ಹೆಜ್ಜೆಗುರುತು

Author : ಅ.ನಾ. ಪ್ರಹ್ಲಾದರಾವ್

Pages 580

₹ 750.00




Year of Publication: 2021
Published by: ತಾರಾ ಪ್ರಿಂಟ್ಸ್, ಮೈಸೂರು
Address: ತಾರಾ ಪ್ರಿಂಟ್ಸ್, 287/F-21, ರಾಮಾನುಜ ರಸ್ತೆ, ಮೈಸೂರು
Phone: 9448074435

Synopsys

‘ಹೆಜ್ಜೆಗುರುತು’ 580 ಪುಟಗಳ ಹೊತ್ತಗೆ. ಮೂಕಿ ಕಾಲದಿಂದ ಆರಂಭಗೊಂಡು ಚಿತ್ರರಂಗದ ಬೆಳವಣಿಗೆಯ ವಿವಿಧ ಮಜಲುಗಳಿಗೆ ಸಂಬಂಧಿಸಿದ ಚಲನಚಿತ್ರಗಳು, ವ್ಯಕ್ತಿಗಳು ಹಾಗೂ ಘಟನಾವಳಿಗಳನ್ನು ಹೆಣೆಯುತ್ತಾ ಕನ್ನಡ ಚಿತ್ರರಂಗದ ಔನತ್ಯವನ್ನು ದಾಖಲಿಸುವ ಪ್ರಯತ್ನ ಇಲ್ಲಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸಾಕಷ್ಟು ಕೊಡುಗೆಯನ್ನು ನೀಡುವುದರೊಂದಿಗೆ ಹೊಸ ಪೀಳಿಗೆಯನ್ನು ಬೆಳೆಸಿದ್ದರಿಂದಾಗಿ, ಚಿತ್ರೋದ್ಯಮ ನಿಂತ ನೀರಾಗದೆ ವಿಕಸನಗೊಳ್ಳಲು ಸಾಧ್ಯವಾಯಿತು. ಕನ್ನಡ ಚಿತ್ರರಂಗ ನೆಲೆಯೂರಲು ಭದ್ರಬುನಾದಿ ಹಾಕಿದ ಮಹನೀಯರ ಜೊತೆ ಜೊತೆಯೇ ಮತ್ತಷ್ಟು ಹೊಸ ಪ್ರತಿಭೆಗಳು ಕೂಡಿಕೊಂಡದ್ದು ಚಿತ್ರರಂಗ ಪ್ರವೃದ್ಧಮಾನಕ್ಕೆ ಬರಲು ಸಾಧ್ಯವಾಯಿತು. ಈ ಕೃತಿಯಲ್ಲಿ ಆರಂಭದ ಎರಡು ದಶಕಗಳಲ್ಲಿ ಬಿಡುಗಡೆಗೊಂಡ ಕನ್ನಡ ಚಿತ್ರಗಳನ್ನು ಪರಿಚಯ ಮಾಡಿಕೊಡುತ್ತಾ ತನ್ಮೂಲಕ ಚಿತ್ರರಂಗಕ್ಕೆ ಸಿಕ್ಕ ಕೊಡುಗೆಯನ್ನು ದಾಖಲಿಸಲು ಪ್ರಯತ್ನಿಸಲಾಗಿದೆ. ಕ್ರಮೇಣ ಒಂದು ಹಂತ ತಲುಪಿ, ಭದ್ರನೆಲೆಗಟ್ಟಿನ ಮೇಲೆ ನಿಂತ ಕಾರಣದಿಂದ ಕನ್ನಡ ಚಿತ್ರರಂಗ ಹೊಸ ಹೊಸ ಆವಿಷ್ಕಾರಗಳತ್ತ ತನ್ನನ್ನು ತಾನು ತೆರೆದುಕೊಳ್ಳಲಾರಂಭಿಸಿತು. ಮೂಕಿಚಿತ್ರಗಳು, ಮಾತನಾಡುವ ಚಿತ್ರಗಳು, ಹೊಸ ಹೊಸ ತಂತ್ರಜ್ಞಾನ ಬಳಕೆ, ವಲಸೆಯ ಅನಿವಾರ್ಯತೆಯಲ್ಲಿದ್ದ ಕನ್ನಡ ಚಿತ್ರರಂಗ ನಿಧಾನವಾಗಿ ರಾಜ್ಯಕ್ಕೆ ಬಂದು ನಿಂತ ಪ್ರಕ್ರಿಯೆ, ವರ್ಣ ಚಿತ್ರಗಳು, ಹೊಸ ಅಲೆ ಚಿತ್ರಗಳವರೆಗೂ ಬಿಡುಗಡೆಗೊಂಡ ಚಿತ್ರಗಳು ಹಾಗೂ ಆ ಮೂಲಕ ಚಿತ್ರರಂಗಕ್ಕೆ ಬಂದು ನಿಂತ ಬಗ್ಗೆ ಇಲ್ಲಿ ಉಲ್ಲೇಖವಿದೆ. ನಂತರವೂ ಕನ್ನಡ ಚಿತ್ರರಂಗ ನಿಂತ ನೀರಾಗದೆ ನಿತ್ಯವಾಹಿನಿಯಾಗಿ, ಜೀವ ತರಂಗಿಣಿಯಾಗಿ ಪ್ರವಹಿಸುತ್ತಲೇ ಇದೆ. ಆ ಬಗ್ಗೆ ಸಹ ಸ್ಥೂಲ ಮಾಹಿತಿ ಇದೆ.

About the Author

ಅ.ನಾ. ಪ್ರಹ್ಲಾದರಾವ್
(24 July 1953)

ಅ.ನಾ.ಪ್ರಹ್ಲಾದರಾವ್‌ರವರು, ಕನ್ನಡದ ಪದಬಂಧ ಲೇಖಕರಲ್ಲಿ ಪ್ರಮುಖರು. ಇವರು ಕನ್ನಡದಲ್ಲಿ ಸುಮಾರು ನಲವತ್ತು ಸಾವಿರ ಪದಬಂಧಗಳನ್ನು ರಚಿಸಿದ್ದಾರೆ. ಇವರ ಪದಬಂಧಗಳು ಕನ್ನಡದ ಪ್ರಮುಖ ಪ್ರತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.ಭಾರತದ ಪ್ರಾದೇಶಿಕ ಭಾಷೆಗಳಲ್ಲಿಯೇ ಅತೀ ಹೆಚ್ಚು ಪದಬಂಧ ರಚಿಸುವ ಮೂಲಕ 2015, 2016 ಹಾಗೂ 2017ರ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರಿಕೊಳ್ಳುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದ ಕೀರ್ತಿ ಇವರದು. ಬೆಂಗಳೂರು, ಮಂಡ್ಯ ಹಾಗೂ ಕೋಲಾರದಲ್ಲಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ,ಪ್ರಜಾರತ್ನ, ಪದಬಂಧಬ್ರಹ್ಮ, ಪದಬಂಧಸಾಮ್ರಾಟ್, ಮುಂತಾದ ಬಿರುದುಗಳನ್ನು ನೀಡಿವೆ.  ...

READ MORE

Related Books