ಇಂದಿರೆಯ ಮಗ ಸಂಜಯ

Author : ರವಿ ಬೆಳಗೆರೆ

Pages 242

₹ 150.00




Published by: ಭಾವನಾ ಪ್ರಕಾಶನ
Address: ನಂ. 2, 80 ಫೀಟ್ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಪಂಪ್ ಹತ್ತಿರ, ಬನಶಂಕರಿ 2ನೇ ಹಂತ ಬೆಂಗಳೂರು-560070
Phone: 080- 2679 0804

Synopsys

ಭಾರತದ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿಯ ಮಗನಾದ ಸಂಜಯ್ ಗಾಂಧಿಯ ಕುರಿತು ಬರೆದಂತಹ ಕೃತಿ ಇದು. ಭಾರತ ಕಂಡ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಇಂದಿರಾ ಗಾಂಧಿಯವರ ಮಗ ಯಾವ ರೀತಿ ತನ್ನ ಜೀವನವನ್ನು ಮುನ್ನಡೆಸಿದ ಮತ್ತು ಆತನ ಜೀವನ ಶೈಲಿ ಸಮಾಜದ ಕೆಂಗಣ್ಣಿಗೆ ಗುರಿಯಾಗಿತ್ತು ಎನ್ನುವುದರ ಕುರಿತು ಈ ಪುಸ್ತಕ ಬರೆಯಲ್ಪಟ್ಟದೆ. ಸಂಜಯನ ಜೀವನ ಇಂದಿರಾ ಗಾಂಧಿಯವರ ರಾಜಕೀಯ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರಿತು ಎಂಬುದರ ಕುರಿತಾಗಿ ಕೂಡ ಈ ಪುಸ್ತಕ ವಿವರಿಸುತ್ತದೆ. ಅತೀ ಮುಖ್ಯವಾಗಿ ಅತ್ಯಂತ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಸಂಜಯ ಅವರದು ನಿಜವಾಗಿಯೂ ಒಂದು ಅಪಘಾತವೇ ಅಥವಾ ಅದೊಂದು ಪೂರ್ವ ನಿಯೋಜಿತ ಕೊಲೆಯೇ ಎಂಬುದರ ಕುರಿತು ಹಲವು ಅಚ್ಚರಿ ಹುಟ್ಟಿಸುವ ಮಾಹಿತಿಗಳು ಲಭ್ಯವಿವೆ. ರವಿ ಬೆಳಗೆರೆಯವರ ಬರೆವಣಿಗೆ ಮತ್ತು ಪುಸ್ತಕದಲ್ಲಿರುವ ಅಪರೂಪದ ಚಿತ್ರಗಳು ಓದುಗರನ್ನು ಮತ್ತಷ್ಟು ಸೆಳೆಯುತ್ತದೆ. ಸಂಜಯನ ಜೀವನದಲ್ಲಿ ನಡೆದಂತಹ ಕೆಲವು ವಿಚಿತ್ರ ಸನ್ನಿವೇಷಗಳ ಕುರಿತಾದಂತಹ ರೋಚಕ ವಿವರಣೆ ಈ ಪುಸ್ತಕದಲ್ಲಿ ದೊರೆಯುತ್ತದೆ.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books