ಕವಿ-ಚಿಂತಕ ಕೆ. ಎಸ್. ನಿಸಾರ ಅಹಮದ್ ಅವರ ಗದ್ಯ ಬರೆಹಗಳ ಸಮಗ್ರ ಸಂಪುಟವಿದು. ಈ ಕೃತಿಯಲ್ಲಿ 1. ಇದು ಬರಿ ಬೆಡಗಲ್ಲೋ ಅಣ್ಣ (ಸ್ಥಳೀಯ; ಮಂಥನ, ಅವಲೋಕನ ಹಾಗೂ ವಿವೇಚನ ಹೀಗೆ ಉಪಶೀರ್ಷಿಕೆಗಳಡಿ ಹಲವಾರು ಲೇಖನಗಳನ್ನು ಕ್ರೋಢಿಕರಿಸಲಾಗಿದೆ. 2. ಹಿರಿಯರು ಹರಸಿದ ಹೆದ್ದಾರಿ (ಕನ್ನಡದ ನುಡಿ ಮುಡಿಗೆ ಕುರ್ ಆನ್ ನ ಸಿರಿ ಕೊಡುಗೆ, ಮುಳ್ಳಿನ ಮುಕುಟದ ಮಸೀಹ ಸೇರಿದಂತೆ ಒಟ್ಟು 10 ಲೇಖನಗಳು) ,3. ಅಚ್ಚು-ಮೆಚ್ಚು( ಆಸೆ ಸಂಕಲ್ಪಗಳ ಅನ್ಯೋನ್ಯತೆ, ಪ್ರಜಾಪ್ರಭುತ್ವದ ಸುತ್ತಮುತ್ತ ಸೇರಿದಂತೆ ಇತರೆ ಲೇಖನಗಳು) 4. ವಿಚಾರ-ವಿಹಾರ (ಕಥೆ ಕೇಳು ಗುಬ್ಬಕ್ಕ; ನಿನ್ನ ವ್ಯಥೆಯ ಕಥೆ ಕೇಳು, ನಡೀರ ಓಗಾನ; ಗಿಡ ನೆಡಾನ, ವಯಸ್ಸೆಂಬ ಶಿಕ್ಷಕ, ಬೈ ವಿಮರ್ಶೆ ಜೈ ವಿಮರ್ಶೆ ಒಟ್ಟು 10 ಲೇಖನಗಳು), ಹಾಗೂ 5. ಮನದೊಂದಿಗೆ ಮಾತುಕತೆ (ಸಾತ್ವಿಕ ದೈವೀ ಸ್ವರೂಪಿ ಸರಸ್ವತಿ, ನೆಹರು ಅಲ್ಲದಿದ್ದರೆ ಯಾರು ಪ್ರಸ್ತುತ?, ವಿಜ್ಞಾನ ವಿಚಾರ ವಿವೇಚನೆ ಸೇರಿದಂತೆ ಇತರೆ ಲೇಖನಗಳು)-ಈ ಐದು ಸಂಕಲನಗಳ ಸಮಗ್ರ ಲೇಖನಗಳನ್ನು ಸಂಕಲಿಸಿದ ಬೃಹತ್ ಪುಸ್ತಕವಿದು.
©2024 Book Brahma Private Limited.