ಜೀವನಲೀಲೆ

Author : ಸಾಲಿ ರಾಮಚಂದ್ರರಾಯ

Pages 488

₹ 400.00




Year of Publication: 2021
Published by: ಸಾಹಿತ್ಯ ಅಕಾಡೆಮಿ
Address: ರವೀಂದ್ರ ಭವನ, 35, ಫಿರೋಜಶಾಹ ರಸ್ತೆ, ನವದೆಹಲಿ- 110001

Synopsys

ಗುಜರಾತಿ ಲೇಖಕ ಕಾಕಾಸಾಹೇಬ ಕಾಲೇಲಕರ ಅವರ ಕೃತಿಯ ಕನ್ನಡಾನುವಾದ ‘ಜೀವನಲೀಲೆ’. ಈ ಕೃತಿಯನ್ನು ಹಿರಿಯ ಲೇಖಕ ಸಾಲಿ ರಾಮಚಂದ್ರರಾಯರು ಕನ್ನಡೀಕರಿಸಿದ್ದಾರೆ. 1970ರಲ್ಲಿ ಪ್ರಥಮ ಮುದ್ರಣಗೊಂಡಿದ್ದ ಈ ಕೃತಿ 2021ರಲ್ಲಿ ಮರುಮುದ್ರಣಗೊಂಡಿದೆ. ಕಾಕಾಸಾಹೇಬ ಕಾಲೇಲಕರರು ಗುಜರಾತಿ, ಮರಾಠಿ ಮತ್ತು ಹಿಂದೀ-ಹಿಂದೂಸ್ತಾನಿಗಳಲ್ಲಿ ಖ್ಯಾತಿವೆತ್ತ ಲೇಖಕರು. ಅವರು ಮಹಾತ್ಮಗಾಂಧಿಯವರ ಸಹಚರರು ಮತ್ತು ಅತ್ಯಂತ ಪ್ರವಾಸ ಪ್ರಿಯರು. ಅವರ ವ್ಯಕ್ತಿತ್ವವನ್ನು ಪ್ರತಿನಿಧಿಸುವ ಲಲಿತ ಪ್ರಬಂಧಗಳ ಈ ಸಂಗ್ರಹದಲ್ಲಿ ಅವರು ಭಾರತದ ಪ್ರಮುಖ ನದಿಗಳ, ಜಲಪ್ರಪಾತಗಳ ಮತ್ತು ಸಮುದ್ರತೀರಗಳ ಸುಂದರ ಶಬ್ದ-ಚಿತ್ರಗಳನ್ನು ಮೂಡಿಸಿದ್ದಾರೆ. ತಾವು ಪ್ರಕೃತಿಯಲ್ಲಿ ಕಾಣುವ ಸಂಗತಿಗಳ, ವಿಶೇಷತಃ ಜಲಾಶಯಗಳ ಸೌಂದರ್ಯವನ್ನು ಕಾಲೇಲಕರರು ಬಹು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಭೂತಕಾಲೀನ ಸಂಸ್ಮರಣಗಳಿಂದ ಬಣ್ಣಗೊಳಿಸಿ ಪೌರಾಣಿಕ ಕಥೆಗಳಿಂದ ಮೆರುಗು ಕೊಟ್ಟು ಅವನ್ನು ಸಾಹಿತ್ತ್ಯಿಕ ಉದಾಹರಣೆಗಳಿಂದ ಬೆಳಗಿಸಿದ್ದಾರೆ. ಮಹಾಭಾರತದಲ್ಲಿ ನದಿಗಳು ವಿಶ್ವದ ಮಾತೆಯರೆಂದು ಕರೆಯಲ್ಪಟ್ಟಿವೆ. ಕಾವ್ಯಾತ್ಮಕವಾದ ಗದ್ಯದಲ್ಲಿ ಅವುಗಳಿಗೆ ಲೇಖಕರು ಅರ್ಪಿಸಿದ ಶದ್ಧಾಂಜಲಿಯನ್ನು ಇಲ್ಲಿ ಕಾಣಬಹುದು. ಮೂಲತಃ ಗುಜರಾತಿಯಲ್ಲಿದ್ದ ಈ ಪುಸ್ತಕವನ್ನು ಸಾಹಿತ್ಯ ಅಕಾಡೆಮಿಯು ಇತರ ಭಾರತೀಯ ಭಾಷೆಗಳಲ್ಲಿ ಅನುವಾದಕ್ಕೆ ಉತ್ಕೃಷ್ಟ ಕೃತಿಯೆಂದು ಆರಿಸಿತು. ಹಿಂದೀ, ಬಂಗಾಲಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಇದು ಈಗಾಗಲೇ ಅನುವಾದಿತವಾಗಿದೆ. ನಗೀನದಾಸ ಪರೇಖ ಅವರು ಈ ಗ್ರಂಥಕ್ಕೆ ಮಹತ್ತ್ವ ಪೂರ್ಣವಾದ ವಿವರಣಾತ್ಮಕ ಅನುಬಂಧಗಳನ್ನು ಸಿದ್ಧಪಡಿಸಿದ್ದಾರೆ. ಶ್ರೀ ಸಾಲಿ ರಾಮಚಂದ್ರರಾಯರು ಇದನ್ನು ಕನ್ನಡಕ್ಕೆ ಪರಿವರ್ತಿಸಿದ್ದಾರೆ.

About the Author

ಸಾಲಿ ರಾಮಚಂದ್ರರಾಯ
(10 October 1888 - 31 October 1978)

’ಕನ್ನಡ ನೆಲದ ಪುಲ್ಲೆನಗೆ ಪಾವನ ತುಳಸಿ, ಕನ್ನಡದ ಕಲ್ಲೆನಗೆ ಶಾಲಗ್ರಾಮ ಶಿಲೆ’ ಎಂದು ಹಾಡಿದ ಕವಿ ಸಾಲಿ ರಾಮಚಂದ್ರರಾಯರು ಕನ್ನಡದ ನವೋದಯದ ಪ್ರಮುಖ ಕವಿಗಳಲ್ಲಿ ಒಬ್ಬರು. ಕನ್ನಡದ ಮೊದಲ ವಿಲಾಪಗೀತೆ ರಚಿಸಿದ ಹಿರಿಮೆ ಅವರದು. ನವೋದಯದ ಆರಂಭದ ದಿನಗಳಲ್ಲಿಯೇ ರಾಮಾಯಣ ಮಹಾಕಾವ್ಯ ರಚನೆಗೆ ಮುಂದಾಗಿದ್ದ ಸಾಲಿಯವರು ಎರಡು ಕಾಂಡಗಳನ್ನು ಪ್ರಕಟಿಸಿದ್ದರು. ಅದಕ್ಕೆ ಬಂದ ’ಸಾಲಿ ರಾಮಾಯಣ’ ಎಂಬ ಟೀಕೆಯಿಂದ ಬೇಸತ್ತು ನಂತರದ ಸಂಪುಟಗಳನ್ನು ಪ್ರಕಟಿಸಲು ಹಿಂದೇಟು ಹಾಕಿದರು. ನಂತರದ ದಿನಗಳಲ್ಲಿ ಅಪ್ರಕಟಿತ ರಾಮಾಯಣದ ಹಸ್ತಪ್ರತಿಗಳು ಗೆದ್ದಲುಗಳಿಗೆ ಆಹಾರವಾದಾಗ ತೀವ್ರ ನೋವು ಅನುಭವಿಸಿದರು. ಅವರ ಸಮಗ್ರ ಕವಿತೆಗಳನ್ನು ಡಾ. ...

READ MORE

Related Books