ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು

Author : ಕುರುವ ಬಸವರಾಜ್

Pages 190

₹ 150.00




Year of Publication: 2011
Published by: ಗೀತಾಂಜಲಿ ಪಬ್ಲಿಕೇಷನ್ಸ್
Address: ನಂ.134, 8ನೇ ಅಡ್ಡರಸ್ತೆ, ಗೋವಿಂದರಾಜನಗರ, ಬೆಂಗಳೂರು- 560040

Synopsys

‘ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು’ ಡಾ.ಕುರುವ ಬಸವರಾಜ್ ಅವರ ಸಂಶೋಧನಾ ಪ್ರಬಂಧ. ಈ ಕೃತಿಗೆ ಡಾ.ಅಂಬಳಿಕೆ ಹಿರಿಯಣ್ಣ, ಡಾ.ಕೆ. ಚಿನ್ನಪ್ಪ ಗೌಡ, ಪ್ರೊ.ಕಿ.ರಂ. ನಾಗರಾಜ ಅವರ ಬೆನ್ನುಡಿಯ ಮಾತುಗಳಿವೆ. ಕೃತಿಯ ಕುರಿತು ಬರೆಯುತ್ತಾ ಕನ್ನಡದ ಮೂರು ಮೌಖಿಕ ಕಾವ್ಯಗಳ ರಚನೆಗಳನ್ನು ಆಧರಿಸಿ ಕೇವಲ ದೈವಮೂಲ ನಂಬಿಕೆಗಳೇ ಅಲ್ಲದೇ ಕಾವ್ಯ ನಿರ್ಮಾಣದ ನೆಲೆಗಳನ್ನು ಮತ್ತು ಸಂವಹನದ ನೆಲೆಗಳನ್ನು ಕುರಿತು ಅಧ್ಯಯನ ನಡೆಸಿರುವುದು ಗಮನಾರ್ಹ, ಅಷ್ಟೇ ಅಲ್ಲ, ವ್ಯಕ್ತಿಗಾಯಕರ ಕಾವ್ಯಾಭಿವ್ಯಕ್ತಿಯ ಸಂದರ್ಭ, ಕಾವ್ಯವನ್ನು ಸಂಯೋಜಿಸುವ ಸ್ವರೂಪ ಹಾಗೂ ಅವುಗಳ ಪ್ರಸಾರದ ನೆಲೆಗಳನ್ನು ವಿಶ್ಲೇಷಿಸಲು ಪ್ರಯತ್ನಿಸಿರುವುದು ಇಲ್ಲಿಯ ಹೆಚ್ಚುಗಾರಿಕೆ ಎಂದೇ ಹೇಳಬಹುದು ಎಂದಿದ್ದಾರೆ ಡಾ. ಅಂಬಳಿಕೆ ಹಿರಿಯಣ್ಣ. ಹಾಗೇ ವಾಕ್ ಪರಂಪರೆಯ ಮಾತು ಮಹಾಕಾವ್ಯದ ಹಂತವನ್ನು ಸಿದ್ಧಿಸಿಕೊಳ್ಳುವ ಪ್ರಕ್ರಿಯೆಯ ಚರ್ಚೆಯು ಇಲ್ಲಿ ಅರ್ಥಪೂರ್ಣವಾಗಿ ನಡೆದಿದೆ ಎನ್ನುತ್ತಾರೆ ಡಾ.ಕೆ. ಚಿನ್ನಪ್ಪ ಗೌಡ.

About the Author

ಕುರುವ ಬಸವರಾಜ್

ಲೇಖಕ, ಜಾನಪದ ತಜ್ಞ ಕುರುವ ಬಸವರಾಜ್ ಅವರು ಮೂಲತಃ ಹಳೆಯ ಶಿವಮೊಗ್ಗ, ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುರುವ ಗ್ರಾಮದವರು. ಜಾನಪದ ಲೋಕದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕರ್ನಾಟಕ ವಿ.ವಿ.ಯಿಂದ ಎಂ.ಎ(ಕನ್ನಡ) ಪದವಿ ಮತ್ತು ಬೆಂಗಳೂರು ವಿ.ವಿ.ಯಲ್ಲಿ ‘ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಜಾನಪದ ಅಕಾಡೆಮಿ ಫೆಲೋಷಿಪ್ ಗಾಗಿ ಕರ್ನಾಟಕ ಜನಪದ ಸಂಗೀತ ಅಧ್ಯಯನ ಮಾಡಿದ್ದಾರೆ. ಪ್ರಕಟಿತ ಕೃತಿಗಳು: ಹುಲ್ಲೆಹಾಡು, ಕಾಡೊಡಲ ಹಾಡು, ಬೇಲಿ ಮ್ಯಾಗಳ ಹೂವು, ಮಣ್ಣ ಕುಸುಮದ ಹಕ್ಕಿ (ಕಾವ್ಯಸಂಗ್ರಹಗಳು) ಸೆಳೆತ, ...

READ MORE

Related Books