ಹರಿದಾಸರು ಸ್ತುತಿಸಿದ ಶ್ರೀ ಸತ್ಯಬೋಧತೀರ್ಥರು

Author : ಶ್ರೀನಿವಾಸ ಹಾವನೂರ

Pages 124

₹ 28.00




Year of Publication: 2001
Published by: ಶ್ರೀವಾದಿರಾಜ ಮೃತ್ತಿಕಾ ವೃಂದಾವನ ಮಠ
Address: ಹಾವನೂರ, ಜಿ. ಹಾವೇರಿ- 581133

Synopsys

‘ಹರಿದಾಸರು ಸ್ತುತಿಸಿದ ಶ್ರೀ ಸತ್ಯಬೋಧತೀರ್ಥರು’ ಶ್ರೀನಿವಾಸ ಹಾವನೂರ ಅವರು ಸಂಪಾದಿಸಿರುವ ಕೃತಿ. ಕೃತಿಯ ಕುರಿತು ಬರೆಯುತ್ತಾ ಸೋದೆಯ ಶ್ರೀ ವಾದಿರಾಜರನ್ನು ಕುರಿತ ಹಾಡುಗಳ ಸಂಗ್ರಹವೊಂಜು 1998 ರಲ್ಲಿ ಹೊರತರಲಾಯಿತು. ಅದೇ ಮಾದರಿಯಲ್ಲಿ ಸಿದ್ಧವಾದ, ಸವಣೂರಿನ ಶ್ರೀ ಸತ್ಯಬೋಧರನ್ನು ಸ್ತುತಿಸಿದಂಥ ಹಾಡುಗಳು ಇಲ್ಲಿವೆ ಎಂದು ತಿಳಿಸಿದ್ದಾರೆ. ಈ ಮೊದಲು ಸುಮಾರು ಇಪ್ಪತ್ತು ಹಾಡುಗಳಷ್ಟೇ ಮುದ್ರಿತಗೊಂಡಿದ್ದವು. ಈಗ ಶ್ರೀಗಳವರನ್ನು ಸ್ತುತಿಸಿದ 18 ಜನ ಹರಿದಾಸರ ವಿವಿಧ ಬಗೆಯ 40 ಹಾಡುಗಳನ್ನು ಒಂದೆಡೆ ತಂದದ್ದಾಗಿದೆ. ಇದರ ಹೊಳಹನ್ನು ಹಾಕುವಲ್ಲಿ, ಮಾಹಿತಿಯನ್ನು ಒದಗಿಸುವಲ್ಲಿ ಮಿತ್ರ ಶ್ರೀ ಗೋವಿಂದಮೂರ್ತಿ ದೇಸಾಯಿಯವರು ವಿಶೇಷವಾಗಿ ನೆರವಾಗಿದ್ದಾರೆ ಎಂದು ತಿಳಿಸಿದ್ದಾರೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books