ಹಯವದನ

Author : ಗಿರೀಶ ಕಾರ್ನಾಡ

Pages 94

₹ 80.00




Year of Publication: 2012
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿ ಭವನ, ಸುಭಾಸ ರಸ್ತೆ, ಧಾರವಾಡ-1
Phone: 98454 47002

Synopsys

ಗಿರೀಶ ಕಾರ್ನಾಡರ ’ಹಯವದನ’ ಕನ್ನಡ ಮತ್ತು ಭಾರತೀಯ ರಂಗಭೂಮಿಯ ಮಹತ್ವದ ಕೃತಿಗಳಲ್ಲಿ ಒಂದು. ಸಂಗೀತ-ಹಾಡು-ನೃತ್ಯ-ಅಭಿನಯಗಳನ್ನು ಒಳಗೊಂಡ ಈ ನಾಟಕ ಬ್ರೆಕ್ಟ್‌ ನ ಎಪಿಕ್ ಥಿಯೇಟರ್‌ನ ಪರಿಕಲ್ಪನೆಗೆ ಅನುಗುಣವಾಗಿ ರಚಿತಗೊಂಡಿದೆ.

ದೇಹ ಮತ್ತು ಬುದ್ಧಿ-ಮನಸ್ಸುಗಳ ನಡುವಿನ ಮುಖಾಮುಖಿಯನ್ನು ಗಿರೀಶ ಈ ನಾಟಕದಲ್ಲಿ ಸೊಗಸಾಗಿ ಮಾಡಿದ್ದಾರೆ. ಕಪಿಲ ಮತ್ತು ದೇವದತ್ತ ಇಬ್ಬರು ಸ್ನೇಹಿತರು. ದೇವದತ್ತನ ಪತ್ನಿ ಪದ್ಮಿನಿ ಕಥಾನಾಯಕಿ.  ಮನುಷ್ಯನ ಅಪೂರ್ಣತೆಯನ್ನು ಕುರಿತ ಈ ನಾಟಕದಲ್ಲಿನ ನಾಟಕೀಯ ದೃಶ್ಯಗಳು- ಸೊಗಸಾದ ಹಾಡು-ಕತೆ ಕಟ್ಟುವ ಕ್ರಮ ಮೆಚ್ಚುಗೆಗೆ ಪಾತ್ರವಾಗದೇ ಇರದು.

ನೀರಿನ ಮೇಲೆ ಚಿತ್ರ ಕೆತ್ತಲಿಕ್ಕಾಗೋದಿಲ್ಲ, ಕತ್ತಿಯ ಗಾಯ ಮಾಡಲಿಕ್ಕಾಗೊದಿಲ್ಲ ಎಂಬ ಹಾಡು ’ಹಯವದನ’ ನಾಟಕದ ವಿಶೇಷ. ನಾಟಕದ ಆರಂಭದಲ್ಲಿಯೇ ಅಪೂರ್ಣತೆಯನ್ನು ಸೂಚಿಸುವ ಗಣೇಶ ಪ್ರಾರ್ಥನೆ ನಾಟಕಕ್ಕೆ ಉತ್ತಮ ಆರಂಭ ಒದಗಿಸುತ್ತದೆ.  

About the Author

ಗಿರೀಶ ಕಾರ್ನಾಡ
(19 May 1934 - 10 June 2019)

ನಾಟಕಕಾರ ಗಿರೀಶ್ ಕಾರ್ನಾಡ್ ಅವರು  ರಂಗಭೂಮಿ- ಚಲನಚಿತ್ರ ನಟರಾಗಿ, ನಿರ್ದೇಶಕರಾಗಿ,  ಸಂಗೀತ- ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ಕತೆ, ವಿಮರ್ಶೆ ಮತ್ತು ತಮ್ಮ ಆತ್ಮಕತೆ ‘ಆಡಾಡತ ಆಯುಷ್ಯ’ಗಳನ್ನು ಬರೆದಿದ್ದರೂ ನಾಟಕಕಾರ ಎಂದೇ ಚಿರಪರಿಚಿತರು. ಗಿರೀಶ್ 1934ರ ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಉತ್ತರಕನ್ನಡದ ಶಿರಸಿಯಲ್ಲಿ ಪ್ರಾಥಮಿ ಶಿಕ್ಷಣ ಧಾರವಾಡದ  ಬಾಸೆಲ್ ಮಿಶನ್ ಪ್ರೌಢಶಿಕ್ಷಣ, ಹಾಗೂ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ  ಪಡೆದ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು.  ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ...

READ MORE

Related Books