ಹೀಗೆಯೇ ಒಂದಷ್ಟು

Author : ಶೂದ್ರ ಶ್ರೀನಿವಾಸ್

Pages 175

₹ 150.00

Buy Now


Year of Publication: 2016
Published by: ಅಭಿನವ ಪ್ರಕಾಶನ
Address: ಬೆಂಗಳೂರು
Phone: 94488 04905

Synopsys

ಇದು ಪತ್ರಕರ್ತರಾಗಿ, ಅಂಕಣಕಾರರಾಗಿ ಈಗಲೂ ಸಕ್ರಿಯವಾಗಿದ್ದುಕೊಂಡು ಬರೆಯುವ ಶೂದ್ರ ಅವರ ಇನ್ನೊಂದು ಮುಖ್ಯ ಕೃತಿ. ಹಲವು ವಿಶಿಷ್ಟ ವ್ಯಕ್ತಿತ್ವಗಳನ್ನು ಶೂದ್ರರು ಗುರುತಿಸಿ ಅವರನ್ನು ಮಮತೆಯ ಕಣ್ಣುಗಳಲ್ಲಿ ಕಟ್ಟಿಕೊಡುತ್ತಾರೆ. ಶೂದ್ರ, ಗೋರೂರು, ಮೂರ್ತಿರಾಯರು, ಡಾವಿ, ರಾಜಾಜಿ, ಬಿ. ವಿ. ಕಾರಂತ, ಖಾಸನೀಸ, ಮಾಸ್ತಿ, ದೇಸಾಯಿ ಹೀಗೆ ಸೃಜನಶೀಲ ಜಗತ್ತನ್ನು ತಮ್ಮ ಬೊಗಸೆಯಲ್ಲಿ ತುಂಬಿಕೊಡುವ ಕೆಲಸ ಮಾಡುತ್ತಾರೆ. ಗೊರೂರರ ಸರಳತೆ ಮತ್ತು ಸಾಮಾನ್ಯತೆ, ಮೂರ್ತಿರಾಯರ ಬರಹ, ಬದುಕಿನ ಸೌಂದರ್ಯ, ಗಾಂಧಿಬಜಾರು ಮತ್ತು ಸಾಹಿತ್ಯಲೋಕದ ಅದರ ನಂಟು, ವರ್ತಮಾನವನ್ನು ಕಾಯುತ್ತಿರುವ ಗಂಗೂಬಾಯಿಯವರ ಹಾಡು ಮತ್ತು ಬದುಕು, ಉದಯರವಿ ಕುವೆಂಪು ಅವರ ಮನೂಲೋಕದ ಕಡೆಗೆ ತೆರೆದ ಬಾಗಿಲ ವ್ಯಾಪಕತೆ, ಕಾಲಕ್ಕೆ ಮಹತ್ವ ಕೊಟ್ಟ ಕಾರಂತರ ವಿಶಿಷ್ಟ ವ್ಯಕ್ತಿತ್ವ, ಬೇಂದ್ರೆಯ ಸಾಧನ ಕೇರಿ, ಡಾವಿನ್ಸಿಯ ಭವ್ಯತ... ಶೂದ್ರರು ಬರೆಯುತ್ತಾ ಹೋದಂತೆ ನಾವು ಆ ಬೇರೆ ಬೇರೆ ವ್ಯಕ್ತಿತ್ವದೊಳಗೆ ಕಳೆದು ಹೋಗಿ ಬಿಡುತ್ತೇವೆ.

About the Author

ಶೂದ್ರ ಶ್ರೀನಿವಾಸ್

ಸೂಕ್ಷ್ಮ ಸಂವೇದನೆಯ ಕವಿ ಶೂದ್ರ ಶ್ರೀನಿವಾಸ್ ಅವರು ಹುಟ್ಟಿದ್ದು  ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕು ಮುತ್ತಾನಲ್ಲೂರು ಗ್ರಾಮದಲ್ಲಿ. ಈಗ ಬೆಂಗಳೂರು ವಾಸಿ. 1973ರಲ್ಲಿ ಶೂದ್ರ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿ ಅನೇಕ ವರ್ಷಗಳ ಕಾಲ ನಡೆಸಿದರು. 1996ರಲ್ಲಿ ಸಲ್ಲಾಪ ವಾರಪತ್ರಿಕೆ ಪ್ರಾರಂಭಿಸಿ ಒಂದು ವರ್ಷ ನಡೆಸಿದರು. 2002ರಲ್ಲಿ 'ನೆಲದ ಮಾತು' ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಶೂದ್ರ ಶ್ರೀನಿವಾಸ ಸಮಾಜವಾದಿ ರಾಜಕೀಯ ಚಿಂತನೆಯ ವ್ಯಕ್ತಿ. ಅವರು 1975-76ರಲ್ಲಿ 'ತುರ್ತು ಪರಿಸ್ಥಿತಿ'ಯಲ್ಲಿ ಎರಡು ಬಾರಿ ಬಂಧನ ಮತ್ತು ಸೆರೆಮನೆ ವಾಸ ಕಂಡವರು. 1976ರಲ್ಲಿ ಕೇರಳದ ಕೊಚ್ಚಿನ್‌ನಲ್ಲಿ ನಡೆದ ರಾಷ್ಟ್ರೀಯ ತುರ್ತು ...

READ MORE

Related Books