ಹರಿಭಕ್ತಿ ಸುಧೆ

Author : ರಂಗನಾಥ ದಿವಾಕರ

Pages 308

₹ 2.00




Year of Publication: 1938
Published by: ಬೋಧರಾವ ರಾಮಚಂದ್ರ ದಿವಾಕರ
Address: ಅಧ್ಯಾತ್ಮ ಕಾರ್ಯಾಲಯ, ಧಾರವಾಡ.

Synopsys

ಕೀರ್ತನೆ, ಸೂಳಾದಿ, ಉಗಾಭೋಗಗಳು ಭಕ್ತರಸದ ಪ್ರಕಾರಗಳು. ದಾಸವರೇಣ್ಯರು ಭಕ್ತಿರಸ ಸಮೃದ್ಧತೆಯ ಸುಧೆ ಹರಿಸಿದವರು. ಜೀವನ ಸಾರ್ಥಕತೆಗೆ ಮುಕ್ತಿ ಅಗತ್ಯ. ಈ ಮುಕ್ತಿ ಪಡೆಯಲು ಅದರ ಸೋಪಾನವಾಗಿ ಭಕ್ತಿ ಬೇಕು. ಭಕ್ತಿ ಎಂಬುದು ಕೇವಲ ದೇವರಲ್ಲಿ ಬೇಡುವ ಪ್ರಕ್ರಿಯೆಯಲ್ಲ. ಅದು ದೇವರಲ್ಲಿ ಸರ್ವವನ್ನೂ ಸಮರ್ಪಿಸಿಕೊಳ್ಳುವ ಪ್ರಕ್ರಿಯೆ. ಕರ್ನಾಟಕದಲ್ಲಿ ಭಕ್ತಿ ಮಾರ್ಗ, ದಾಸರ ಸದ್ಗುಣಗಳು, ಗುರು ಮಹಿಮೆ, ಭಕ್ತನಿಗೆ ಭಯವಿಲ್ಲ. ಸ್ಮರಣ ಕೀರ್ತನೆಗಳ ಮಹಿಮೆ ಇತ್ಯಾದಿ ವಿಷಯಗಳ ಕೀರ್ತನೆಗಳು, ಭಕ್ತಿಯ ಹಾಡುಗಳು ಈ ಕೃತಿಯಲ್ಲಿ ಸಂಗ್ರಹವಾಗಿವೆ.

About the Author

ರಂಗನಾಥ ದಿವಾಕರ
(30 September 1894 - 15 January 1990)

ಕೇಂದ್ರ ವಾರ್ತಾ ಸಚಿವರೂ, ಜನಪ್ರತಿನಿಧಿಗಳೂ, ಏಕೀಕರಣದ ನೇತಾರರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ರಂಗರಾವ್ ರಾಮಚಂದ್ರ ದಿವಾಕರ್, ಕರ್ನಾಟಕದ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಜೀವನದ ಪ್ರಮುಖರು. ಧಾರವಾಡದಲ್ಲಿ 1894ರ ಸೆಪ್ಟೆಂಬರ್ 30ರಂದು ಜನಿಸಿದ ರಂ.ರಾ. ದಿವಾಕರ, ಧಾರವಾಡ, ಬೆಳಗಾವಿ, ಪುಣೆ, ಹುಬ್ಬಳ್ಳಿ, ಮುಂಬಯಿಗಳಲ್ಲಿ ವ್ಯಾಸಂಗ ಮಾಡಿದರು. ತಂದೆ ರಾಮಚಂದ್ರರಾವ್, ತಾಯಿ ಸೀತಮ್ಮ. ಎಲ್ಎಲ್ ಬಿ ಪದವಿ (1919, ನಂತರ 1920ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.  ಕರ್ಮವೀರ (1921) ವಾರಪತ್ರಿಕೆ ಪ್ರಾರಂಭಿಸಿ, ಅನಂತರ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಆರಂಭಿಸಿದರು. ಭಾರತದ ಸಂವಿಧಾನ ರಚನೆಯಲ್ಲಿ ಘಟನಾ ಸಮಿತಿಯ ಸದಸ್ಯರಾಗಿದ್ದರು.  1948-52ರ ವರೆಗೆ ಕೇಂದ್ರ ಸರ್ಕಾರದಲ್ಲಿ ವಾರ್ತಾ ಇಲಾಖೆ ಸಚಿವರಾದರು. ...

READ MORE

Related Books