ಹಿಂದಿ ಸಾಹಿತ್ಯ ಸಾಮ್ರಾಟ ಪ್ರೇಮಚಂದ

Author : ಬುರ್ಲಿ ಬಿಂದುಮಾಧವ (ಆಚಾರ್ಯ)

Pages 176

₹ 2.00




Year of Publication: 1953
Published by: ಮಿಂಚಿನ ಬಳ್ಳಿ ಪ್ರಕಾಶನ
Address: ಮಿಂಚಿನ ಬಳ್ಳಿ ಚಾವಡಿ, ಜವಳಿಪೇಟೆ, ಧಾರವಾಡ

Synopsys

ಹಿಂದಿ ಸಾಹಿತ್ಯದ ಸಾಮ್ರಾಟ ಎಂದೇ ಖ್ಯಾತಿಯ ಸಾಹಿತಿ ಪ್ರೇಮಚಂದ ಅವರ ಕುರಿತು ಸವಿಸ್ತಾರ ಕೃತಿಯೇ -ಪ್ರೇಮಚಂದ, ಬುರ್ಲಿ ಬಿಂದುಮಾಧವ ಆಚಾರ್ಯರು ಬರೆದಿದ್ದಾರೆ.ಗಾಂಧೀಜಿಯ ವ್ಯಕ್ತಿತ್ವವನ್ನು ತಮ್ಮ ಸಾಹಿತ್ಯದಲ್ಲಿ ಹಿಡಿದಿಡುವ ಯತ್ನ ಮಾಡಿದ ಪ್ರೇಮಚಂದ, ಸಾಹಿತ್ಯದ ಉದ್ದೇಶವೇನು? ಅದು ಸಾಗುವ ದಿಕ್ಕು ಎಂತಹದ್ದಿರಬೇಕು? ಇಂತಹ ವಿಷಯಗಳೆಡೆ ಗಂಭೀರವಾಗಿ ಚಿಂತನೆ ನಡೆಸಿ ಸಾಮಾಜಿಕ ಹೊಣೆಗಾರಿಕೆಯಡಿ ಸಾಹಿತ್ಯ ರೂಪಿಸಿದವರು ಪ್ರೇಮಚಂದ, ಇತರೆ ಎಲ್ಲ ಸಾಹಿತ್ಯ ಹಾಗೂ ಸಾಹಿತಿಗಳಿಗೆ ಮಾದರಿ. ಆದ್ದರಿಂದ, ಪ್ರೇಮಚಂದರ ಹಿಂದಿ ಸಾಹತ್ಯ ದರ್ಶನ, ಪ್ರೇಮಚಂದರ ಜೀವನ ಹಾಗೂ ಪ್ರೇಮಚಂದರ ಕಥಾ ಸಾಹಿತ್ಯ -ಹೀಗೆ ಮೂರು ವಿಭಾಗಗಳಲ್ಲಿ ಪ್ರೇಮಚಂದ ಅವರನ್ನು, ವ್ಯಕ್ತಿಗತವಾಗಿ, ಸಾಹಿತ್ಯಕವಾಗಿ ವಿವರಿಸಲು ಯತ್ನಿಸಲಾಗಿದೆ.

About the Author

ಬುರ್ಲಿ ಬಿಂದುಮಾಧವ (ಆಚಾರ್ಯ)
(18 August 1899 - 27 October 1981)

ಬುರ್ಲಿ ಬಿಂದುಮಾಧವ (ಆಚಾರ್ಯ) ಅವರು ಸ್ವಾತಂತ್ಯ್ರ ಯೋಧರು. ಮಧ್ವ ತತ್ವ ಅನುಯಾಯಿಗಳು. ತಂದೆ ವೆಂಕಣ್ಣಾ ಚಾರ್ಯರು. ಬಾಗಲಕೋಟೆಯ ಕನ್ನಡ ಶಾಲೆಯಲ್ಲಿ (jಜನನ: 18-08-1899) ಮುಲ್ಕಿ ಪರೀಕ್ಷೆ ಮುಗಿಸಿ, ಧಾರವಾಡದಲ್ಲಿ ಶಿಕ್ಷಕ ತರಬೇತಿ ಪಡೆದು, 1920ರಲ್ಲಿ ಬಿಜಾಪುರ ಜಿಲ್ಲೆಯ ಗಲಗಲಿಯಲ್ಲಿ ಶಿಕ್ಷಕರಾದರು. ಮಹಾತ್ಮಾ ಗಾಂಧಿಯವರ ಪ್ರಭಾವಕ್ಕೊಳಗಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಧಾರವಾಡಕ್ಕೆ ಬಂದರು. ಅಲ್ಲಿ ಸ್ಥಾಪಿತವಾದ ಗಾಂಧೀ ವಿಚಾರದ ರಾಷ್ಟ್ರೀಯ ಶಾಲೆಯಲ್ಲಿ ಉಪಾಧ್ಯಾಯರಾದರು. ಬಡ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಆಶ್ರಮ ಸ್ಥಾಪಿಸಿದರು.  ಉಪ್ಪಿನ ಸತ್ಯಾಗ್ರಹ (1930), ಅರಣ್ಯ ಸತ್ಯಾಗ್ರಹ (1932), ವೈಯಕ್ತಿಕ ಸತ್ಯಾಗ್ರಹ (1941) ಮತ್ತು ಚಲೇಜಾವ್ ಚಳುವಳಿ (1942)ಯಲ್ಲಿದ್ದರು. ಪತ್ನಿ ಪದ್ಮಾವತಿ ಮತ್ತು ಹಿರಿಯ ಮಗ ...

READ MORE

Related Books