‘ಹೈದರಾಬಾದಿನ ವೀರ ಕನ್ನಡಿಗ- ಬಿ.ಜಿ. ಚಿಮ್ಮಲಗಿ’ ಶ್ರೀನಿವಾಸ ಹಾವನೂರು ಅವರು ರಚಿಸಿರುವ ಬಿ.ಜಿ. ಚಿಮ್ಮಲಗಿ ಅವರ ಜೀವನ ಚರಿತ್ರೆ. ಕೃತಿ ರಚನೆಯ ಕುರಿತು ಮಾತನಾಡುತ್ತಾ ಬಿ.ಜಿ. ಚಿಮ್ಮಲಗಿಯವರ ವೈಯಕ್ತಿಕ ಪರಿಚಯ ನನಗಿರಲಿಲ್ಲ. ಆದರೆ ಅವರು ತಮ್ಮ ಇತಿ ವೃತ್ತಾಂತವನ್ನು ಟಿಪ್ಪಣಿ ರೂಪದಲ್ಲಿ ಬರೆದಿಟ್ಟಿದ್ದ ಕಾಗದಗಳ ಕಟ್ಟು ಸಿಕ್ಕಿತು. ಜೊತೆಗೆ ಅವರನ್ನು ಬಲ್ಲ ಅನೇಕ ಜನ ಹಿರಿಯರನ್ನು ಭೆಟ್ಟಿಯಾಗಿ ಮಾಹಿತಿ ಸಂಗ್ರಹಿಸಿದ ಆಧಾರದ ಮೇಲೆ ಇದನ್ನು ಬರೆದೆ.ವಿಶೇಶತಃ ಅವರ ರಾಘವೇಂದ್ರರಿಂದ ಸಾಕಷ್ಟು ಸಹಾಯವನ್ನು ಪಡೆದದ್ದಾಗಿದೆ ಎಂದಿದ್ದಾರೆ ಶ್ರೀನಿವಾಸ ಹಾವನೂರು.
ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...
READ MORE