ಹೆಣೆಯುತ್ತಿದೆ ಜೇಡ ಬಲೆಯ...

Author : ಶಿವರಾಮಯ್ಯ

Pages 304

₹ 200.00




Year of Publication: 2012
Published by: ದೇಸಿ ಪುಸ್ತಕ
Address: 13ನೇ ಮುಖ್ಯರಸ್ತೆ, ಎಮ್. ಸಿ. ಲೇಔಟ್, ವಿಜಯನಗರ, ಬೆಂಗಳೂರು. 560040
Phone: 080-23153558

Synopsys

“ಹೆಣೆಯುತ್ತಿದೆ ಜೇಡ ಬಲೆಯ...” ಸೃಜನಶೀಲ ಮತ್ತು ಸೃಜನೇತರ ಸಾಹಿತ್ಯ ಕೃತಿಗಳನ್ನು ಕುರಿತ ವಿಮರ್ಶಾ ಲೇಖನಗಳ ಸಂಕಲನ. ಇಪ್ಪತ್ಮೂರು ಲೇಖನಗಳಿರುವ ಈ ಕೃತಿಯು ಸಮಾಜಮುಖಿಯಾದ ಸಂಸ್ಕೃತಿ ಶೋಧವಾಗಿದೆ. ಹಾಗಾಗಿ ಇಲ್ಲಿನ ಸಾಹಿತ್ಯ ವಿಮರ್ಶೆಯು ಸಂಸ್ಕೃತಿ ವಿಮರ್ಶೆಯ ಕಡೆಗೆ ಹೊರಳಿಕೊಂಡಿದೆ. ಯಾವುದೇ ಸಾಹಿತ್ಯ ಕೃತಿ ಸಾಂಸ್ಕೃತಿಕ ಸಂದರ್ಭದ ಹುಟ್ಟು ಎಂದು ಹೇಳಿದರೂ, ಕೇವಲ ಸಾಂಸ್ಕೃತಿಕ ನೆಲೆಗಟ್ಟನ್ನು ಮಾತ್ರ ಕೇಂದ್ರದಲ್ಲಿರಿಸಿಕೊಂಡು ಸಾಹಿತ್ಯ ಕೃತಿಗಳು ಒಡಮೂಡುವುದಿಲ್ಲ. ಆದರೆ ಇಲ್ಲಿನ ಆಲೋಚನೆಗಳು ವರ್ತಮಾನದ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳನ್ನು ಸಂಸ್ಕೃತಿ ಸಿದ್ದಾಂತಗಳ ಮೂಲಕವೇ ಮುಖಾಮುಖಿಯಾಗಿಸುವ ಪ್ರತಿಕ್ರಿಯಾತ್ಮಕ ಬಗೆಯಾಗಿದೆ.

About the Author

ಶಿವರಾಮಯ್ಯ
(10 August 1940)

ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್‌ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.  ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...

READ MORE

Related Books