ಹುಚ್ಚುತನವೇ ಅನುಗ್ರಹ: ನೀಷೆ

Author : ಟಿ.ಎನ್. ವಾಸುದೇವ ಮೂರ್ತಿ

Pages 128

₹ 85.00




Year of Publication: 2010
Published by: ಅಹರ್ನಿಶಿ ಪ್ರಕಾಶನ
Address: ಪ್ರಶಾಂತ ನಿಲಯ, 4ನೇ ಕ್ರಾಸ್, ವಿದ್ಯಾನಗರ್, ಶಿವಮೊಗ್ಗ, ಕರ್ನಾಟಕ
Phone: 9449174662

Synopsys

‘ಹುಚ್ಚುತನವೇ ಅನುಗ್ರಹ: ನೀಷೆ’ ಜರ್ಮನಿಯ ತತ್ತ್ವಜ್ಞಾನಿ, ಸಾಂಸ್ಕೃತಿಕ ಚಿಂತಕ, ಕವಿ, ಬರಹಗಾರ ಫೆಡ್ರಿಕ್ ನೀಷೆ ಅವರ ಪರಿಚಯಾತ್ಮಕ ಕೃತಿ. ಲೇಖಕ ಟಿ.ಎನ್. ವಾಸುದೇವಮೂರ್ತಿ ಈ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಗೆ ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ ಅವರು ಬೆನ್ನುಡಿ ಬರೆದಿದ್ದಾರೆ.

ಕನ್ನಡ ಸಾಹಿತ್ಯ ಲೋಕಕ್ಕೂ, ವೈಚಾರಿಕ ಲೋಕಕ್ಕೂ ಅತ್ಯಂತ ಅಗತ್ಯವಾಗಿದ್ದ ನೀಷೆಯ ಬಗೆಗಿನ ಒಂದು ಒಳ್ಳೆಯ ಕೃತಿಯನ್ನು ವಾಸುದೇವಮೂರ್ತಿ ಕೊಟ್ಟಿದ್ದಾರೆ ಎನ್ನುತ್ತಾರೆ ಅನಂತಮೂರ್ತಿ. ಹೆಚ್ಚು ತಿಳಿಯಬೇಕೆಂಬ ಆಸೆ ಹುಟ್ಟಸುವಂತ ನೀಷೆಯ ಮೊದಲ ಓದು ಇಲ್ಲಿದೆ. ಕ್ರೈಸ್ತಧರ್ಮಕ್ಕೆ ವಿರೋಧವಾಗಿ ನಿಂತ ನಿಷ್ಠುರನಾದ ಈ ನೀಷೆ, ಪಾಶ್ಚಾತ್ಯ ಪ್ರಪಂಚದಲ್ಲಿ ಒಂದು ಹೊಸ ವೈಚಾರಿಕತೆಯನ್ನು ಹುಟ್ಟಿಸಿದವರು. ಎಲ್ಲ ಭಾವುಕ ಸುಳ್ಳುಗಳಿಂದ, ಅನುಭಾವದ ವಂಚನೆಗಳಿಂದ, ಆಧ್ಯಾತ್ಮಿಕ ಕಲ್ಪನೆಗಳಿಂದ ಹೊರ ಬಂದವನು ಈ ನೀಷೆ. ನೀಷೆಯ ಕುರಿತಾದ ಒಂದು ಪರಿಚಯಾತ್ಮಕ ಕೃತಿ ಹುಚ್ಚುತನವೇ ಅನುಗ್ರಹ: ನೀಷೆ.

About the Author

ಟಿ.ಎನ್. ವಾಸುದೇವ ಮೂರ್ತಿ
(30 December 1974)

ಟಿ.ಎನ್.ವಾಸುದೇವ ಮೂರ್ತಿ ಅವರು ಕಿ.ರಂ.ನಾಗರಾಜ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಅಲ್ಲಮ ಪ್ರಭುವಿನ ವಚನಗಳ ದಾರ್ಶನಿಕ ಮರುಚಿಂತನೆಯ ವಿಭಿನ್ನ ಸ್ವರೂಪಗಳು ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಶಸ್ತಿ ಸಂದಿದೆ. ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು ಪಡೆದ ಮೇಲೆ ಬೆಂಗಳೂರಿನ ಹಲವು ಪ್ರಮುಖ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ನ್ಯಾಷನಲ್  ಕಾಲೇಜು, ಜೈನ್ ವಿಶ್ವವಿದ್ಯಾಲಯ ಕಾವ್ಯಮಂಡಲ ಮೊದಲಾದ ಕನ್ನಡ ಸ್ನಾತಕೋತ್ತರ ಕೇಂದ್ರಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಎಂ.ಎ. ಹಾಗೂ ಎಂ.ಫಿಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಓಶೋ ನೇರ ಶಿಷ್ಯರಾದ ಸ್ವಾಮಿ ಆನಂದ್ ಪ್ರಭಾವದಿಂದ ದೀಕ್ಷೆ ...

READ MORE

Related Books