ಜಯ: ಮಹಾಭಾರತದ ಸಚಿತ್ರ ಮರುಕಥನ

Author : ಗಿರಡ್ಡಿ ಗೋವಿಂದರಾಜ

Pages 350

₹ 650.00




Year of Publication: 2015
Published by: ಮನೋಹರ ಗ್ರಂಥಮಾಲಾ
Address: ಲಕ್ಷ್ಮಿಭವನ, ಸುಭಾಷ್ ರಸ್ತೆ, ಧಾರವಾಡ - 580001.
Phone: +91 9845447002 / 0836-2441822

Synopsys

‘ಜಯ: ಮಹಾಭಾರತದ ಸಚಿತ್ರ ಮರುಕಥನ’ ಭಾರತೀಯ ಪುರಾಣಶಾಸ್ತ್ರಜ್ಞ, ಲೇಖಕ ದೇವದತ್ ಪಟ್ನಾಯಕ್ ಅವರ ಇಂಗ್ಲಿಷ್ ಕೃತಿಯನ್ನು  ಲೇಖಕ ಗಿರಡ್ಡಿ ಗೋವಿಂದರಾಜ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ದೇವದತ್ ಪಟ್ನಾಯಕ್ ಅವರು ಪೌರಾಣಿಕ ಕತೆಗಳಿಗೆ ಮೂಲ ಆಧಾರಗಳನ್ನು ಹುಡುಕುತ್ತಾ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಆ ಕೃತಿಯಲ್ಲಿ ಜಯ ಮಹಾಭಾರತದ ಸಚಿತ್ರ ಮರುಕಥನವೂ ಒಂದು. ಗಿರಡ್ಡಿ ಗೋವಿಂದರಾಜ ಅವರು ಈ ಕೃತಿಯಲ್ಲಿ ಎಲ್ಲಿಯೂ ಅನುವಾದ ಎಂಬ ಅನುಮಾನವೂ ಬರದಂತೆ ತಮ್ಮದೇ ಭಾಷೆಯಲ್ಲಿ ಅತ್ಯಂತ ಸುಂದರವಾಗಿ ಈ ಕೃತಿಯನ್ನು ಅನುವಾದಿಸಿದ್ದಾರೆ. ಜಯ ಎನ್ನುವುದು ಮಹಾಭಾರತದ ಅನುವಾದವಲ್ಲ ಬದಲಾಗಿ ದೇಶಾಧ್ಯಂತ ಹರಡಿಕೊಂಡಿರುವ ವಿಭಿನ್ನ ಮಹಾಭಾರತ ಕತೆಗಳ ಸೊಗಡನ್ನು ಆಧುನೀಕರಿಗೆ ರುಚಿಸುವ ಹಾಗೇ ನಿರೂಪಿಸಲಾಗಿರುವ ಕೃತಿ. ಅದೇ ಸೂಕ್ಷ್ಮ ನಿರೂಪಣೆಯನ್ನು ಕನ್ನಡ ಕೃತಿಯಲ್ಲಿ ಕಾಣಬಹುದಾಗಿದೆ.

About the Author

ಗಿರಡ್ಡಿ ಗೋವಿಂದರಾಜ
(22 September 1939 - 11 May 2018)

ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ಮೂಲತಃ ಧಾರವಾಡ ಜಿಲ್ಲೆಯ ಅಬ್ಬಿಗೇರಿಯವರು. ತಂದೆ ಅಂದಾನಪ್ಪ ಮತ್ತು ತಾಯಿ ನಾಗಮ್ಮ. ಕನ್ನಡ ಮತ್ತು ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಸಣ್ಣಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇಂಗ್ಲೆಂಡ್, ಬೆಲ್ಸಿಯಂ, ಫ್ರಾನ್ಸ್, ಸರೆಂಡ್, ಇಟಲಿಗಳಲ್ಲಿ ಉಪನ್ಯಾಸ ನೀಡಿರುವ ಅವರು ಇಂಗ್ಲಿಷ್‌ ಸ್ಟಡೀಸ್ ನಲ್ಲಿ ಡಿಪ್ಲಮೊ ಪಡೆದು ಕಲಬುರ್ಗಿಯ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದರು. ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿ ವೇತನ ಪಡೆದು  ಇಂಗ್ಲೆಂಡಿಗೆ ಭಾಷಾ ವಿಜ್ಞಾನದಲ್ಲಿ ವಿಶೇಷ ಅಧ್ಯಯನ ನಡೆಸಿದರು. ಅವರು ಹೈಸ್ಕೂಲಿನಲ್ಲಿರುವಾಗಲೇ 'ಶಾರದಾಲಹರಿ' ಎಂಬ ನೀಳ್ಗವಿತೆ ಪ್ರಕಟಿಸಿದ್ದರು. ನಾಟಕ ಅಕಾಡೆಮಿಯ ಫೆಲೋಶಿಪ್ ದೊರೆತಿರುವ ...

READ MORE

Awards & Recognitions

Related Books