ಇದು ಕಥಾಕಾಲ

Author : ಗಂಗಾವತಿ ಪ್ರಾಣೇಶ್

Pages 192

₹ 150.00




Year of Publication: 2017
Published by: ಸಾಹಿತ್ಯ ಪ್ರಕಾಶನ
Address: ಕೊಪ್ಪೀಕರ್ ರಸ್ತೆ, ನ್ಯು ಹುಬ್ಬಳ್ಳಿ, ಹುಬ್ಬಳ್ಳಿ-580020.
Phone: 0836-2367676

Synopsys

ಗಂಗಾವತಿ ಪ್ರಾಣೇಶ ಅವರು ಹಾಸ್ಯಕ್ಕೆ ಹೆಸರುವಾಸಿಯಾದವರು. ಹಾಸ್ಯದಲ್ಲಿ ಹಲವು ಒಳಹೊಳಹು ಇರುವ ದೃಷ್ಟಾಂತಗಳನ್ನು ಹೇಳುವುದೂ ಅವರ ಜನಪ್ರಿಯತೆಗೆ ಕಾರಣ. ಅಂಥ ದೃಷ್ಟಾಂತಗಳ ಸಂಗ್ರಹವನ್ನು ಅಕ್ಷರ ಲೋಕಕ್ಕೆ ಅರ್ಪಿಸಿದ್ದಾರೆ. ಪ್ರಾಣೇಶ ಅವರು ಹರಿಕಥೆ, ಪುರಾಣ ಪ್ರವಚನಗಳನ್ನು ಕೇಳಿ, ಪ್ರಭಾವಿತರಾದವರು. ಜೀವನದೊಳಗಿನ ಹಾಸ್ಯರಸ ಹೇಗೆ ಅಂತಃಕರಣಕ್ಕೆ ತಾಗುತ್ತದೆ ಎನ್ನುವುದನ್ನು ಹತ್ತಿರದಿಂದ ಬಲ್ಲವರು.  ನಾಲ್ಕು ಭಾಗಗಳಲ್ಲಿ ಪ್ರಕಟವಾದ ಈ ಪುಸ್ತಕ ಸನ್ನಡತೆಯಲ್ಲಿ ನಡೆಯಲು ಬಯಸುವ ಯುವಕರಿಗೆ ಉತ್ತಮ ಕೈಪಿಡಿ ಕೂಡ.

About the Author

ಗಂಗಾವತಿ ಪ್ರಾಣೇಶ್
(08 September 1961)

ಪ್ರಾಣೇಶ್ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಸೆಪ್ಟಂಬರ್ 8, 1961ರಲ್ಲಿ ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಯಲಬುರ್ಗಿಯಲ್ಲೂ, ಬಿ.ಕಾಂ. ಪದವಿಯನ್ನು ಗಂಗಾವತಿಯಲ್ಲೂ ಪೂರೈಸಿದರು. ಪ್ರಾಣೇಶ್ ಅವರ ತಂದೆ ಸ್ವಾತಂತ್ರ್ಯ ಯೋಧ  ಬಿ.ವೆಂಕೋಬಾಚಾರ್ಯರು, ಶಾಲಾ ಶಿಕ್ಷಕರಾಗಿದ್ದರು. ತಾಯಿ ಸತ್ಯವತಿ ಬಾಯಿ. ತಾಯಿಯಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡವರು.  ಹಾಸ್ಯಕ್ಕಷ್ಟೇ ಸೀಮಿತವಾದ ಪ್ರಾಣೇಶ್ ನಗಿಸುವವನ ನೋವುಗಳು, ನಗ್ತಾ ನಲಿ ಅಳ್ತಾ ಕಲಿ, ಪಂಚ್‌ ಪಕ್ವಾನ್ನ ಮುಂತಾದ ಪುಸ್ತಕಗಳನ್ನು ರಚಿಸಿದ್ದಾರೆ. ಜೊತೆಗೆ ಹಲವಾರು ಕ್ಯಾಸೆಟ್, ಸಿಡಿಗಳನ್ನೂ ಹೊರತಂದಿದ್ದಾರೆ. ಯೂ ಟ್ಯೂಬ್ ನಂತಹ ಅಂತರ್ಜಾಲ ಮಾಧ್ಯಮಗಳಲ್ಲಿ ಅವರ ಹಲವಾರು ಕಾರ್ಯಕ್ರಮಗಳ ತುಣುಕುಗಳು ನಿರಂತರವಾಗಿ ಜನಪ್ರೀತಿಯನ್ನು ಸಂಪಾದಿಸುತ್ತಿವೆ. ...

READ MORE

Related Books