಲ್ಲ, ತಾಳ-ತಂಬೂರಿ ಹಿಡಿದು ಹರಿದಾಸರಾಗಿ ವೈಷ್ಣವ ಮತಾನುಯಾಯಿಯಂತೆ ಕಂಡರೂ, ಜನಿವಾರ ಧರಿಸಿ ವೈಷ್ಣವರಾಗಲಿಲ್ಲ. ಅವರೊಬ್ಬ “ವಿಶ್ವಮಾನವರಾದರು”. ಯಾವುದೇ ಜಾತಿ ಮತ ಪಂಥಗಳಿಗೆ ಅಂಟಿಕೊಳ್ಳದ ಕನಕದಾಸರ ಕಾವ್ಯ ಕೀರ್ತನೆಗಳು ಯಾವಾಗಲೂ ಮಂತ್ರದಂತೆ ಪಠಣೆಯಾಗಬೇಕು. “ಆತ್ಮ ಯಾವ ಕುಲ-ಜೀವ ಯಾವ ಕುಲ” ದಂತಹ ಸಂದೇಶ ವಾಕ್ಯಗಳು ವೇದ ವಾಕ್ಯದಂತೆ ಘೋಷಣೆಯಾಗಬೇಕು. ಈ ಹಿನ್ನಲೆಯಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದವರು ಹೊರತರುತ್ತಿರುವ “ಹಂತಿ” ವಿಶಿಷ್ಟವಾದುದು.

About the Author

ಹೊರಪೇಟೆ ಮಲ್ಲೇಶಪ್ಪ

ಹೊರಪೇಟೆ ಮಲ್ಲೇಶಪ್ಪ ಅವರು ಕೊಪ್ಪಳ ಜಿಲ್ಲೆಯ ಮೋರನಹಳ್ಳಿ ಗ್ರಾಮದವರು. ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ಹೊನ್ನಾಣ, ಹರಿಹರ, ಭದ್ರಾವತಿ, ಶಿಗ್ಗಾವಿ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹಿಂದು ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಮತ್ತು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕನಕದಾಸರ, ಸಂಗೊಳ ರಾಯಣ್ಣ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಸಾಹಿತ್ಯ ಪ್ರಕಟಣೆ, ಪ್ರಚಾರಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಕೃತಿಗಳು: ಕನಕನ ಹೆಜ್ಜೆ, ಹಂತಿ ...

READ MORE

Related Books