ರವೀಂದ್ರ ಭಟ್ಟ ಅವರ ಕೃಇ ‘ಹೆಜ್ಜೇನು’. ಜೇನು ಕುರುಬ ಜಾತಿಗೆ ಸೇರಿದ ಜಾಜಿ ತಿಮ್ಮಯ್ಯ ಅವರ ಆತ್ಮಕತೆ, ಅವರ ಹೋರಾಟಗಳ ಬಗೆಗಿರುವ ಕೃತಿ ಇದು. ಈ ಕೃತಿಗೆ ಡಾ.ಮುಜಾಫರ್ ಅಸ್ಸಾದಿ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಜೇನು ಸವಿಯದ ಮುನ್ನ, ಹಾಡು ಹಳಸಲಾದ ಹೊತ್ತು, ಮುತ್ತೂರಿಗೆ ಬಂದ ಮದುವಣಗಿತ್ತಿ, ಅರಿವು ತಂದ ಅಕ್ಷರ ಲೋಕ, ಸೋನಿಯಾ ಮೆಚ್ಚಿದ ಮೌನ ನಾಯಕಿ, ಹೋರಾಟದ ಹಾದಿಗೆ ಸಾವಿರಾರು ನದಿಗಳು, ಕಂಬಿ ಕಿತ್ತ ತಾಜ್, ಮತ್ತೆ ತುಂಬಿತು ಆತ್ಮವಿಶ್ವಾಸದ ಅಂತರ್ಜಲ, ಮುತ್ತಗದೆಲೆಯ ಮಾಂಸದೂಟಕ್ಕೆ ಬಾ ಬಿರ್ಸಾಮುಂಡ ಎಂಬ ಶೀರ್ಷಿಕೆಗಳು ಈ ಸಂಕಲನದಲ್ಲಿವೆ.
ರವೀಂದ್ರ ಭಟ್ಟ ಅವರು ಪ್ರಸ್ತುತ `ಪ್ರಜಾವಾಣಿ’ಯ ಕಾರ್ಯ ನಿರ್ವಾಹಕ ಸಂಪಾದಕರು. ಅವರ ಊರು ಉತ್ತರ ಕನ್ನಡ ಜಿಲ್ಲೆಯ ಐನಕೈ. ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅವರ ಬದುಕು ಹಾಗೂ ಬರಹಗಳಲ್ಲಿ ಮಾನವೀಯ ಅಂತಃಕರಣವೇ ಪ್ರಧಾನ. `ಸಂಯುಕ್ತ ಕರ್ನಾಟಕ’ದ ಮೂಲಕ ಪತ್ರಿಕಾರಂಗ ಪ್ರವೇಶಿಸಿದ ಅವರಿಗೆ ಕರ್ನಾಟಕ ಸರ್ಕಾರದ ``ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’’ ಪುರಸ್ಕೃತರು. `ಮೂರನೇ ಕಿವಿ’ ಪುಸ್ತಕ ಅವರ ಐದನೇ ಕೃತಿ. ...
READ MORE