ಹೊಸದಿಕ್ಕು: ರಂಗಭೂಮಿ ಕುರಿತ ಲೇಖನಗಳು

Author : ಎಸ್. ಮಾಲತಿ

Pages 136

₹ 125.00

Buy Now


Year of Publication: 2018
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸಿ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಶಿವಾನಂದ ಸರ್ಕಲ್‌, ಬೆಂಗಳೂರು

Synopsys

ರಂಗಭೂಮಿಯ ಗತ ವೈಭವವನ್ನು ಈ ಪುಸ್ತಕ ಪರಿಚಯ ಪಡಿಸುತ್ತದೆ.ಈ ಪುಸ್ತಕ ದಲ್ಲಿ ಯಕ್ಷಗಾನ, ಗೊಂಬೆಯಾಟ, ಬಯಲಾಟ ಮುಂತಾದ ನನಾ ಪ್ರಾಕಾರ ಕಲೆಗಳನ್ನು ವಿವರಿಸಲಾಗಿದೆ.ರಂಗಭೂಮಿಯ ದಿಗ್ಗಜರ ಬಗ್ಗೆ ಮಾಹಿತಿ ಇದೆ. ಹಬೀಬ್ ತಸ್ವೀರ್ ಹಾಗೂ ಮೋನಿಕಾ ತರ್ ದಂಪತಿ, ಯಕ್ಷಗಾನ ಕಲಾರಂಗದಲ್ಲಿ ಪ್ರಾತಃಸ್ಮರಣೀಯರಾದ ಶಿವರಾಮ ಕಾರಂತರು, ಬಿ.ವಿ. ಕಾರಂತರು, ಇಬ್ರಾಹಿಂ ಅಲ್ವಾಜಿಯಂಥ ದಿಗ್ಗಜರು ರಂಗಭೂಮಿಗೆ ಕೊಟ್ಟ ಕೊಡುಗೆಗಳ ಬಗ್ಗೆ ಮಾಹಿತಿಯಿದೆ. ನಾನಾ ಕಲೆಗಳ ಬಗ್ಗೆ ವಿಶಿಷ್ಟ ಒಳನೋಟಗಳನ್ನು ಈ ಕೃತಿ ಹೊಂದಿದೆ.ಈ ಕೃತಿಯಲ್ಲಿ ಒಟ್ಟು ನಾಲ್ಕು ಅಧ್ಯಾಯಗಳಿವೆ,ಈ ಪುಸ್ತಕ ರಂಗಭೂಮಿ ವಿದ್ಯಾರ್ಥಿಗಳಿಗೆ ಉಪಯಕ್ತವಾಗಿದೆ.

About the Author

ಎಸ್. ಮಾಲತಿ
(01 May 1952 - 02 April 2019)

ರಂಗಕರ್ಮಿ, ಬರಹಗಾರ್ತಿ ಎಸ್. ಮಾಲತಿ ಅವರು ಜನಿಸಿದ್ದು 1952 ಮೇ 1ರಂದು ಶಿವಮೊಗ್ಗದಲ್ಲಿ. ತಾಯಿ ಉಮಾ ಶೇಷಗಿರಿ ಪೈ, ತಂದೆ ಶೇಷಗಿರಿ ಪೈ. ದೆಹಲಿಯ ಎನ್.ಎಸ್.ಡಿ ಗರಡಿಯಲ್ಲಿ ಬೆಳೆದುಬಂದವರು.  ಇವರು ಬರೆದ ನಾಟಕಗಳೆಂದರೆ ಎರಡು ಕಿರು ನಾಟಕಗಳು, ಶೀಮ ಕಥಾನಕ, ದಲಿತಲೋಕ. ಇವರು ಅನುವಾದಿಸಿದ ನಾಟಕಗಳು ಜನತೆಯ ಶತ್ರು, ರೊಷೊಮನ್, ಒಂದು ಪಯಣದ ಕಥೆ, ಹೊಸದಿಕ್ಕು. ಇವರ ಬರಹಗಳು ನಾಟಕಕ್ಕೆ ಮಾತ್ರ ಸೀಮಿತವಾಗಿರದೇ ಕಾವ್ಯದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕ್ಷಣಿಕವಲ್ಲದ ಕ್ಷಣಗಳು, ಹೇಳಬೇಕೆನಿಸಿದ್ದು, ನನ್ನ ಪ್ರಿಯತಮನ ಬಾಳು, ಭಾವಕೋಶ ಇವರ ಪ್ರಮುಖ ಕವನ ಸಂಕಲನಗಳು. ಸುಮಾರು 42ಕ್ಕೂ ...

READ MORE

Related Books