ಜ್ಞಾನ ಗಂಗೋತ್ರಿ (ಭಾರತದ ಕಥೆ)

Author : ನಿರಂಜನ

Pages 766

₹ 50.00




Year of Publication: 1974
Published by: ನವಕರ್ನಾಟಕ ಪ್ರಕಾಶನ
Address: 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಶಿವಾನಂದ ವೃತ್ತ ಬಳಿ, ಬೆಂಗಳೂರು-560001
Phone: 08022203580/01

Synopsys

ಭಾರತದ ಸಮಗ್ರ ಚಿತ್ರಣ ನೀಡುವ ವಿಶ್ವಕೋಶದ ಭಾಗವಾಗಿ ನಿರಂಜನರ ಪ್ರಧಾನ ಸಂಪಾದಕತ್ವದಲ್ಲಿ ಮೂಡಿ ಬಂದ 7ನೇ ಸಂಪುಟ-ಜ್ಞಾನ ಗಂಗೋತ್ರಿ.

ಕಿರಿಯರ ಜ್ಞಾನ ವಿಸ್ತಾರ ಹಾಗೂ ವಿಕಾಸಕ್ಕೆ ಜ್ಞಾನ ಗಂಗೋತ್ರಿ ಬೃಹತ್ ಮಾಲೆ ಅತ್ಯಂತ ಉಪಯುಕ್ತವಾಗಿದೆ. ವೈವಿಧ್ಯಮಯ ವಿಷಯಗಳು, ವೈಜ್ಞಾನಿಕ ಪ್ರಯೋಗಗಳು, ನೈಸರ್ಗಿಕ ವಿಸ್ಮಯಗಳು, ಭೌಗೋಳಿಕ ವೈಪರಿತ್ಯಗಳು ಹೀಗೆ ಏನೆಲ್ಲ ವಸ್ತು ವೈವಿಧ್ಯತೆಯ ಸರಣಿ ಮಾಲೆಯಡಿ ಸಂಪುಟ-7ನೇ ಕೃತಿಯಾಗಿ ಗಮನ ಸೆಳೆದಿದೆ.

ಮನುಕುಲದ ಕಥೆ, ಜೀವಜಗತ್ತು, ಭೌತಜಗತ್ತು, ಯಂತ್ರಜಗತ್ತು, ಕಲೆ, ಸಾಹಿತ್ಯ ಕ್ರೀಡೆ, ಮನೋಲ್ಲಾಸ, ಹಾಗೂ ಭಾರತದ ಕಥೆ- ಹೀಗೆ ಏಳು ಬೃಹತ್ ಸಂಪುಟಗಳ ಸರಣಿಯಡಿ ಭಾರತದ ಕಥೆಯೂ ಒಂದು ಬೃಹತ್ ಗ್ರಂಥ. ಕಿರಿಯರಿಗಾಗಿ ರಚಿಸಿದ ವಿಶ್ವಕೋಶವೇ ಆಗಿದೆ.

About the Author

ನಿರಂಜನ
(15 June 1924 - 12 March 1992)

ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು.    ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...

READ MORE

Related Books