ಜೀವನ ಸಂಧ್ಯ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 136

₹ 75.00




Year of Publication: 2010
Published by: ಸುಧಾ ಎಂಟರ್‍ ಪ್ರೈಸಸ್
Address: #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560091
Phone: 98454 49811

Synopsys

ಸಾಯಿಸುತೆಯವರು ಬರೆಯುವ ಕಾದಂಬರಿಗಳಲಿ ವೈವಿಧ್ಯತೆ ಇದೆ. ಕಾದಂಬರಿಗಳಲ್ಲಿ ಕಾಲ್ಪನಿಕ ಪಾತ್ರಗಳು ಇದ್ದರೂ ಅವು ಬದುಕಿನ ಚಿತ್ರಣವನ್ನು ಕಟ್ಟಿ ಕೊಡುತ್ತವೆ. ಆದರಿಂದ ಕಾದಂಬರಿಗಳು ಓದುಗನಿಗೆ ಆಪ್ತ ಎನಿಸುತ್ತದೆ. ನಾರಾಯಣಪ್ಪ ಪಾರ್ವತಮ್ಮ ದಂಪತಿಗಳು.ಮಾಧು,ಶ್ಯಾಮ,ಸುಕನ್ಯಾ ಮಕ್ಕಳು. ಪೂರ್ತಿ ಹಳ್ಳಿಯ ಚಿತ್ರಣ. ಮಾಧು ಸಿಟಿ ಯಲ್ಲಿ ಓದಿದರೂ ತೋಟ,ಹಳ್ಳಿಯ ಕಡೆಗೆ ಸೆಳೆತ ಹೆಚ್ಚಾಗಿ ಊರಿಗೆ ಹಿಂತಿರುಗಿದ.ಮಾಧುಗೆ ಮದುವೆ ಮಾಡುವ ಪ್ರಸ್ತಾಪ ಬಂತು ಅತ್ತೆ ಮಗಳ ಜಾತಕ ಕೂಡಿ ಬರದೇ,ಪೇಟೆ ಹುಡುಗಿ ಸರಳ ಜೊತೆ ಮದುವೆ ಮಾಡಿದರು ಹಿರಿಯರು.ಒಂದು ಮನೆಗೆ ಸೊಸೆ ಬಂದೊಡನೆ ಸ್ವಲ್ಪ ಮಟ್ಟಿಗೆ ಬದಲಾವಣೆ ಸಹಜ.ಆದರೆ ಮನೇ ಒಡೆಯುವಂತಾದರೆ. ಮುಗ್ದ ಮನಸ್ಸಿನ ಮಾಧುಗೆ ಘಾಸಿ ಮಾಡಿದಳು. ಎಲ್ಲರನ್ನೂ ನೋಯಿಸಿದಳು. ಸೊಸೆಯಾಗಿ ಬಂದವಳು ಮನೆ ಮಗಳಾಗಬೇಕು ಆಗಾಗದಿದ್ದರೆ ಸಂಸಾರವೇ ಛಿದ್ರವಾಗುವ ಅಪಾಯಗಳನ್ನು ಈ ಕಾದಂಬರಿ ತೆರೆದಿಡುತ್ತದೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books