
ಮಕ್ಕಳನ್ನು ಬೆಳೆಸುವುದು ಕಲೆ. ಮಕ್ಕಳು ಹೇಗೆ ಪೋಷಕರನ್ನು ಸಲಹಬೇಕು ಎಂಬ ನಿರೀಕ್ಷೆ ಇರುತ್ತದೆಯೋ ಹಾಗೆ ಪೋಷಕರು ಮಕ್ಕಳನ್ನು ಬೆಳೆಸುವುದು ಮುಖ್ಯ. ಹಾಗಾಗಿಯೇ ಲೇಖಕ ಡಾ. ಮಹಾಬಲೇಶ್ವರ ರಾವ್ ಕೇವಲ ಹೆತ್ತವರಾಗಬೇಡಿ, ಹೃದಯವಂತ ಹೆತ್ತವರಾಗಿ ಎಂದು ಕರೆ ನೀಡುವ ಪುಸ್ತಕ ಹೊರತಂದಿದ್ದಾರೆ.
ಮಕ್ಕಳು ಚಿಕ್ಕವರಿದ್ದಾಗ, ಹರೆಯಕ್ಕೆ ಬಂದಾಗ ವರ್ತಿಸಬೇಕಾದ ರೀತಿ, ಶಿಸ್ತಿನ ಮಿತಿ ಎಷ್ಟಿರಬೇಕು, ನಾನೇ ಸರಿ ಎಂಬ ಹಠ ಎಷ್ಟು ಸರಿ ಇತ್ಯಾದಿ ಅನೇಕ ಮಹತ್ವದ ವಿಷಯಗಳನ್ನು ಕೃತಿಯಲ್ಲಿ ಚರ್ಚಿಸಲಾಗಿದೆ. ಕ್ಷಮಾ ಗುಣದ ಮಹತ್ವ, ಪ್ರೀತಿಯ ಆರೈಕೆಯಂತಹ ಸಲಹೆಗಳನ್ನು ನೀಡಲಾಗಿದೆ.
©2025 Book Brahma Private Limited.