ಹೊಸದಾರಿ

Author : ಬಸವರಾಜ ಪಿ. ಡೋಣೂರ

Pages 157

₹ 150.00




Year of Publication: 2008
Published by: ನೀಲಪರ್ವತ ಪ್ರಕಾಶನ
Address: ವಿಶ್ವನಾಥ್ ಕಾಂಪ್ಲೆಕ್ಸ್, ಅರತಳ ರುದ್ರಗೌಡ ಮಾರ್ಗ, ಶ್ರೀನಗರ, ಧಾರವಾಡ- 580003

Synopsys

‘ಹೊಸದಾರಿ’ ಡಾ. ಬಸವರಾಜ ಡೋಣೂರರ ವಿಮರ್ಶಾ ಲೇಖನಗಳ 6ನೇ ಸಂಗ್ರಹ. ನಾಟಕ ಹಾಗೂ ರಂಗಭೂಮಿಯಲ್ಲಿ ಹೆಚ್ಚಿನ ಆಸಕ್ತಿಯಿದ್ದರೂ ಅವರಿವರ ಒತ್ತಾಯದಿಂದ ಮತ್ತು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂದರ್ಭಗಳು ಸೃಷ್ಟಿಸಿದ ಒತ್ತಡದಿಂದ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳ ಕುರಿತು ಬರಹ ಕೈಕೊಳ್ಳಬೇಕಾಯಿತು ಎನ್ನುತ್ತಾರೆ ಬಸವರಾಜ ಡೋಣೂರ.

ಹೊಸದಾರಿ ಒಂದು ದೃಷ್ಟಿಯಿಂದ ಸಂಕೀರ್ಣ ಕೃತಿ ಎಂಬುದು ಡೋಣೂರರ ಮಾತು. ಇಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಸಂಗ್ರಹಗೊಂಡಂತೆ, ಗಿರೀಶ ಕಾರ್ನಾಡ ಹಾಗೂ ಜಿ.ಬಿ. ಸಜ್ಜನರೊಂದಿಗೆ ನಡೆಸಿದ ಸಂದರ್ಶನಗಳೂ ಇವೆ. ಜೊತೆಗೆ ರೇಡಿಯೋದಲ್ಲಿ ಪರಿಚಯಿಸಿದ ಪುಸ್ತಕಗಳ ಕುರಿತ ಕಿರು ಲೇಖನಗಳೂ ಇವೆ.

About the Author

ಬಸವರಾಜ ಪಿ. ಡೋಣೂರ
(26 July 1969)

ಡಾ ಬಸವರಾಜ್ ಪಿ. ಡೋಣೂರು ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ ಗ್ರಾಮದವರು.  1969ರ ಜುಲೈ 26 ರಂದು ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ’ಹಾಪ್‌ಕಿನ್ಸ್ ಮತ್ತು ಬಸವಣ್ಣ’ ವಿಷಯದ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಅಂಡ್ ಲ್ಯಾಂಗ್ವೇಜಸ್ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ. “ಕನ್ನಡ ನಾಟಕ ಮತ್ತು ವಾಸ್ತವಿಕತೆ” ಎಂಬ ...

READ MORE

Related Books