ಜನಪದ ಕಥನಗೀತ ಸಂಚಯ

Author : ಸಿ.ಕೆ ನಾವಲಗಿ

Pages 70

₹ 60.00




Year of Publication: 2002
Published by: ಕನಕ ಸಾಹಿತ್ಯ ಪ್ರತಿಷ್ಠಾನ
Address: #272, 2ನೇ ಮಹಡಿ, 5ನೇ ಮುಖ್ಯರಸ್ತೆ, 1ನೇ ಹಂತ, ಮಂಜುನಾಥನಗರ, ಬೆಂಗಳೂರು

Synopsys

‘ಜನಪದ ಕಥನಗೀತ ಸಂಚಯ’ ಡಾ.ಸಿ.ಕೆ. ನಾವಲಗಿ ಮತ್ತು ಶಕುಂತಲ ನಾವಲಗಿ ಅವರು ಸಂಪಾದಿಸಿರುವ ವಿಮರ್ಶಾತ್ಮಕ ಲೇಖನಗಳ ಸಂಕಲನವಾಗಿದೆ. ಮನವು ನೆನೆದಾಗ ತನುವು ಬಾಗಿತ್ತು, ಪ್ರಸ್ತಾವನೆ ಜನಪದ ಕಥನ ಗೀತೆಗಳೆಂದರೇನು ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿರುವ ಸಂಪಾದಕರು, ಮೂರು ಭಾಗಗಳಲ್ಲಿ ಅಧ್ಯಯನ ನಡೆಸಿದ್ದಾರೆ. ಒಂದು ಪೌರಾಣಿಕ.;ಪಾರ್ವತಿ ತವರಿಗೆ ಹೋದದ್ದು, ಕೊರವಂಜಿ, ಪಾಂಡವರು ಪಗಡಿ ಆಡಿ ಸೋತದ್ದು, ಅಭಿಮನ್ಯು ವಿವಾಹ ಪ್ರಸಂಗ, ಕೃಷ್ಣಲೀಲೆಯ ಕುರಿತ ಲೇಖನಗಳಿವೆ. ಐತಿಹಾಸಿಕ ಭಾಗದಲ್ಲಿ ನರಗುಂದ ಬಂಡಾಯದ ಕುರಿತು ಚರ್ಚಿಸಲಾಗಿದೆ. ಮೂರನೇ ಭಾಗ ಸಾಮಾಜಿಕ ಕ್ಷೇತ್ರದಲ್ಲಿ ಏಳು ಮಂದಿ ಅಣ್ಣಂದಿರು ಒಬ್ಬ ತಂಗಿ, ಗೋಪಿತಾಯಿ ಹಾಡು, ಬಂಡಿಯಚ್ಚು ಮುರಿದಂಗಾಯ್ತು, ಬಾಲ ಪುತ್ರೇಶ, ಬತಿಗೇಡಿ ರಾಜ, ರಡ್ಡೇರ ಅವ್ವಣ್ಣಿ ಕುರಿತ ಲೇಖನಗಳಿವೆ. ಹಾಗೆಯೇ ಅಧ್ಯಯನ ನಡೆಸಿದ ಸಂದರ್ಭದಲ್ಲಿ ಕ್ಷೇತ್ರಕಾರ್ಯದ ಅನುಭವ: ಕೆಲವು ನೆನಪುಗಳನ್ನು ಲೇಖಕರು ಹಂಚಿಕೊಂಡಿದ್ದಾರೆ.

About the Author

ಸಿ.ಕೆ ನಾವಲಗಿ
(01 August 1956)

ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.  ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...

READ MORE

Related Books