ಜ್ಯೋತಿ ರ್ವಿಜ್ಞಾನ(ಗ್ರಹ-ನಕ್ಷತ್ರ-ರತ್ನ-ವಾಸ್ತು-ಸಂಖ್ಯಾಶಾಸ್ತ್ರ)

Author : ಚಂದ್ರಕಾಂತ ಬಿಜ್ಜರಗಿ

Pages 464

₹ 480.00




Year of Publication: 2018
Published by: ಶೈಲಚಂದ್ರ ಪ್ರಕಾಶನ
Address: ದರ್ಗಾ, ಸೆಂಟ್ರಲ್‌ ಜೈಲ್ ಹತ್ತಿರ, ವಿಜಯಪುರ 586103
Phone: 9448336151

Synopsys

’ಜ್ಯೋತಿಷ್ಯಶಾಸ್ತ್ರವು ಒಂದು ವಿಜ್ಞಾನ’ ಎನ್ನುವ ಲೇಖಕರು ’ಅದು ಖಗೋಳ ಮತ್ತು ಭೂಗೋಲ ಶಾಸ಼ಗಳನ್ನೋಳಗೊಂಡು ಒಂದು ಶಾಸ್ತ್ರ’ ಎಂದು ಅಭಿಪ್ರಾಯ ಪಡುತ್ತಾರೆ. ಸದ್ಯ ಪ್ರಚಲಿತವಿರುವ ಕೆಲವೊಂದು ಪದ್ಧತಿಗಳು ವಿಜ್ಞಾನದಿಂದ ಹೊರಗೆ ಹೋಗಿ ಮೌಢ್ಯತೆಗೆ ಅವಕಾಶಮಾಡಿಕೊಡುವ ಹಾಗಿವೆ. ಕೆಲ ಆಧಾ ರರಹಿತ ಮೂಹೂರ್ತಗಳು, ವಿವಾಹ ಮಿಲನದಲ್ಲಿ ಬಳಸುವ ಕರೆಯುವ ಹೆಸರಿನಿಂದ ಗುಣಗಳನ್ನು ನಿರ್ಧರಿಸುವುದು, ಹೆಸರು ಬದಲಾವಣೆಯೊಂದಿಗೆ ವಿವಾಹ ಮಿಲನದ ಗುಣಗಳನ್ನು ನಿರ್ಧರಿಸುವುದು, ವಾಸ್ತುಶಾಸ್ತ್ರದಲ್ಲಿ ಬಳಕೆಯಾಗುವ ನಿಯಮಗಳು ಅರ್ಥವನ್ನು ಕಳೆದುಕೊಳ್ಳುತ್ತಿವೆ ಎಂಬುದು ಲೇಖಕರ ವಿವರಣೆ. ಜ್ಯೋತಿಷ್ಯಕ್ಕೆ ಮೂಲಾಧಾರವಾದ ಜನ್ಮಲಗ್ನ ಕುಂಡಲಿಯನ್ನು ಗಣನೆಗೆ ತೆಗೆದುಕೊಳ್ಳಬೇಕೇ ಹೊರತು ವಿವಾಹ ಮೂಹೂರ್ತವನ್ನಲ್ಲ’ ಎಂಬುದು ಲೇಖಕರ ಅಭಿಮತ. ’ಆಧುನಿಕ ವಿಜ್ಞಾನದ ಸಹಾಯದೊಂದಿಗೆ ರಚಿಸಿದ ಕೃತಿ’ ಎಂದು ಲೇಖಕರು ತಿಳಿಸಿದ್ದಾರೆ.

About the Author

ಚಂದ್ರಕಾಂತ ಬಿಜ್ಜರಗಿ
(27 September 1949)

ಸಾಹಿತಿ, ಸಂಶೋಧಕ ಮತ್ತು ಪತ್ರಕರ್ತರಾಗಿರುವ ಚಂದ್ರಕಾಂತ ಬಿಜ್ಜರಗಿ ಅವರು ವಿದ್ಯುನ್ಮಾನ ವ್ಯವಹಾರ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯಪುರ ನಿವಾಸಿಗಳು. ವಿದ್ಯುನ್ಮಾನ ವಿಷಯದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಸಮ್ಮೋಹನ ಶಾಸ್ತ್ರದಲ್ಲಿ ಅವರಿಗೆ ವಿಶೇಷ ಆಸಕ್ತಿ. ಅವರು ’ಕುರುಬ ದರ್ಪಣ’ ವಾರಪತ್ರಿಕೆಯ ಸಂಪಾದಕರು.  ವಿಜಯಪುರ ಜಿಲ್ಲಾ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷರು & ಹಾಲಿ ನಿರ್ದೇಶಕರು. ಕನಕದಾಸರ ಕುರಿತ ಸಾಕಷ್ಟು ಬಿಡಿ ಲೇಖನಗಳು ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಮತ್ತು ಸಂಘ-ಸಂಸ್ಥೆಗಳು ಪ್ರಕಟಿಸಿದ ಸ್ಮರಣಸಂಚಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಬಳ್ಳಾರಿ ಪಾಳೆಗಾರ ಬಾಲದ ಹನುಮಪ್ಪ ನಾಯಕ, ಕುರುಬರ ಹೆಜ್ಜೆಗಳು, ಜ್ಯೋರ್ತಿವಿಜ್ಞಾನ, ವಿಜಯನಗರ ಸಾಮ್ರಾಜ್ಯ, ...

READ MORE

Related Books