ಎಚ್ಚೆಸ್ವಿ : ಸಮಸ್ತ ನಾಟಕ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 620

₹ 500.00




Year of Publication: 2018
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ

Synopsys

ಕವಿ ಎಂದು ಜನಪ್ರಿಯರಾಗಿರುವ ಎಚ್. ಎಸ್. ವೆಂಕಟೇಶಮೂರ್ತಿ ಅವರು ಉತ್ತಮ ನಾಟಕಕಾರರೂ ಹೌದು. ಅವರ ನಾಟಕಗಳು ರಂಗದ ಮೇಲೆಯೂ ಜನಪ್ರಿಯವಾಗಿವೆ. ವೆಂಕಟೇಶಮೂರ್ತಿ ಅವರು ರಚಿಸಿದ ಎಲ್ಲ ನಾಟಕಗಳನ್ನು ಈ ಸಮಸ್ತ ಆವೃತ್ತಿಯಲ್ಲಿ ಸೇರಿಸಲಾಗಿದೆ. ಹೆಜ್ಜೆಗಳು (1981), ಒಂದು ಸೈನಿಕ ವೃತ್ತಾಂತ (1993), ಕತ್ತಲೆಗೆ ಎಷ್ಟು ಮುಖ (1999), ಚಿತ್ರಪಟ (1999), ಉರಿಯ ಉಯ್ಯಾಲೆ (1999), ಅಗ್ನಿವರ್ಣ'(1999) ಸ್ವಯಂವರ ನಾಟಕಗಳು ಈ ಸಮಗ್ರ ಆವೃತ್ತಿಯಲ್ಲಿ ಸೇರಿವೆ.

 

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books