ಜಾನಪದ ಸಾಹಿತ್ಯದಲ್ಲಿ ಅವ್ವ

Author : ಚಂದ್ರಶೇಖರ ವಸ್ತ್ರದ

Pages 296

₹ 200.00




Year of Publication: 2017
Published by: ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನ
Address: ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನ, 52, ಆದರ್ಶನಗರ, ಹುಬ್ಬಳ್ಳಿ-9448677434
Phone: 9448677434

Synopsys

ಬಾಯಿಂದ ಬಾಯಿಗೆ ಪಸರಿಸುತ್ತಿದ್ದ ಜನಪದ ಜ್ಞಾನ ಜಗತ್ತಿನ ಹೆಮ್ಮೆ ಕೂಡ. ಹೀಗೆ ಮೌಖಿಕವಾಗಿ ಹರಡಿಕೊಂಡ ಸಾಹಿತ್ಯ ಕರಳು ಬಳ್ಳಿ ಸಂಬಂಧಕ್ಕೆ ಒತ್ತು ನೀಡುತ್ತದೆ ಎಂಬುದು ಮಹತ್ವದ ಸಂಗತಿ. ಜನಪದ ಸಾಹಿತ್ಯದಲ್ಲಿ ತಾಯಿಯ ಪರಿಕಲ್ಪನೆ ಹೇಗಿದೆ ಎಂದು ಪರಿಚಯಿಸುವ ಯತ್ನ ಚಂದ್ರಶೇಖೇ ವಸ್ತ್ರದ ಅವರದು. ಹಾಗೆಂದೇ ಅವರು ಜನಪದ ತ್ರಿಪದಿ, ಕಥನ ಕವನ, ಖಂಡಕಾವ್ಯ, ಕತೆಗಳಲ್ಲಿ ಅವ್ವ ಹೇಗೆ ಮೂಡಿಬಂದಿದ್ದಾಳೆ ಎಂಬುದನ್ನು ವಿವರಿಸಿದ್ದಾರೆ. ಅವ್ವ’ಮನೆ ಮಾಡಿರುವ’ ಸೋಬಾನೆ, ಲಾವಣಿ, ಜೋಗುಳ, ಗೀಗಿಪದ, ಕೋಲಾಟ, ಹಂತಿಪದಗಳನ್ನು ಸಂಪಾದಿಸಿದ್ದಾರೆ. ಅಲ್ಲದೆ ಕನ್ನಡ, ತುಳು, ಮಲಯಾಳಂ, ತೆಲುಗು ಜನಪದ ಕತೆಗಳಲ್ಲಿ ತಾಯಿಯನ್ನು ಚಿತ್ರಿಸಿರುವ ಪರಿಯನ್ನು ವರ್ಣಿಸಲಾಗಿದೆ. 

ತಮ್ಮ ತಾಯಿಯ ನೆನಪಿನಲ್ಲಿ ಕೃತಿಯನ್ನು ಹೊರತಂದಿರುವ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ’ಕುರಿತು ಓದದೆಯೂ ಕಾವ್ಯ ಪ್ರಯೋಗ ಪರಿಣತಿಮತಿಗಳಾದ ನಮ್ಮ ಜನಪದರ ಬದುಕೇ ಒಂದು ಸುಂದರ ಹಾಡು. ಅವರ ಜೀವನ ನೀರಿನಷ್ಟು ಪವಿತ್ರ., ಗಾಳಿಯಷ್ಟು ಪಾರದರ್ಶಕ, ಗಗನದಷ್ಟು ಎತ್ತರ, ಸಾಗರದಷ್ಟು ಆಳ, ಅಗಲ. ಎಲ್ಲ ಸೃಜನಶೀಲ ಸಾಹಿತ್ಯದ ತಾಯಿಬೇರಾದ ಈ nಡಿಗರ ನುಡಿ, ಬದುಕನ್ನೇ ಭಟ್ಟಿಯಿಳಿಸಿದ ಸಾರ. ಆ ಮಹಾಬದುಕಿನ ಮೂಲಸತ್ವವಾದ ’ತಾಯಿ’ಯ ಕುರಿತ ಸಾಹಿತ್ಯ ರಾಶಿಯನ್ನು ಚಂದ್ರಶೇಖರ ವಸ್ತ್ರದ ಅವರು ಸಂಕಲಿಸಿಕೊಟ್ಟಿದ್ದಾರೆ’ ಎಂದು ನೆನೆದಿದ್ದಾರೆ. 

About the Author

ಚಂದ್ರಶೇಖರ ವಸ್ತ್ರದ

ಚಂದ್ರಶೇಖರ ವಸ್ತ್ರದ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನವರು. ವಿವಿಧ ವಿಭಾಗಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ವಲಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ, ಡಾ. ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಸ್ಥಾಪಕ ಸದಸ್ಯ ಕಾರ್ಯದರ್ಶಿ, ಕರ್ನಾಟಕ ಚಲನಚಿತ್ರ ಮಂಡಳಿ-ಗದಗ ಜಿಲ್ಲಾ ’ಬೆಳ್ಳಿ ಸಾಕ್ಷಿ’ ತಂಡದ ಜಿಲ್ಲಾ ಸದಸ್ಯ, ಕರ್ನಾಟಕ ಗಮಕ ಕಲಾ ಪರಿಷತ್ತಿನಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಮಾನವತಾವಾದಿ ಬಸವಣ್ಣನವರು, ಕುಲಕ್ಕೆ ತಿಲಕ ಮಾದಾರ ಚನ್ನಯ್ಯ, ಬೆಳಗು, ಹರಿದಾವ ನೆನಪು, ಮಭನದ ಮಾತುಗಳು, ಪ್ರೀತಿ ...

READ MORE

Related Books