ಹಿಂದಣ ಹೆಜ್ಜೆಯನರಿತಲ್ಲದೆ

Author : ಎಸ್. ನಟರಾಜ ಬೂದಾಳು

Pages 230

₹ 200.00




Year of Publication: 2017
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಪೋಸ್ಟ್, ಬಳ್ಳಾರಿ- 583113

Synopsys

‘ಹಿಂದಣ ಹೆಜ್ಜೆಯನರಿತಲ್ಲದೆ’ ಲೇಖಕ ನಟರಾಜ ಬೂದಾಳು ಅವರು ಸುಮಾರು ನಾಲ್ಕು ವರ್ಷಗಳ ಕಾಲ ಪತ್ರಿಕೆಯೊಂದಕ್ಕೆ ಬರೆದ ಲೇಖನಗಳ ಸಂಕಲನ.

ಕನ್ನಡ ವಿಮರ್ಶೆಯನ್ನು ಏಕಕಾಲಕ್ಕೇ ಅತ್ತ ಪಶ್ಚಿಮದ ವ್ಯಸನದ ತೆಕ್ಕೆಯಿಂದಲೂ ಮತ್ತು ವೈದಿಕ ಕಾವ್ಯಮೀಮಾಂಸೆಯ ತೊತ್ತಿನ ಅವಸ್ಥೆಯಿಂದಲೂ ಬಿಡುಗಡೆಗೊಳಿಸುವ ಅತ್ಯಂತ ಉದಾತ್ತವೂ ಹಾಗೂ ಸಾಂಸ್ಕೃತಿಕ ತುರ್ತಿನದ್ದೂ ಆದ ಖಚಿತ ಉದ್ದೇಶವು ಗೆಳೆಯ ನಟರಾಜ ಬೂದಾಳರ ' ಹಿಂದಣ ಹೆಜ್ಜೆಯನರಿತಲ್ಲದೆ ..' ಎಂಬ ಈ ವಿಮರ್ಶಾ ಸಂಕಲನದ ಓದಿನಲ್ಲಿ ನಿಚ್ಚಳವಾಗಿದೆ.

ಇಡೀ ಕನ್ನಡ ಸಾರಸ್ವತ ಲೋಕಗ್ರಹಿಕೆಯ ಹುಳುಕುಗಳನ್ನು ಉದ್ದೇಶಿಸಿ ಇಲ್ಸಂಲಿಯ ಲೇಖನಗಳು ಸಂವಾದಿಸುತ್ತವೆ. 

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books