ಜೊಸೆಫ್ ಮ್ಯಾಝಿನಿ ಮತ್ತು ಸ್ವಾತಂತ್ಯ್ರವೀರ ಸಾವರಕರ

Author : ಭಿ.ಪ. ಕಾಳೆ

Pages 91

₹ 1.00




Year of Publication: 1949
Published by: ಭಿ.ಪ. ಕಾಳೆ
Address: ಶ್ರೀ ಶೇಷಾಚಲ ಪ್ರೆಸ್, ಮದಿಹಾಳ, ಧಾರವಾಡ

Synopsys

ಇಟಲಿಯ ಸ್ವಾತಂತ್ಯ್ರ ಹೋರಾಟಗಾರ ಜೊಸೆಫ್ ಮ್ಯಾಝಿನಿ ಹಾಗೂ ಭಾರತ ಸ್ವಾತಂತ್ಯ್ರಕ್ಕಾಗಿ ಹೋರಾಡಿದ ವೀರ ಸಾವರಕರ ಅವರ ಹೋರಾಟದ ಚಿತ್ರಣವನ್ನು ಕಟ್ಟಿಕೊಡುವ ಕಾದಂಬರಿ ಇದು. ಭಿ.ಪ. ಕಾಳೆ ಬರೆದಿದ್ದಾರೆ. ಸಾವರಕರ ಅವರೇ ಮ್ಯಾಝಿನಿ ಕೃತಿಯನ್ನು ಬರೆದಿದ್ದರು. ಈ ಕೃತಿಯು ಲೇಖಕರ (ಭಿ.ಪ. ಕಾಳೆ) ಬಳಿಯೇ ಇತ್ತು. ಬ್ರಿಟಿಷ್ ವಿರೋಧಿ ಸಾಹಿತ್ಯ ಪ್ರಕಟಿಸುವ ಸಂಶಯದಿಂದ ಬ್ರಿಟಿಷ್ ಅಧಿಕಾರಿಗಳು ಪ್ರೆಸ್ ಗೆ ಆಗಾಗ ಭೇಟಿ ನೀಡುತ್ತಿದ್ದು, ಒಂದು ದಿನ ಪ್ರೆಸ್ ನಲ್ಲಿರುವ ಕೆಲವರು ಈ ಕೃತಿಯನ್ನು ನಾಶ ಪಡಿಸಿದರು. ಹೀಗಾಗಿ, ಮ್ಯಾಝಿನಿ ಕೃತಿಯ ಸಂಫೂರ್ಣ ಅನುವಾದ ಅಲ್ಲದಿದ್ದರೂ ಅದರ ಭಾವಾರ್ಥಕ್ಕೆ ಧಕ್ಕೆಯಾಗದ ಹಾಗೆ ಮ್ಯಾಝಿನಿ ಕುರಿತು ಹಾಗೂ ವೀರ ಸಾವರಕರ ಕುರಿತು ಬರೆದಿದ್ದಾಗಿ ಲೇಖಕರು ಹೇಳಿಕೊಂಡಿದ್ದಾರೆ.

About the Author

ಭಿ.ಪ. ಕಾಳೆ
(20 January 1889)

ಭಿಕಾಜಿಪಂತ ಕಾಳೆ ಎಂಬುದು  ಪೂರ್ಣ ಹೆಸರು. ಭಿ.ಪ.ಕಾಳೆ ಎಂದೇ ಖ್ಯಾತಿ. ಹೆಸರಾಂತ ಕಾದಂಬರಿಕಾರರು. ಪ್ರಕಾಶಕ-ಮುದ್ರಕರೂ ಹೌದು. ತಂದೆ ಪರಶುರಾಮ ಪಂತ ಕಾಳೆ. ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 1889ರ ಜನವರಿ 20ರಂದು ಹುಟ್ಟಿದರು. ಕುರಂದವಾಡ ಸಂಸ್ಥಾನಿಕರ ಅಧೀನದಲ್ಲಿದ್ದ ಈ ಪ್ರದೇಶ ಪಟವರ್ಧನ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿತ್ತು. ಸಂಸ್ಥಾನಿಕರ ಮನೆ ಮಾತು ಮರಾಠಿ. ಆಡಳಿತದ ಭಾಷೆಯೂ ಮರಾಠಿ.  ಸಂಶಿ ಗ್ರಾಮವು ಮರಾಠಿಮಯವೇ ಆಗಿತ್ತು. ಮಹಾರಾಷ್ಟ್ರದಿಂದ ಪಟವರ್ಧನ ಸಂಸ್ಥಾನಕ್ಕೆ ಬಂದು ಅಲ್ಲಿಯ ಬೇರೆ ಬೇರೆ ಊರುಗಳಲ್ಲಿ ನೆಲಸಿದ ಚಿತ್ಪಾವನ (ಕೊಂಕಣಸ್ಥ) ಬ್ರಾಹ್ಮಣ ಮನೆತನಗಳಲ್ಲಿ ಕಾಳೆ ಕುಟುಂಬವೂ ಒಂದು. ಈ ಕುಂಟುಂಬ ಸಾಂಸಿಯಲ್ಲಿ ...

READ MORE

Related Books