ಜೀವದನಿ

Author : ಸರ್ಜಾಶಂಕರ ಹರಳಿಮಠ

Pages 172

₹ 100.00




Year of Publication: 2010
Published by: ಅಂತಃಕರಣ ಪ್ರಕಾಶನ
Address: "ಶ್ರೇಯಸ್ ನಿಲಯ", ಅಪ್ಪಾಜಿ ರಾವ್ ಕಾಂಪೌಂಡ್, ಕೋಟೆ ರಸ್ತೆ, ಶಿವಮೊಗ್ಗ - 577 202
Phone: 9448780144

Synopsys

‘ಜೀವದನಿ’ ಲೇಖಕ ಸರ್ಜಾಶಂಕರ ಹರಳಿಮಠ ಅವರ ಅಂಕಣ ಬರಹಗಳ ಸಂಕಲನ. ಈ ಕೃತಿಗೆ ಡಾ.ರಹಮತ್ ತರೀಕೆರೆ ಅವರ ಬೆನ್ನುಡಿ ಬರಹವಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ ಲೇಖಕರು ಏಕಾಂತವನ್ನು ನಿರ್ಮಿಸಿಕೊಂಡು ಬರೆಯುವುದು ಮತ್ತು ಪ್ರಕಟಿಸುವುದು ಸುಲಭ. ಆದರೆ ಊರು ಪರಿಸರವನ್ನು ಜೀವಂತವಾಗಿ ಇಡಬೇಕು ಎಂದು ತುಡಿಯುತ್ತ ಆಕ್ಟಿವಿಸ್ಟ್ ಆಗಿ ರಿಸ್ಕ್ ತೆಗೆದುಕೊಳ್ಳುವುದು ಕಷ್ಟದ ಕೆಲಸ. ಸರ್ಜಾಶಂಕರ ಹರಳಿಮಠರಂತಹ ತರುಣರು ತಮ್ಮ ಊರುಗಳನ್ನು ತಮ್ಮ ಬರೆಹ ಮಾತುಕತೆ ಮತ್ತು ಕ್ರಿಯಾಶೀಲತೆಗಳಿಂದ ಜೀವಂತವಾಗಿ ಇಟ್ಟಿರುವವರು’ ಎನ್ನುತ್ತಾರೆ. ಜೊತೆಗೆ ಕೆಲವು ಹಿರಿಯ ಲೇಖಕರು ಅತಿಜಾಣ್ಮೆಯಿಂದಲೂ ಮತೀಯ ಲೆಕ್ಕಾಚಾರದಿಂದಲೂ ಕೂಡಿದ ಬರೆಹ ಮಾಡುತ್ತಿದ್ದಾರೆ. ಇನ್ನೂ ಕೆಲವು ಹಿರಿಯರು ಒಳಗಿನ ಒತ್ತಡವಿಲ್ಲದೆ ಸಾಧಾರಣ ಬರೆಹಗಳನ್ನು ಮಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ನಾಡನ್ನು ಕಟ್ಟುವ ಕನಸಿನಿಂದ ಕೂಡಿ ಜೀವಂತಿಕೆ ಮಿಡಿಯುವಂತಹ ಬರೆಹ ಮಾಡುತ್ತಿರುವ ಇಂತಹ ಲೇಖಕರು ಕನ್ನಡ ಸಾಹಿತ್ಯದ ಮಾನವೀಯ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಸರ್ಜಾಶಂಕರ ಹರಳಿಮಠ
(04 June 1971)

ಲೇಖಕ, ಚಿಂತಕ, ಡಾ. ಸರ್ಜಾಶಂಕರ್ ಹರಳಿಮಠ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹರಳಿಮಠ ಗ್ರಾಮದವರು. ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಪದವಿ ಮುಗಿಸಿ ಉದ್ಯೋಗವರಸಿ ಬೆಂಗಳೂರಿಗೆ ತೆರಳಿದರು. ಅಲ್ಲಿ ಬಹುರಾಷ್ಟ್ರೀಯ ಕಂಪನಿ ಸೇರಿದಂತೆ ಕೆಲವು ಕಂಪನಿಗಳಲ್ಲಿ ಒಂದು ದಶಕದ ಕಾಲ ಸೇವೆ ಸಲ್ಲಿಸಿದ ನಂತರ ಹುದ್ದೆಗೆ ರಾಜೀನಾಮೆ ನೀಡಿ ಊರಿಗೆ ಮರಳಿ ಶಿವಮೊಗ್ಗದಲ್ಲಿ  ಗ್ರಾಮೀಣ ಮಹಿಳೆಯರು ಉತ್ಪಾದಿಸುವ ಕೈಮಗ್ಗದ ಉಡುಪುಗಳೂ ಸೇರಿದಂತೆ ಗೃಹ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ‘ದೇಸಿ ಸಂಸ್ಖೃತಿ’ ಎಂಬ ಮಾರುಕಟ್ಟೆ ಕೇಂದ್ರವನ್ನು ಆರಂಭಿಸಿದರು. ಜತೆ ಜತೆಗೆ ಜನಪರ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಲೇ ಕುವೆಂಪು ...

READ MORE

Related Books