ಇದು ಬರಿ ಮಣ್ಣಲ್ಲ

Author : ಸಹನಾ ಕಾಂತಬೈಲು

Pages 120

₹ 120.00

Buy Now


Year of Publication: 2021
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ, ಕಂಟ್ರಿಕ್ಲಬ್ ಎದುರು, ವಿದ್ಯಾನಗರ, ಶಿವಮೊಗ್ಗ

Synopsys

‘ಇದು ಬರಿ ಮಣ್ಣಲ್ಲ’ ಲೇಖಕಿ ಸಹನಾ ಕಾಂತಬೈಲು ಅವರ ಲಲಿತ ಪ್ರಬಂಧಗಳ ಸಂಕಲನ. ‘ಸೂಕ್ಷ್ಮಮತಿಯಾದ ಗೃಹಣಿಯೊಬ್ಬಳು ಸುತ್ತಲಿನ ನಿಸರ್ಗದ ಮತ್ತು ಮಾನವ ಬದುಕಿನ ದೈನಿಕ ಆಗುಹೋಗುಗಳನ್ನು ಸೂಕ್ಷ್ಮವಾಗಿಯೂ, ವಿಸ್ಮಯದಿಂದಲೂ ಅವಲೋಕಿಸುತ್ತ, ತನ್ನ ಸ್ಪಂದನೆಯನ್ನು ಸರಳವಾಗಿ, ಮುಗ್ಧವಾಗಿ ದಾಖಲಿಸುವ’ ಬರೆಹಗಳಿವು ಎನ್ನುತ್ತಾರೆ ಲೇಖಕ ರಹಮತ್ ತರೀಕೆರೆ.

ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಅವರು ಇಲ್ಲಿರುವ ನಿಸರ್ಗದ ಜತೆಗಿನ ಒಡನಾಟವು ಚೇತೋಹಾರಿಯಾಗಿದ್ದರೆ, ಸಮಾಜದ ಮುಖಾಮುಖಿಯು ಇಕ್ಕಟ್ಟು,ವೇದನೆ, ಸಂಘರ್ಷ, ವೈರುಧ್ಯಗಳಿಂದ ಕೂಡಿದೆ. ಜೊತೆಗೆ ಬೆಕ್ಕು-ಹಸು ಸಾಕುವ, ಹಾಲು ಕರೆವ, ಉಪ್ಪಿನಕಾಯಿ ಹಾಕುವ, ಮೊಸರು ಕಡೆವ, ಅಡುಗೆ ಮಾಡುವ ಮನೆಯೊಳಗಿನ ವರ್ತುಲವೂ ಇದೆ: ದನ ಮಾರುವ, ದೇಹದಾನ-ಪಶುದಾನ ಮಾಡುವ, ಅರಣ್ಯನಾಶ ತಡೆವ ಮನೆಯಾಚೆಗಿನ ವರ್ತುಲವೂ ಇದೆ. ಇವೆರಡೂ ಪರಸ್ಪರ ಬೆರೆಯುತ್ತ ಹೆಣ್ಣೊಬ್ಬಳ ಬಾಳ ಮೀಮಾಂಸೆಯನ್ನೂ ಕಟ್ಟುತ್ತವೆ’ ಎನ್ನುತ್ತಾರೆ.

ಅನುಭವವನ್ನು ಭಾರವಿಲ್ಲದೆ ಸಹಜವಾಗಿ ನಿರಾಯಾಸವಾಗಿ ಮಂಡಿಸುವ ಕ್ರಮದಲ್ಲೇ ಚಿಂತನೆಯನ್ನು ಹೊಳೆಯಿಸುವ ಬರೆಹಗಳಿವು. ‘ದೇವರಿಗೆ ಹೂವು ಕೊಯ್ಯುತ್ತ, ಮೊಸರು ಕಡೆಯುತ್ತ ಬೆಣ್ಣೆ ತೆಗೆಯುತ್ತ ವರ್ಷಗಳು ಉರುಳಿದ್ದು ಗೊತ್ತೇ ಆಗಲಿಲ್ಲ’ ಎಂಬ ಸಹಜ ಸರಳ ವಾಕ್ಯವು ಹೆಣ್ಣಿನ ದಿನಚರಿಯನ್ನು ಮಾತ್ರವಲ್ಲ, ಸಮಾಜದ ಮನೋಭಾವದ ಬಗ್ಗೆಯೂ ಹೇಳುತ್ತದೆ. ಬದುಕಿನಲ್ಲಿ ಸಂಭವಿಸುತ್ತಿರುವ ಪಲ್ಲಟಗಳನ್ನು ಹಳಹಳಿಕೆ ಮತ್ತು ವಿಷಾದವಿಲ್ಲದೆ ಇಲ್ಲಿ ಹಿಡಿದುಕೊಡಲಾಗಿದೆ; ಆತ್ಮ ವಿಮರ್ಶೆಯಿಂದಲೂ ವಿನೋದ ಪ್ರಜ್ಞೆಯಿಂದಲೂ ಕೂಡಿರುವ ಇಲ್ಲಿನ ನಿರೂಪಣೆ ಹೃದ್ಯವಾಗಿದೆ ಎಂದು ರಹಮತ್ ತರೀಕೆರೆ ಮೆಚ್ಚುಗೆ ಸೂಚಿಸಿದ್ದಾರೆ.

About the Author

ಸಹನಾ ಕಾಂತಬೈಲು

ಲೇಖಕಿ ಸಹನಾ ಕಾಂತಬೈಲು ಅವರು ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗವಾದ ಸಂಪಾಜೆಯ ದಬ್ಬಡ್ಕ ಎನ್ನುವ ಕುಗ್ರಾಮದವರು. ಕೇವಲ ಪಿ.ಯು.ಸಿ ವರೆಗೆ ವಿದ್ಯಾಬ್ಯಾಸ ಪಡೆದ ಅವರು ತಮ್ಮ 17ನೇ ವಯಸ್ಸಿಗೆ ವಿವಾಹವಾದರು. 20ನೇ ಹರೆಯದಲ್ಲೇ ಮಂಗಳ, ಸುಧಾ, ತುಷಾರ, ಮಯೂರ, ಕರ್ಮವೀರದಲ್ಲಿ ಅವರ ಹಲವಾರು ಹನಿಗವಿತೆಗಳು ಪ್ರಕಟವಾಗಿವೆ. ಚುಟುಕುಗಳ ರಚನೆಗಾಗಿ ಕೇರಳದಲ್ಲಿ ನಡೆದ ಅಂತರಾಜ್ಯ ಮಟ್ಟದ ಪ್ರತಿಷ್ಟಿತ ಚುಟುಕು ಶ್ರೀ ಪ್ರಶಸ್ತಿ ದೊರೆಕಿದೆ. ಅಲ್ಲದೇ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಹಿಂದೆ ಶಿವಮೊಗ್ಗೆಯಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.  ಕೃಷಿಯನ್ನೇ ನೆಚ್ಚಿಕೊಂಡ ಮನೆ ಅವರದ್ದಾಗಿದ್ದರಿಂದ ...

READ MORE

Reviews

’ಇದು ಬರಿ ಮಣ್ಣಲ್ಲ’ ಕೃತಿಯ ವಿಮರ್ಶೆ

ಮಣ್ಣಲ್ಲಿ ಅರಳಿದ ಸಣ್ಣ ಸಣ್ಣ ಖುಷಿಗಳು....!

'ಆನೆ ಸಾಕುವುದು ಕಷ್ಟ' ಎನ್ನುವ ಮಾತೊಂದಿದೆ. ಆದರೆ ಗೃಹಿಣಿಯೊಬ್ಬಳು 'ಆನೆ ಸಾಕಲು ಹೊರಟು' ಅದರಲ್ಲಿ ಯಶಸ್ವಿಯಾದ ಸೂಚನೆಯೊಂದು ದೊರಕಿದೆ. 'ಆನೆ ಸಾಕಲು ಹೊರಟವಳು' ಕೃತಿಯ ಮೂಲಕ ಬರಹ ಲೋಕಕ್ಕೆ ಅಧಿಕೃತವಾಗಿ ಕಾಲಿಟ್ಟ ಸಹನಾ ಕಾಂತಬೈಲು, ಬೆನ್ನಿಗೆ 'ಇದು ಬಲ ಮಣ್ಣಲ್ಲ' ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ದೈನಂದಿನ ಬದುಕಿನ ವಿಷಯಗಳನ್ನೇ ಸರಳ ನಿರೂಪಣೆಯ ಮೂಲಕ ಕಟ್ಟಿಕೊಟ್ಟ ಕಾರಣಗಳಿಗಾಗಿ ಈ ಹಿಂದಿನ ಕೃತಿ ದೊಡ್ಡ ಸಂಖ್ಯೆಯ ಓದುಗರನ್ನು ಸೆಳೆದುಕೊಂಡಿತ್ತು. ಒಂದು ಸಣ್ಣ ತೊರೆಯು ಕಾಡು, ಬೆಟ್ಟಗುಡ್ಡಗಳನ್ನು ಹಾದು ಹೋಗಿ, ಇನ್ನೊಂದು ತೊರೆಯ ಜೊತೆಗೆ ಸೇರಿದಂತೆ, ಆನೆ ಸಾಕಲು ಹೊರಟ ಕೃತಿ ಮುಂದುವರಿದು, ಇದು ಬರಿ ಮಣಲ್ಲ ಕೃತಿಯಾಗಿ ಬೆಳೆದಿದೆ. ಗ್ರಾಮೀಣ ಪ್ರದೇಶದಲ್ಲಿ ಕಾಡು, ಕೃಷಿಯ ನಡುವೆ ಬದುಕು ಸವೆಸುವ ಗೃಹಿಣಿಯನ್ನು ಲೇಕಿಯಾಗಿ ಪರಿವರ್ತಿಸಿದ ನಿಸರ್ಗ ಮತ್ತು ಅದರ ಸಣ್ಣ ಸಣ ದಯಗಳನ್ನು ಈ ಕೃತಿಯಲ್ಲಿ ನಾವು ಅನುಭವಿಸಬಹುದು. ಹೆಣ್ಣೊಬ್ಬಳು ಗೃಹಿಣಿಯಾಗಿ ಅಡುಗೆ ಮನೆ, ಹಟ್ಟಿ, ಗಂಡ, ಮನೆ, ಮಕ್ಕಳು ಇವುಗಳ ನಡುವೆ ಸಿಲುಕಿಕೊಂಡೂ, ಅದು ತನ್ನ ಪಾಲಿನ ಬಂಧನವಾಗದಂತೆ ನೋಡಿಕೊಳ್ಳುವ ಮಾರ್ಗವಾಗಿ ಲೇಖಕಿ ಬರಹ ಲೋಕವನ್ನು ಆರಿಸಿಕೊಂಡಂತಿದೆ. ಈ ಪ್ರಬಂಧಗಳ ಮೂಲಕ ಬರಹ-ಬದುಕನ್ನು ಅವರು ಸಮನ್ವಯಗೊಳಿಸುವುದನ್ನು ಕಾಣಬಹುದು. ತನ್ನ ಜಗತ್ತಿನ ಸಣ್ಣ ಸಣ್ಣ ಖುಷಿಗಳನ್ನೇ ಬಳಸಿಕೊಂಡು ಅದಕ್ಕೊಂದು ಆಕಾರ ಕೊಡುವ ಪ್ರಯತ್ನ ಮಾಡುತ್ತಾರೆ. ಮಣ್ಣಿನ ಜೊತೆಗೆ ಅವಿನಾಭಾವ ನಂಟನ್ನು ಹೊಂದಿದ ಲೇಖಕಿ, ಆ ಮಣ್ಣಿನ ಮೂಲಕವೇ ಆಕಾರಕ್ಕೆ ಸುರಂಗ ಕೊರೆಯುವ ಪ್ರಯತ್ನ ಹಲವು ಬರಹಗಳಲ್ಲಿ ಕಾಣ ಸಿಗುತ್ತವೆ.

ಸುಮಾರು 24 ಪ್ರಬಂಧಗಳು ಇಲ್ಲಿವೆ. ವಿಶೇಷವೆಂದರೆ, ಹೆಚ್ಚಿನ ಬರಹಗಳು ಅವರ ಬದುಕಿನ ಸಂಗಾತಿಗಳಾಗಿರುವ ಪ್ರಾಣಿಗಳು ಮತ್ತು ಮರಗಿಡಗಳ ಕುರಿತಂತೆ ಇವೆ. ಆನೆಗಳು, ಜಾನುವಾರುಗಳು, ಊರ ತುಡುಗು ದನಗಳು, ಬೆಕ್ಕು, ಅಜ್ಜಿಯ ಕೃಷಿ ಬುತ್ತಿ, ಕಾಡಿನ ನಡುವೆ ಪಿಸುಗುಡುವ ರೇಡಿಯೊ, ಮಜ್ಜಿಗೆಯ ಜೊತೆಗೆ ಮಥಿಸಿದ ಬದುಕು, ವೆಂಕಟ್ರಮಣ ಭಟ್ಟರ ಪೀಠಕತ್ತಿ, ಜೇನು ಅಭ್ಯಾಗತ, ಅತ್ತೆಯ ಉಪ್ಪಿನಕಾಯಿ ಜಗತ್ತು.....ದಿನ ನಿತ್ಯ ನಾವು ನೋಡಿದ, ಸವಿದ ಸಣ್ಣ ಸಂಗತಿಗಳೂ ಲೇಖಕಿಯ ಮುಗ್ಧ ಕಣ್ಣುಗಳಲ್ಲಿ ಬೆಳೆಯುತ್ತಾ ನಮ್ಮೊಳಗೆ ಹೊಸದಾದ ಮಣ್ಣಲ್ಲ. ರೂಪಕವೊಂದನ್ನು ಸೃಷ್ಟಿಸುತ್ತದೆ. ಓದು ಮುಗಿದ ಬಳಿಕವೂ ಆ ರೂಪಕ ಅವ್ಯಕ್ತವಾಗಿ ನಮನ್ನು ಸಂತೈಸುತ್ತಿರುತ್ತದೆ. బరి ರಹಮತ್ ತರೀಕೆರೆ ತನ್ನ ಬೆನ್ನುಡಿಯಲ್ಲಿ ಹೇಳುವೆಯ "...ಬದುಕಿನಲ್ಲಿ ಸಂಭವಿಸುತ್ತಿರುವ ಪಲ್ಲಟಗಳನ್ನು ಹಳಹಳಿಕೆ ಮತ್ತು ವಿಷಾದವಿಲ್ಲದೆ ಇಲ್ಲಿ ಹಿಡಿದುಕೊಡಲಾಗಿದೆ. ಆತ ವಿಮರ್ಶೆಯಿಂದಲೂ ವಿನೋದ ಪ್ರಜ್ಞೆಯಿಂದಲೂ ಕೂಡಿರುವ ಇಲ್ಲಿನ ನಿರೂಪಣೆ ಹೃದ್ಯವಾಗಿದೆ. ಕನ್ನಡ ಸಾಹಿತ್ಯ ಸಂಸ್ಕೃತಿಯು ಗೃಹಿಣಿಯರ ಒಳಜಗತ್ತಿನ ತಳಮಳ ಮತ್ತು ಸಂಭ್ರಮಗಳನ್ನು ಸರಿಯಾಗಿ ಸಹನಾ ಕಾಂತಬೈಲು ತುಳಿದ ಮಣ್ಣು ಅತ್ಯಂತ ಫಲವತ್ತಾದುದು. ಅಲ್ಲಿ ಬಿದ್ದ ಬೀಜಗಳು ಗಿಡಮರಗಳಾಗಿ, ಕಾಡುಗಳಾಗಿ ಹಬ್ಬಲಿ.

(ಕೃಪೆ: ವಾರ್ತಾ ಭಾರತಿ, ಬರಹ: ಕಾರುಣ್ಯ)

Related Books