ಹುರುಳಿ ಭೀಮರಾವ್

Author : ಬಿ. ಜನಾರ್ದನ ಭಟ್

Pages 56

₹ 45.00




Year of Publication: 2018
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರದ ಕನ್ನಡ ಸಂಘವು ಪ್ರಕಟಿಸುತ್ತಿರುವ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 230 ನೇ ಕೃತಿ ಹುರುಳಿ ಭೀಮರಾವ್. ಆದ್ಯ ಪತ್ರಕರ್ತ ವಿಶಿಷ್ಟ ಸಾಹಿತಿ ಹುರುಳಿ ಭೀಮರಾವ್ ದಕ್ಷಿಣಕನ್ನಡ ಜಿಲ್ಲೆಯ ಆದ್ಯ ಪತ್ರಕರ್ತರೂ, ಹಾಸ್ಯ ಸಾಹಿತಿಗಳೂ, ಕಾದಂಬರಿಕಾರರೂ ಆದ ಹುರುಳಿ ಭೀಮರಾಯರು ದಕ್ಷಿಣ ಕನ್ನಡದ ನವೋದಯದ ಒಬ್ಬ ಮುಖ್ಯ ಸಾಹಿತಿಗಳು. ನವೋದಯ ಕಾಲದ ಪ್ರಸಿದ್ದ ಪತ್ರಿಕೆ 'ಕಂಠೀರವ'ದ ಸಂಪಾದಕ ರಾಗಿ, 'ಮುರುಕು ದಂಬೂಕು' (೧೯೪೭) ಮತ್ತು 'ಹಾಸನ್‌ಟೋಪಿ' (೧೯೫೨) ಎಂಬ ಪ್ರಸಿದ್ಧ ಕಾದಂಬರಿಗಳ ಲೇಖಕರಾಗಿ ಅವರ ಹೆಸರು ಉಳಿಯುತ್ತದೆ. ಭೀಮರಾವ್‌ ಬದುಕು-ಬರೆಹಗಳನ್ನು ಕುರಿತ ಪರಿಚಯಾತ್ಮಕ ಕೃತಿ.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Related Books