ಹುಡುಕಾಟವನ್ನು ನಿಲ್ಲಿಸದಿರೋಣ

Author : ಎಸ್. ಎನ್. ಬಾಲಗಂಗಾಧರ

Pages 156

₹ 115.00




Year of Publication: 2012
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ವಸಾಗತುಶಾಹಿ, ವಸಾಹತುಪ್ರಜ್ಞೆ ಮತ್ತು ನಿರ್ವಸಾಹತೀಕರಣ- ಈ ಮೊದಲಾದ ವಿಚಾರಗಳು ಕಳೆದ ಹಲವಾರು ವರ್ಷಗಳಿಂದ ಕನ್ನಡದಂಥ ಭಾಷೆಗಳಲ್ಲಿ ಚರ್ಚೆಗೊಳಗಾಗುತ್ತಿವೆ. ಆದರೆ, ಈ ಚರ್ಚೆಗಳಲ್ಲಿ ಅಡಗಿರುವ ಪ್ರಮುಖ ಅಪಾಯ- ಹಲವೊಮ್ಮೆ ವಸಾಹತೀಕರಣಗೊಂಡ ಚೌಕಟ್ಟುಗಳಿಂದಲೇ ಪ್ರೇರಿತವಾಗಿ, ಅವೇ ಸಿದ್ಧಾಂತಗಳನ್ನಾಧರಿಸಿ ಈ ಚರ್ಚೆಗಳು ನಡೆಯುವುದು. ಅಂಥ ಹಾದಿಯಿಂದ ಹೊರಬಂದು ಬೇರೆಯೇ ದಿಕ್ಕಿನಿಂದ ವಸಾಹತೀಕರಣದ ಪ್ರಕ್ರಿಯೆಯನ್ನು ಶೋಧಿಸುವ ಕೆಲಸವನ್ನೀಗ ಬಾಲಗಂಗಾಧರ ಅವರು ನಡೆಸುತ್ತಿದ್ದಾರೆ. ಅಂಥ ವಿಚಾರಧಾರೆಯನ್ನು ಮಂಡಿಸುವ ಅವರ ದೀರ್ಘಲೇಖನವೊಂದರ ಕನ್ನಡಾನುವಾದ ಇಲ್ಲಿ ಸಂಕಲಿತಗೊಂಡಿದೆ. ಸಮಾಜಶಾಸ್ತ್ರ, ಸಂಸ್ಕೃತಿ ಅಧ್ಯಯನ ಮತ್ತು ನಾಗರಿಕತೆಗಳ ತುಲನೆ- ಮೊದಲಾದ ವಿಷಯಗಳಲ್ಲಿ ಆಸಕ್ತರಾದ ವಿದ್ವಾಂಸರು ಮತ್ತು ಆಸಕ್ತರು ಓದಲೇಬೇಕಾದ ಪುಸ್ತಕ ಇದು.

About the Author

ಎಸ್. ಎನ್. ಬಾಲಗಂಗಾಧರ

ಭಾರತೀಯ ಸಂಸ್ಕೃತಿ ಲೇಖಕರಾದ ಎಸ್. ಎನ್. ಬಾಲಗಂಗಾಧರ ಅವರು ಪ್ರಸ್ತುತ ಜಾಗತಿಕ ಮತ್ತು ಭಾರತೀಯ ಬೌದ್ಧಿಕ ವಲಯದಲ್ಲಿ ಕೇಳಿಬರುತ್ತಿರುವ ಬಹುಮುಖ್ಯ ಹೆಸರು. ಭಾರತದ ಸಂಸ್ಕೃತಿಗಳ ವೈಜ್ಞಾನಿಕ ಅಧ್ಯಯನಕ್ಕೆ ಒಂದು ಹೊಸ ಒಳನೋಟವನ್ನು  ನೀಡುತ್ತಾ ಬಂದಿದ್ದಾರೆ. ಮೂಲತಃ ಬೆಂಗಳೂರಿವರಾದ ಪ್ರೊ. ಎಸ್. ಎನ್. ಬಾಲಗಂಗಾಧರ, ಪ್ರಸ್ತುತ ಬೆಲ್ಜಿಯಂ ದೇಶದ ಘೆಂಟ್ ವಿಶ್ವದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿದ್ದು, 'ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ' ಭಾಗದ ನಿರ್ದೇಶಕರಾಗಿದ್ದಾರೆ. ಇವರು ರಿಲಿಜನ್, ಪಾಶ್ಚಾತ್ಯ ರಾಜಕೀಯ ಚಿಂತನೆಗಳು, ಸೆಕ್ಯುಲರಿಸಂ, ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು, ವಸಾಹತುಶಾಹಿ ಪ್ರಜ್ಞೆ, ವಸಾಹತೋತ್ತರ ಚಿಂತನೆಗಳು, ಇತಿಹಾಸ, ಭಾರತೀಯ ಕಾನೂನು ವ್ಯವಸ್ಥೆ, ಇತ್ಯಾದಿ ...

READ MORE

Related Books