ಹುಣಿಸೆ ಮರದ ಕತೆ

Author : ಕೆ. ನಲ್ಲತಂಬಿ

Pages 176

₹ 150.00




Published by: ಲಂಕೇಶ್ ಪ್ರಕಾಶನ
Phone: 080- 266676427

Synopsys

ತಮಿಳು ಕಾದಂಬರಿ ಕ್ಷೇತ್ರದಲ್ಲಿ ಹೊಸ ನಿರೂಪಣಾ ತಂತ್ರದ ಮೂಲಕ ಹೆಸರಾಗಿರುವ ಸುಂದರ ರಾಮಸ್ವಾಮಿಯವರ ಈ ಕಾದಂಬರಿಯನ್ನು ಕೆ, ನಲ್ಲತಂಬಿ ಕನ್ನಡಕ್ಕಿಳಿಸಿದ್ದಾರೆ. ಒಂದು ಮರದೊಳಗಿನ ಆತ್ಮವನ್ನು, ಉಸಿರಾಟವನ್ನು, ಅದರ ಘನತೆಯನ್ನು ಆಲಿಸಿ ಬರದಂತಿದೆ ಈ ಕಾದಂಬರಿ, ಮನುಷ್ಯನ ರಾಜಕೀಯ ಪೈಪೋಟಿ, ಹಗೆತನ, ಕುತಂತ್ರಗಳ ತಿಕ್ಕಾಟದಲ್ಲಿ ಹೇಗೆ ಒಂದು ಮರ ಇಲ್ಲವಾಗುತ್ತದೆ ಎಂದು ಹೇಳುವ ಮೂಲಕ, ಆಧುನಿಕ ಅಭಿವೃದ್ಧಿ ರಾಜಕಾರಣವನ್ನು ಸರಳ ತಂತ್ರದ ಮೂಲಕ ಚರ್ಚಿಸುತ್ತಾರೆ. ಅಂತಿಮವಾಗಿ ಒಂದು ಮರವನ್ನು ಸಾಯಿಸುವ ಮೂಲಕ ಒಂದು ಸಮಾಜ ತನಗೆ ತಾನೇ ಸಾಯುತ್ತಾ ಹೋಗುತ್ತದೆ. ಕತೆಯ ಹೆಗ್ಗಳಿಕೆಯೇ ಸರಳ ನಿರೂಪಣೆ, ಮುಗ್ಧ, ಸಹಜ ಮನುಷ್ಯ ಭಾಷೆಯಲ್ಲಿ ಒಂದು ಮರದ ಹಿನ್ನೆಲೆ ಮುನ್ನೆಲೆಗಳನ್ನು ಕಟ್ಟಿಕೊಡುತ್ತಾ ಅದನ್ನು ಸುತ್ತುವರಿದಿರುವ ಊರು, ನಗರ ಜನರ ಕತೆಗಳನ್ನು ಕಾದಂಬರಿಕಾರ ಹೇಳುತ್ತಾನ. ಕಥನ ತಂತ್ರ ಅತ್ಯಂತ ಹೃದಯ ಸ್ಪರ್ಶಿಯಾದುದು ಮಾತ್ರವಲ್ಲ, ಕಾದಂಬರಿ ಓದುತ್ತಾ ಹೋದ ಹಾಗೆ ಹುಣಿಸೆಮರ ನಮ್ಮ ಭಾವ ಪ್ರಪಂಚದಲ್ಲಿ ಉದ್ದಗಲಕ್ಕೆ ಬೆಳೆಯುತ್ತಾ ಹೋಗುತ್ತದೆ.

About the Author

ಕೆ. ನಲ್ಲತಂಬಿ

ಕೆ. ನಲ್ಲತಂಬಿ ತಮಿಳು ಮತ್ತು ಕನ್ನಡ ಸಾಹಿತ್ಯಕ್ಕೆ ಕೊಂಡಿಯಾಗಿ ಪ್ರಮುಖರು. ಮನೆ ಭಾಷೆ ತಮಿಳು. ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಅಸ್ತಿತ್ವ  ಕಂಡು ಕೊಂಡವರು. ಅವರ ಪೂರ್ಣ ಹೆಸರು ಕಾಳಿಮುತ್ತು ನಲ್ಲತಂಬಿ. ಕನ್ನಡದಿಂದ ತಮಿಳಿಗೆ, ತಮಿಳಿನಿಂದ ಕನ್ನಡಕ್ಕೆ ಹಲವಾರು ವಿಶಿಷ್ಟ ಕಾದಂಬರಿಗಳನ್ನು ಅನುವಾದಿಸಿ, ತಮ್ಮ ಭಾಷಾಂತರ ಕುಶಲತೆಯಿಂದ ಕನ್ನಡ ಮತ್ತು ತಮಿಳು ಸಾಹಿತ್ಯಾಸಕ್ತರಿಗೆ ಎರಡೂ ಭಾಷೆಗಳ ಸೊಗಡನ್ನು ಉಣ್ಣಿಸುತ್ತಿದ್ದಾರೆ. ಅರ್ಧನಾರೀಶ್ವರ, ಹುಣಿಸೆಮರದ ಕಥೆ, ಹಳ್ಳ ಬಂತು ಹಳ್ಳ, ಯಾದ್ವಶೇಮ್, ಕಡುಗು ವಾಂಗಿ ವಂದವಳ್ (ಸಾಸಿವೆ ತಂದವಳು) ಅವರ ಅತ್ಯಂತ ಗಮನಾರ್ಹ ಅನುವಾದಿತ ಕೃತಿಗಳು. ‘ಕೋಶಿ’ಸ್‌ ಕವಿತೆಗಳು’ ಅವರ ಸ್ವತಂತ್ರ ಕವನ ಸಂಕಲನ. ...

READ MORE

Related Books