ಹುಣ್ಣಿಮೆ ಚಂದಿರ

Author : ಟಿ.ಡಿ.ರಾಜಣ್ಣ ತಗ್ಗಿ

Pages 164

₹ 320.00




Year of Publication: 2021
Published by: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್
Address: #176, 12ನೇ ಮುಖ್ಯರಸ್ತೆ, ಅಗ್ರಹಾರದಾಸರಹಳ್ಳಿ, ಮಾಗಡಿ ಮುಖ್ಯರಸ್ತೆ, ಬೆಂಗಳೂರು- 560079

Synopsys

ನೊಬೆಲ್ ಪ್ರಶಸ್ತಿ ವಿಜೇತರ ಕತೆಗಳ ಕನ್ನಡಾನುವಾದ ‘ಹುಣ್ಣಿಮೆ ಚಂದಿರ’. ಡಾ.ಟಿ.ಡಿ. ರಾಜಣ್ಣ ತಗ್ಗಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಹುಣ್ಣಿಮೆ ಚಂದಿರ ಈ ಕೃತಿಯು ಭಾರತೀಯ ಲೇಖಕನೂ ಸೇರಿದಂತೆ ಜಗತ್ತಿನ ಬೇರೆ ಬೇರೆ ದೇಶದ ನೊಬೆಲ್ ಪ್ರಶಸ್ತಿ ವಿಜೇತರ ಪ್ರಸಿದ್ಧ ಕತೆಗಳ ಸಂಕಲನ. ಇಡೀ ಜಗತ್ತಿನಲ್ಲಿಯೇ ಸಾಹಿತ್ಯಕ್ಕೆ ಕೊಡಮಾಡುವ ಅತಿ ಹೆಚ್ಚು ಮೌಲ್ಯವುಳ್ಳ ಪ್ರಶಸ್ತಿಯೆಂದರೆ ಅದು ನೊಬೆಲ್ ಪ್ರಶಸ್ತಿ. ನೊಬೆಲ್ ಪ್ರಶಸ್ತಿ ಎಂಬ ನಾಮಮುದ್ರೆಯೆ ಆ ಲೇಖಕನ ಕೃತಿಗಳನ್ನು ಕುತೂಹಲದಿಂದ ಓದುವ ವರ್ಗವನ್ನು ಸೃಷ್ಟಿಸುತ್ತದೆ. ಅಲ್ಲದೆ ಈ ಪ್ರಶಸ್ತಿಗಳಿಂದ ಅವರ ಕೃತಿಗಳು ಬೆರಗುಗಣ್ಣಿನಿಂದ ನೋಡುವ ಅಮೂಲ್ಯ ರತ್ನಗಳಾಗುತ್ತವೆ. ಮೌಲಿಕವಾದ ಜೀವನಾನುಭವ ಮತ್ತು ಆದರ್ಶಗಳಿಗೆ ಅಕ್ಷರ ರೂಪವನ್ನು ಕೊಟ್ಟು ಸಾರ್ಥಕ ಬದುಕಿನೆಡೆಗೆ ಮನುಷ್ಯರನ್ನು ಸೆಳೆಯುವುದು ಈ ಲೇಖಕರ ಪ್ರಮುಖ ಆಶಯ. ಯಾವುದೇ ಕತೆಯಾಗಲಿ ಅಥವಾ ಕೃತಿಯಾಗಲಿ ಅದು ತನ್ನೊಳಗಿನ ಮೌಲಿಕಾಶಯದಿಂದ ಮತ್ತು ನಿರೂಪಣಾ ವಿಧಾನದಿಂದಲೇ ಪ್ರಾಮುಖ್ಯತೆ ಪಡೆಯುತ್ತದೆ. ಅಂತಹ ಮೌಲಿಕಾಶಯ ಮತ್ತು ನಿರೂಪಣೆಯನ್ನು ಹೊಂದಿರುವ ಈ ಕತೆಗಳು ಎಂದೆಂದಿಗೂ ಅಮೂಲ್ಯ ರತ್ನಗಳೆ.

About the Author

ಟಿ.ಡಿ.ರಾಜಣ್ಣ ತಗ್ಗಿ

ಕನ್ನಡದ ಯುವ ಸಂಶೋಧಕ, ಅನುವಾದಕ ಟಿ.ಡಿ. ರಾಜಣ್ಣ ತಗ್ಗಿ ಅವರು ಮೂಲತಃ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ತಗ್ಗಿಹಳ್ಳಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ, ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದಿರುವ ಅವರು ಮದರಾಸು ವಿಶ್ವವಿದ್ಯಾಲಯ ಹಾಗೂ ಜೈನ್ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.  ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮೌಲಿಕ ಪ್ರಬಂಧಗಳನ್ನು ಮಂಡಿಸಿರುವ ರಾಜಣ್ಣ ತಗ್ಗಿ ಅವರು ಮದರಾಸು , ಬೆಂಗಳೂರು ಮತ್ತು ಗುಲಬರ್ಗಾ ಆಕಾಶವಾಣಿ ಕೇಂದ್ರಗಳಲ್ಲಿಯೂ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.   ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಭಾಷೆ ಬಲ್ಲವರಾಗಿದ್ದು, ...

READ MORE

Related Books