ಹೊಸ ಕುಮಾರರಾಮನ ಸಾಂಗತ್ಯ

Author : ಎಂ.ಎಂ. ಕಲಬುರ್ಗಿ

Pages 362

₹ 150.00




Year of Publication: 2000
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ವೀರನಾಗಿ ಹುಟ್ಟಿ, ವೀರನಾಗಿ ಬೆಳೆದು, ವೀರನಾಗಿ ಸತ್ತ ಐತಿಹಾಸಿಕ ವ್ಯಕ್ತಿ ಕುಮಾರರಾಮನ ಬಗ್ಗೆ ಈವರೆಗೆ ೫ ಕೃತಿಗಳು ಹುಟ್ಟಿಕೊಂಡಿವೆ. ಇವುಗಳಲ್ಲಿ ಒಂದಾಗಿರುವ ಈ `ಹೊಸ ಕುಮಾರರಾಮನ ಸಾಂಗತ್ಯ'ವನ್ನು ಸಂಪಾದಿಸಿ ಇಲ್ಲಿ ಸಂಕಲಿಸಲಾಗಿದೆ. ಈ ಕೃತಿಯ ಮೂಲಕರ್ತೃ ಯಾರೆಂಬುದು ಇನ್ನೂ ತಿಳಿದಿಲ್ಲವಾದರೂ `ಹೊಸ ಕುಮಾರರಾಮನ ಸಾಂಗತ್ಯ' ಕಾವ್ಯವು ತನ್ನ ಆಳಕ್ಕೆ ಸಿಕ್ಕಷ್ಟು, ನಿಲುವಿಗೆ ತಕ್ಕಷ್ಟು ವೀರಕುಮಾರ ರಾಮನ ಜೀವನ-ಸಾಹಸವನ್ನು ಸೆರೆಹಿಡಿದಿದೆ. ಮಧ್ಯಕಾಲೀನ ಕರ್ನಾಟಕದ ವೀರಜೀವನವನ್ನು, ಅದಕ್ಕೆ ಪೂರಕವಾದ ಎಲ್ಲ ಮುಖಗಳನ್ನು ಚಿತ್ರಿಸುವ ಮಹತ್ತ್ವದ ಕೃತಿ ಇದಾಗಿದೆ. ಈ ಕೃತಿಯು ಹೊಂದಿರುವ ಅಧ್ಯಾಯಗಳೆಂದರೆ: ದೇವಗಿರಿಯಲ್ಲಿ ಮುಮ್ಮಡಿಸಿಂಗನಿಂದ ರಾಜಸೇವೆ ,ರಾಯದುರ್ಗದಲ್ಲಿ ಮುಮ್ಮಡಿಸಿಂಗ - ಕಂಪಿಲ , ಹೊಸಮಲೆಯಲ್ಲಿ ಕಂಪಿಲ ರಾಜ್ಯಭಾರ , ಗುತ್ತಿಯ ಜಗದಪ್ಪನೊಡನೆ ಯುದ್ಧ , ಕುಮಾರರಾಮ ಓರುಗಲ್ಲ ಪ್ರವೇಶಿಸಿದುದು , ಓರುಗಲ್ಲ ಯುದ್ದ ಬೋಲ್ಲನನ್ನು ತಂದುದು , ಶೂಲದ ಹಬ್ಬ-ರತ್ನಾಜಿ ವ್ಯಾಮೋಹ; ಕುಮ್ಮಟ ದುರ್ಗ ನಿರ್ಮಾಣ ,ನೀರಾಟ-ಚೆಂಡಿನಾಟ-ರತ್ನಿಯ ಮೋಹ , ನೆಲಮಾಳಿಗೆಯಲ್ಲಿ ಕುಮಾರರಾಮ; ನೇಮಿಯ ಕಾಳಗ-ಸೋಲು; ಮಾದಗತಿಯ ಕಾಳಗ - ರಾಮನ ವೀರಮರಣ

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books