ಜನಪದ ಒಗಟು

Author : ಕುರುವ ಬಸವರಾಜ್

Pages 160

₹ 130.00




Year of Publication: 1989
Published by: ನರಸೀಗೌಡ ಸಾಂಸ್ಕೃತಿಕ ಟ್ರಸ್ಟ್
Address: ನಂ.1273, 7ನೇ ತಿರುವು, ಚಂದ್ರಾಲೇಔಟ್, ವಿಜಯನಗರ, ಬೆಂಗಳೂರು- 40
Phone: 9964124831

Synopsys

‘ಜನಪದ ಒಗಟು’ ಜಾನಪದ ತಜ್ಞ ಡಾ. ಕುರುವ ಬಸವರಾಜ್ ಅವರ ಕಥಾಸಂಕಲನ.1989ರಲ್ಲಿ ಪ್ರಥಮ ಮುದ್ರಣಕಂಡ ಈ ಕೃತಿ 1992ರಲ್ಲಿ ಎರಡನೇ ಮುದ್ರಣ ಹಾಗೂ 2017ರಲ್ಲಿ ಮೂರನೆ ಮುದ್ರಣಕಂಡಿದೆ. ಈ ಸಂಕಲನಕ್ಕೆ ಡಾ. ಹಾ.ಮಾ. ನಾಯಕ್,ಡಾ.ಸಿ.ಪಿ.ಕೆ, ಎಚ್.ಎಲ್. ನಾಗೇಗೌಡರ ಬೆನ್ನುಡಿಗಳಿವೆ. ಕೃತಿಯ ಕುರಿತು ಬರೆಯುತ್ತಾ ‘ಕುರುವ ಬಸವರಾಜ್ ಅವರ ಒಗಟಿನ ಕಥೆಗಳು ಉಳಿದಿರುವುದನ್ನು ಕೂಡಿ ಹಾಕುವ ಪ್ರಯತ್ನ, ಅವು ಒಮ್ಮೆ ಓದಲು ಹಿಡಿದರೆ ಮುಗಿಸುವವರೆಗೂ ಬಿಡದಷ್ಟು ಆಕರ್ಷಕವಾಗಿವೆ. ಮೇಲೆ ಹೇಳಿದಂತೆ ಸಾಮಾನ್ಯ ಜನರೇ ಒಗಟುಗಳನ್ನು ಒಡ್ಡುವುದು, ಬಿಡಿಸುವುದೂ ಅವರೇ ಆ ಜಾಣ್ಮೆ, ಚತುರತೆ ಅನಕ್ಷರಸ್ಥ ಹಳ್ಳಿಗರಲ್ಲದೆ ಮತ್ಯಾರಿಗೆ ಬರಬೇಕು ಅಕ್ಷರಸ್ಥರಿಗೆ ಪುಸ್ತಕ, ಅನಕ್ಷರಸ್ಥರಿಗೆ ಮಸ್ತಕ, ಈ ಮಸ್ತಕದ ಕುಲುಮೆಯಿಂದ ಹಾರಿದ ಪ್ರತಿಭೆಯ ಕಿಡಿಗಳು ಈ ಒಗಟು ಕಥೆಗಳು’ ಎಂದಿದ್ದಾರೆ ಎಚ್.ಎಲ್. ನಾಗೇಗೌಡ.

About the Author

ಕುರುವ ಬಸವರಾಜ್

ಲೇಖಕ, ಜಾನಪದ ತಜ್ಞ ಕುರುವ ಬಸವರಾಜ್ ಅವರು ಮೂಲತಃ ಹಳೆಯ ಶಿವಮೊಗ್ಗ, ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುರುವ ಗ್ರಾಮದವರು. ಜಾನಪದ ಲೋಕದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕರ್ನಾಟಕ ವಿ.ವಿ.ಯಿಂದ ಎಂ.ಎ(ಕನ್ನಡ) ಪದವಿ ಮತ್ತು ಬೆಂಗಳೂರು ವಿ.ವಿ.ಯಲ್ಲಿ ‘ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಜಾನಪದ ಅಕಾಡೆಮಿ ಫೆಲೋಷಿಪ್ ಗಾಗಿ ಕರ್ನಾಟಕ ಜನಪದ ಸಂಗೀತ ಅಧ್ಯಯನ ಮಾಡಿದ್ದಾರೆ. ಪ್ರಕಟಿತ ಕೃತಿಗಳು: ಹುಲ್ಲೆಹಾಡು, ಕಾಡೊಡಲ ಹಾಡು, ಬೇಲಿ ಮ್ಯಾಗಳ ಹೂವು, ಮಣ್ಣ ಕುಸುಮದ ಹಕ್ಕಿ (ಕಾವ್ಯಸಂಗ್ರಹಗಳು) ಸೆಳೆತ, ...

READ MORE

Related Books