ಜಾನಪದ ಸುಗ್ಗಿ

Author : ಕೆ. ಪ್ರಹ್ಲಾದರಾವ್

Pages 132

₹ 80.00




Year of Publication: 2011
Published by: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
Address: ಕೋಲಾರ

Synopsys

ಆಧುನಿಕ ಸಂದರ್ಭದಲ್ಲಿ ಜನಪದಕಲೆಗಳು ಒಂದು ರೀತಿಯ ಅವಕೃಪೆಗೆ ಗುರಿಯಾಗಿವೆ. ಜನಮನದಿಂದ ದೂರವಾಗುತ್ತಿರುವ ನಮ್ಮ ಸಂಸ್ಕೃತಿಯ ದ್ಯೋತಕವಾಗಿರುವ ಜನಪದ ಕಲೆಗಳನ್ನು, ಜಾನಪದ ಸಂಪತ್ತು ಇಂದು ಉಳಿಸಬೇಕಾಗಿದೆ, ಸಂರಕ್ಷಿಸಬೇಕಾಗಿದೆ. ಜೀವನದ ಭಾಗವಾಗಿ ಹುಟ್ಟಿಕೊಂಡಿರುವ ಜನಪದ ಹಾಡು, ಕುಣಿತ, ಕಲೆ, ಕತೆ ಮೊದಲಾದವುಗಳು ನಮ್ಮ ಹಿಂದಿನ ಸಂಪ್ರದಾಯದ ಸಂಕೇತಗಳಾಗಿವೆ. ಬದುಕಿನಲ್ಲಿ ಬದಲಾವಣೆಯಾಗಿರುವಂತೆ ಅವರ ಸಾಹಿತ್ಯದಲ್ಲಿ ಬದಲಾವಣೆಗಳಾಗಿವೆ. ಈ ಹಳೆಯ ಸಂಸ್ಕೃತಿ ದೂರದರ್ಶನ ಮೊದಲಾದ ಸಮೂಹ ಮಾಧ್ಯಮಗಳ ಅಬ್ಬರದಲ್ಲಿ ಮಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಜಾನಪದ ಕಲೆಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಈ ಕೃತಿಯಲ್ಲಿದೆ.

About the Author

ಕೆ. ಪ್ರಹ್ಲಾದರಾವ್

ಹಿರಿಯ ಪತ್ರಕರ್ತ, ರಂಗಭೂಮಿ ಕಲಾವಿದ ಕೆ. ಪ್ರಹ್ಲಾದರಾವ್ ಅವರು ಕಳೆದ 60 ವರ್ಷಗಳಿಂದ ಮಂಡ್ಯದಲ್ಲಿ ನೆಲೆಸಿದ್ದಾರೆ. ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ 41 ವರ್ಷ ಸೇವೆ ಸಲ್ಲಿಸಿದ್ದರು. ಪೌರವಾಣಿ ಪತ್ರಿಕೆ ಸಂಪಾದಕರಾಗಿದ್ದ ಕೆ. ಗುಂಡಣ್ಣನವರ ಎಲ್ಲ ನಾಟಕಗಳನ್ನು ರಂಗದ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದರು. ವರನಟ ಡಾ. ರಾಜ್‍ಕುಮಾರ್ ಸೇರಿದಂತೆ ಕನ್ನಡ ಹಾಗೂ ಹಿಂದಿಯ ಅನೇಕ ಚಿತ್ರಕಲಾವಿದರನ್ನು ಮಂಡ್ಯಕ್ಕೆ ಕರೆತಂದು ಗೌರವಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಂಸ್ಕೃತಿ ಸಂಘಟನೆಯ ಅಧ್ಯಕ್ಷರಾಗಿದ್ದ ರಾಯರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತು, ಪ್ರಕಾಶ್ ಕಲಾ ಸಂಘ, ...

READ MORE

Related Books