ಇಂತೀ, ನಿನಗೆ ಸಲ್ಲದವಳು

Author : ಕಾವ್ಯ ಪುನೀತ್

Pages 120

₹ 120.00




Year of Publication: 2023
Published by: ಕೃಷ್ಣವನ ಪ್ರಕಾಶನ
Address: ವನಗೂರು ಗ್ರಾಮ ಮತ್ತು ಅಂಚೆ, ಸಕಲೇಶಪುರ ತಾಲೂಕು, ಹಾಸನ ಜಿಲ್ಲೆ
Phone: 6361857569

Synopsys

ಜಗತ್ತಿನಲ್ಲಿ ಪ್ರೀತಿಗಾಗಿ ಹಂಬಲಿಸದಿರುವ ಪರಿತಪಿಸದಿರುವ ಜೀವವಿಲ್ಲ. ಜೀವಿಗೆ ಹೊಟ್ಟೆ ಹಸಿವಿನಂತೆ ಪ್ರೇಮದ ಹಸಿವು ಕೂಡ ನಿರಂತರವಾಗಿದ್ದು, ದುರಿತ ಕಾಲಘಟಕ್ಕೆ ನಿಷ್ಕಲ್ಮಶ ಪ್ರೀತಿ ಗಳಿಕೆ ಬಹಳ ದುಬಾರಿ ಎನ್ನುತ್ತದೆ ಲೇಖಕಿ ಕಾವ್ಯ ಪುನೀತ್ ವನಗೂರು ಅವರ ‘ಇಂತೀ, ನಿನಗೆ ಸಲ್ಲದವಳು’ ಕವನಸಂಕಲನ. ಇಲ್ಲಿನ ಸಾಲುಗಳು ಕತ್ತಲಿನಲ್ಲಿ ಕನವರಿಸಿದವುಗಳು ಎನ್ನುತ್ತಾರೆ ಕವಯಿತ್ರಿ. ಒಡಲಾಳದಲ್ಲಿ ಅಡಗಿ ಕುಳಿತಿದ್ದ ತಮ್ಮ ಬಹುದಿನಗಳ ಪ್ರೇಮಭರಿತ ಸಂಕಟ, ಸಂತಸ, ಹತಾಶೆ, ಅಸಹಾಯಕತೆ, ಭಾವ ಸಂಕೀರ್ಣತೆಗಳನ್ನ ಒಮ್ಮೆಲೇ ಹಗುರವಾಗಿ ಬಿಡಬೇಕೆಂಬುವ ನಿಲುವನ್ನ ಇಲ್ಲಿನ ಕವನಗಳಲ್ಲಿ ಕಾಣಬಹುದು. ಕವನಸಂಕಲನವು 119 ಕವನಗಳನ್ನು ಹೊಂದಿದ್ದು, 90ರಷ್ಟು ಕವಿತೆಗಳು ಪ್ರೇಮಕವಿತೆಗಳಾಗಿ ಹೊರಹೊಮ್ಮಿದೆ. ಪ್ರೇಮಕ್ಕಾಗಿ ತುಡಿಯುವ ಆರಾಧಿಸುವ ಪರಿಭಾವಗಳು ಇಲ್ಲಿ ತೀವ್ರವಾಗಿ ವ್ಯಕ್ತವಾಗಿವೆ.

About the Author

ಕಾವ್ಯ ಪುನೀತ್
(06 February 1990)

ಲೇಖಕಿ ಕಾವ್ಯ ಪುನೀತ್ ಅವರು ಮೂಲತಃ ಮಲೆನಾಡಿನ ಸಕಲೇಶಪುರ ಜಿಲ್ಲೆಯ ವನಗೂರಿನವರು. ತಾಯಿ ವನಜಾಕ್ಷಿ ಮತ್ತು ತಂದೆ ಲೇ. ಕೃಷ್ಣಸ್ವಾಮಿ. 1990 ಫೆಬ್ರವರಿ 6ರಂದು ಜನನ. ಪ್ರಾಥಮಿಕ ಪ್ರೌಢ ವಿದ್ಯಾಭ್ಯಾಸಗಳು ಸರ್ಕಾರಿ ಶಾಲೆಗಳಲ್ಲಿ ಹಾಗೂ ಬಿ.ಕಾಂ ಪದವಿಯನ್ನ ಬೆಂಗಳೂರಿನ ಕೊಲಂಬೆಸಿಯಾ ಕಾಲೇಜಿನಲ್ಲಿ ಪಡೆದಿರುತ್ತಾರೆ. ಸುಮಾರು 12 ವರ್ಷಗಳಿಂದ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡಿದ ಅನುಭವದ ಜೊತೆಗೆ ಓದು ಮತ್ತು ಬರಹದ ಹವ್ಯಾಸಗಳಿವೆ. ಸತತ ಮೂರು ವರ್ಷಗಳಿಂದ ಮುಖಪುಟ, ಪ್ರತಿಲಿಪಿಯಲ್ಲಿ ಇವರ ಕವಿತೆ, ಲೇಖನಗಳು ಚಾಲ್ತಿಯಲ್ಲಿವೆ. ಕೃತಿಗಳು: ನಿರ್ಧಾರ - ಬದುಕ ಪುಟದಲ್ಲೊಂದು ಭಾವದ ಅಲೆ, ಪತಂಗ, ಇಂತೀ ನಿನಗೆ ...

READ MORE

Related Books