ಜಾನಪದ ಪರಿಕ್ರಮ

Author : ಶ್ರೀರಾಮ ಇಟ್ಟಣ್ಣವರ

Pages 94

₹ 40.00




Year of Publication: 2003
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18

Synopsys

ಜಾನಪದ ಸಾಹಿತಿ ಡಾ ಶ್ರೀ ರಾಮ ಇಟ್ಟಣ್ಣವರ ʼಕೃತಿ-ಜಾನಪದ ಪರಿಕ್ರಮʼ ಜಾನಪದ ಬದುಕಿನ ಜೀವಂತಿಕೆಯನ್ನು ಹೊತ್ತ ಕೃತಿ ಇದು. ಜಾನಪದಕ್ಕೆ ಸಂಬಂಧಪಟ್ಟ ಒಂಬತ್ತು ಲೇಖನಗಳನ್ನು ಒಳಗೊಂಡಿದ್ದು, ಲೇಖನಗಳಲ್ಲಿ ಜಾನಪದ ಬದುಕಿನ, ವೈವಿಧ್ಯಮಯವಾದ ಭಾವ ಬಿಂದುಗಳಿವೆ.  ಗ್ರಾಮೀಣ ಅನ್ವಯಿಕ ನೆಲೆಯಲ್ಲಿ ಒಡೆದು ತೋರುವ ಲೇಖಕರ ದೇಸಿ ಚಿಂತನ ಕ್ರಮಗಳು ಜಾನಪದ ಅಧ್ಯಯನ ವಲಯದಲ್ಲಿ ಹೊಸ ಸ್ಥಾನಮಾನವನ್ನು ಕಲ್ಪಿಸಿದೆ. ಅನುಭವ ದ್ರವ್ಯವನ್ನು ಅಧ್ಯಯನ ಮಾರ್ಗಕ್ಕೆ ಒಗ್ಗಿಸಿಕೊಳ್ಳುವ ಹದ ಲೇಖಕರಿಗೆ ದಕ್ಕಿರುವುದಿಲ್ಲಿ ಸ್ಪಷ್ಟವಾಗಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಒಂಭತ್ತು ಲೇಖನಗಳು ನಿರೂಪಣಾತ್ಮಕವಾಗಿವೆ. ಮತ್ತೆ ಕೆಲವು ಸಂಶೋಧನಾತ್ಮಕವಾಗಿವೆ. 

About the Author

ಶ್ರೀರಾಮ ಇಟ್ಟಣ್ಣವರ
(01 June 1948)

ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್‌.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಹೊಳಿಸಾಲ ಬಳ್ಳಿ; ಗಾಲಿ ಉಳ್ಳತೈತಿ; ನೂರು ಶಿಶುಗೀತೆಗಳು; ಹಾಡುಣು ಬಾಪ್ರೇಮದ ಪಾಡಾ; ಹೊತ್ತು ಮೂಡುವ ಸಮಯ (ಕಾವ್ಯ), ಪಾರಿಜಾತದವರು (ನಾಟಕ),  ಜನಪದ ಪಶುವೈದ್ಯ ಬೀಳಗಿ ಸಿದ್ಧಪ್ಪ; ಕೊಣ್ಣೂರ ಕರಿಸಿದ್ದೇಶ್ವರ ದೇವಸ್ಥಾನ (ಜಾನಪದೀಯ) ಹಲಗಲಿ-ಗ್ರಾಮ ಚಾನಪದ (ಅಧ್ಯಯನ), ಲಾವಣಿ: ಸಣ್ಣಾಟ (ಸಂಶೋಧನೆ)  ತಟ್ಟಿ ಚಿನ್ನ-ಸಣ್ಣಾಟ; ...

READ MORE

Related Books