ಹರಳಯ್ಯ

Author : ಬಾಲಚಂದ್ರ ಜಯಶೆಟ್ಟಿ

Pages 64

₹ 12.00




Year of Publication: 2005
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮ, ಕಲಬುರಗಿ
Phone: 9448124431

Synopsys

ಕಲ್ಯಾಣಕ್ರಾಂತಿಗೆ ನೆಪವಾದ ಶರಣ ಹರಳಯ್ಯನ ಸಂಕ್ಷಿಪ್ತ ಚರಿತ್ರೆ ಇದಾಗಿದೆ. ಕಲ್ಯಾಣಮ್ಮ ಮತ್ತು ಹರಳಯ್ಯ ದಂಪತಿ ತಮ್ಮ ತೊಡೆಯ ಚರ್ಮವನ್ನು ಸುಲಿದು ಬಸವಣ್ಣನವರಿಗೆ ಚಮ್ಮಾವುಗೆ ತಯಾರಿಸುತ್ತಾರೆ. ನಡುವೆ ಮಧುವಯ್ಯನ ಪ್ರವೇಶವಾಗಿ ಆತನಿಗೆ ಹರಳಯ್ಯನ ಘನತೆ ಗೊತ್ತಾಗಿ ರಕ್ತಸಂಬಂಧ ಬೆಳೆಸುತ್ತಾನೆ. ಇದುವೆ ಕಲ್ಯಾಣಕ್ರಾಂತಿಗೆ ಕಾರಣವಾಗುತ್ತದೆ. ಸಂಗತಿಗಳನ್ನು ಒಳಗೊಂಡ ಹರಳಯ್ಯರ ಜೀವನ ಚಿತ್ರವನ್ನು ಲೇಖಕ ಪ್ರೊ. ಭಾಲಚಂದ್ರ ಜಯಶೆಟ್ಟಿ ಅವರು ವಿವರಿಸಿದ್ದಾರೆ. 

About the Author

ಬಾಲಚಂದ್ರ ಜಯಶೆಟ್ಟಿ
(22 November 1939)

ಲೇಖಕ, ಅನುವಾದಕ ಭಾಲಚಂದ್ರ ಜಯಶೆಟ್ಟಿ ಅವರು ಮೂಲತಃ ಬೀದರ ಜಿಲ್ಲೆಯವರು. ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ರಾಜೇಶ್ವರದಲ್ಲಿ  ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ರಾಜೇಶ್ವರ, ಬಸವಕಲ್ಯಾಣದಲ್ಲಿ ಪಡೆದರು. ಆನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎ ಪದವಿ ಪಡೆದರು. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರಭುತ್ವ ಪಡೆದಿದ್ದ ಅವರು ಶಿಕ್ಷಣ ಇಲಾಖೆಯಲ್ಲಿ ವೃತ್ತಿಯನ್ನು ಆರಂಭಿಸಿದರು.  ಸರಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿ, ಸರಕಾರಿ ಮಹಾವಿದ್ಯಾಲಯ ಗುಲಬರ್ಗಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೀದರ ಮುಂತಾದೆಡೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿಯಾದರು. ಹಲವಾರು ಶಿಕ್ಷಣ ಸಂಸ್ಥೆಗಳ ...

READ MORE

Related Books