ಕೆ. ಚನ್ನಬಸಪ್ಪ ಕುಳಗೇರಿ

Author : ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ

Pages 40

₹ 15.00




Year of Publication: 2007
Published by: ಕವಿರಾಜಮಾರ್ಗ ಪ್ರಕಾಶನ
Address: ಕಲಬುರಗಿ

Synopsys

ಸ್ವಾತಂತ್ಯ್ರ ಹೋರಾಟಗಾರ, ಸಮಾಜ ಸುಧಾರಕ ಚನ್ನಬಸಪ್ಪ ಕುಳಗೇರಿ ಅವರ ಕುರಿತು ಸುಭಾಶ್ಚಂದ್ರ ಕಶೆಟ್ಟಿ, ಬಾಚನಾಳ ಅವರು ರಚಿಸಿದ ಕೃತಿ- ಕೆ. ಚನ್ನಬಸಪ್ಪ ಕುಳಗೇರಿ. ಅವರು ಮಾಡಿದ ಉತ್ತಮ ಕಾರ್ಯಗಳು, ಸ್ವಾತಂತ್ಯ್ರಕ್ಕಾಗಿ ಹೋರಾಡಿದ ಅವರ ಸಾಹಸಗಳನ್ನು ಚಿತ್ರಿಸಲಾಗಿದೆ. ವಿದ್ಯಾರ್ಥಿದೆಸೆಯಲ್ಲಿಯೇ ಅನ್ಯಾಯದ ಎದುರು ಎದ್ದುನಿಂತು ಸೆಡ್ಡು ಹೊಡೆದವರು. ನಿಜಾಮ ಸರ್ಕಾರದೊಂದಿಗೆ ಹೋರಾಡಿದ ಅವರ ಬದುಕಿನ ಚಿತ್ರಣವಿದೆ. ನಿಸ್ವಾರ್ಥ ಸೇವೆ ಅವರ ಕೀರ್ತಿಗೆ ಕಳಸವಾಗಿದೆ. ಅವರ ಜನಪರ ಕಾರ್ಯಗಳೊಂದಿಗೆ ಅವರನ್ನು ಸ್ಮರಿಸುವುದು ಈ ಕೃತಿಯ ಉದ್ದೇಶ.

About the Author

ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ
(04 July 1948)

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು.  ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...

READ MORE

Related Books