ಜೀವ ನದಿಗಳ ಸಾವಿನ ಕಥನ

Author : ಶಿವಾನಂದ ಕಳವೆ

Pages 146

₹ 150.00




Year of Publication: 2019
Published by: ಸಾಹಿತ್ಯ ಪ್ರಕಾಶನ,
Address: ಸಾಹಿತ್ಯ ಪ್ರಕಾಶನ, ಕೊಪ್ಪಕರ್ ಬೀದಿ, ಹುಬ್ಬಳ್ಳಿ-580020
Phone: 0836236767

Synopsys

ಜಲ ರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಳೆದೆರಡು ದಶಕಗಳಿಂದ ತೊಡಗಿಸಿಕೊಂಡಿರುವ ಶಿವಾನಂದ ಕಳವೆ ಅವರು ರಾಜ್ಯದ ನದಿಗಳ ಸ್ಥಿತಿಯ ಕುರಿತು ಜನರಿಗೆ ವಾಸ್ತವವನ್ನು ತಿಳಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ಇತಿಹಾಸದ ದಾಖಲೆ, ಪರಿಸರ ಸೂಕ್ಷ್ಮತೆ, ಜನಪದ ನಂಬಿಕೆ, ಪುರಾಣ ಕಥೆ, ವರ್ತಮಾನದ ಸ್ಥಿತಿಗತಿಯ ಅವಲೋಕನದ ಮೂಲಕ ನದಿ ಸಂರಕ್ಷಣೆಯ ಮಹತ್ವ ಸಾರುವ ಕೃತಿ ಇದಾಗಿದೆ. ಕಾವೇರಿ, ತುಂಗಾ, ಅಘನಾಷಿನಿ ಸೇರಿದಂತೆ ರಾಜ್ಯದ ಹಲವು ನದಿಗಳ ಮನಕಲಕುವ ಕಥೆಗಳು ಈ ಕೃತಿಯಲ್ಲಿವೆ. 

ನದಿ ನೋಡುವುದು ಹೇಗೆಂದು ಹೇಳುತ್ತ ಜಲಕ್ಷಾಮದ ನೋಟಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಕಾವೇರಿ, ತುಂಗಭದ್ರಾ, ಕೃಷ್ಣಾ, ಶರಾವತಿ, ಅಘನಾಶಿನಿ, ಬೇಡ್ತಿ, ಕಾಳಿ ಮುಂತಾದ ನದಿಗಳ ಕಥೆ ಹೇಳುತ್ತ ಪ್ರಸ್ತುತ ಸ್ಥಿತಿಗತಿಯತ್ತ ಕೃತಿ ಗಮನಹರಿಸುತ್ತದೆ. ಜಗತ್ತಿನ ಮೊಟ್ಟ ಮೊದಲ ಅಣೆಕಟ್ಟನ್ನು ಕಾವೇರಿ ನದಿಗೆ ಕಟ್ಟಿದ ಚೋಳ ಅರಸು ಕರಿಕಾಲನ ಕಲ್ಲಣೆಯಿಂದ ಆರಂಭಿಸಿ ಹಲವು ಚಾರಿತ್ರಿಕ ದಾಖಲೆಗಳನ್ನು ಇದರಲ್ಲಿ ವಿವರಿಸಲಾಗಿದೆ.

ನದಿ, ವೈಜ್ಞಾನಿಕ ಅಧ್ಯಯನ, ಮಾಲಿನ್ಯ, ಹೂಳಿನ ಸ್ಥಿತಿ, ನೀರಾವರಿ ಪರಿಣಾಮ, ಕೃಷಿ ಜನಜೀವನದಲ್ಲಿ ನದಿ ಪ್ರಾಮುಖ್ಯತೆ ಬಿಂಬಿಸುವ ನೋಟಗಳಿವೆ. ನದಿಗಳನ್ನು ನೀರಿನ ಲಭ್ಯತೆಯ ಕೃತಕ ಅಂಕಿಸಂಖ್ಯೆಗಳಲ್ಲಿ ಅಳೆಯುತ್ತಿರುವಾಗ ಕಣ್ಣಿಗೆ ಕಾಣದ ಜೀವಲೋಕದ ಅಂತರಾತ್ಮ ಅರಿಯುವ ಮಹತ್ವದ ಪ್ರಯತ್ನ ಕೃತಿಯಲ್ಲಿದೆ. ನದಿಗಳ ಸಾವಿನ ಕಾರಣಗಳು ಮತ್ತು ಪರಿಹಾರದ ಮಾರ್ಗಗಳನ್ನು ಈ ಕೃತಿಯಲ್ಲಿ ಸೂಚಿಸಿದ್ದಾರೆ.  

About the Author

ಶಿವಾನಂದ ಕಳವೆ

ಶಿವಾನಂದ ಕಳವೆ ಅವರು ಶಿರ್ಸಿ ಬಳಿಯ ಕಳವೆ ಗ್ರಾಮದವರು. ವೃತ್ತಯಿಂದ ಪತ್ರಕರ್ತರು. ಪರಿಸರ ಜಾಗೃತಿ ಮೂಡಿಸುವ ಬರೆಹಗಳು ಇವರ ವೃತ್ತಿ ವೈಶಿಷ್ಟತೆ. ಶಿರಸಿ ಸಮೀಪದ ನೀರ್ನಳ್ಳಿಯ ‘ಮಲೆನಾಡ ಮಳೆಕೇಂದ್ರ’ದ ರೂವಾರಿಯೂ ಹೌದು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಅಲ್ಲಿಯ ಕೃಷಿ, ಪರಿಸರ, ಪರಿಸರ, ಜನಜೀವನಗಳನ್ನು ದಾಖಲಿಸಿದ್ದಾರೆ. ಈ ಪ್ರವಾಸದ ಬರವಣಿಗೆ ‘ಕಾಡುನೆಲದ ಕಾಲಮಾನ’. ದೇಸೀ ಜ್ಞಾನದ ವಿವಿಧ ಮಜಲುಗಳ ಅಧ್ಯಯನ ನಡೆಸಿದ್ದಾರೆ.  ಮುಡೇಬಳ್ಳಿ, ಮುಳ್ಳೆಹಣ್ಣು (ಸಂಪದ.ನೆಟ್ ಅಂತರ್ಜಾಲ ಪತ್ರಿಕೆ), ಬಹುಧಾನ್ಯ (ಉದಯವಾಣಿ), ದಾಟ್ ಸಾಲು (ನೀರ ಸಂರಕ್ಷಣೆಯ ಕಾರ್ಯದ ದಾಖಲಾತಿ)-ಇವು ಅಂಕಣಗಳ ಶೀರ್ಷಿಕೆಗಳು.  ಪ್ರಮುಖ ಕೃತಿಗಳು: ಕಾನ್ ಗೌರಿ, ಗೌರಿ ಜಿಂಕೆಯ ಆತ್ಮಕಥೆ, ಅರಣ್ಯ (ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತ), ಅರಣ್ಯ ಜ್ಞಾನದ ...

READ MORE

Related Books