ಕಾದಂಬರಿಕಾರ ಗಳಗನಾಥರು

Author : ಶ್ರೀನಿವಾಸ ಹಾವನೂರ

Pages 103

₹ 25.00




Year of Publication: 2000
Published by: ಸಾಹಿತ್ಯ ಅಕಾಡೆಮಿ
Address: ರವೀಂದ್ರ ಭವನ, 35, ಫಿರೋಜ್ ಶಾ ರಸ್ತೆ, ನವದೆಹಲಿ- 110001

Synopsys

ಶ್ರೀನಿವಾಸ ಹಾವನೂರು ರಚಿಸಿರುವ ಕೃತಿ ‘ಕಾದಂಬರಿಕಾರ ಗಳಗನಾಥರು’. ಕನ್ನಡ ಕಾದಂಬರಿ ಯುಗದ ಪ್ರವರ್ತಕರೆನಿಸಿದ ಗಳಗನಾಥರ ಬಗ್ಗೆ ಕನ್ನಡದಲ್ಲಿ ಅನೇಕ ಗ್ರಂಥಗಳು ಪ್ರಕಟವಾಗಿವೆ. ಅವುಗಳಲ್ಲಿ ಗಳಗನಾಥ ಮಾಸ್ತರರು ಎಂಬ ಶೀರ್ಷಿಕೆಯುಳ್ಳ ಪೂರ್ಣ ಸ್ವರೂಪದ ನನ್ನ ಕೃತಿ ಎರಡನೆಯದು ಎಂದಿದ್ದಾರೆ ಶ್ರೀನಿವಾಸ ಹಾವನೂರರು. ಡಾ. ಕೃಷ್ಣಮೂರ್ತಿ ಕಿತ್ತೂರರು ಗಳಗನಾಥರ ಕಾದಂಬರಿಗಳನ್ನು ಕುರಿತು ಉದ್ಗ್ರಂಥವನ್ನು ಬರೆದಿದ್ದಾರೆ. ಪ್ರಕೃತ ಈ ಪುಸ್ತಕದ ವಿಷಯ ಸಾಮಗ್ರಿಯನ್ನು ಇವೆರಡು ಗ್ರಂಥಗಳಿಂದ ತೆಗೆದುಕೊಂಡಿದೆ. ಇದು ಮುಂದೆ ಭಾಷಾಂತರಗೊಂಡು, ಭಾರತದ ವಿವಿಧ ಭಾಷಿಕರನ್ನು ತಲುಪಲಿದೆಯಾದ್ದರಿಂದ, ಅವರನ್ನು ಗಮನದಲ್ಲಿರಿಸಿಕೊಂಡು ವಿಷಯ ಮಂಡನೆ ಮಾಡಲಾಗಿದೆ. ಹಾಗಾಗಿ ಇದರಲ್ಲಿ ಗಳಗನಾಥರ ಕೃತಿಗಳ ಸೂಕ್ಷ್ಮ ವಿಮರ್ಶೆಗೆ ತೊಡಗಿಲ್ಲ. ಗಳಗನಾಥರನ್ನು ಕುರಿತು ಬರೆಯುವುದು ಒಂದರ್ಥದಲ್ಲಿ ಸುಲಭ- ಸರಳವಾದದ್ದು, ಏಕೆಂದರೆ ಅವರು ತಮ್ಮ ಪ್ರತಿಯೊಂದು ಗ್ರಂಥದ ಪೀಠಿಕೆಯಲ್ಲಿ ಅದರ ಆಕರವನ್ನೂ, ಕೃತಿ ರಚನೆಯ ತಮ್ಮ ಉದ್ದೇಶವನ್ನೂ, ಜೊತೆಗೆ ಸ್ವ-ವಿಷಯವನ್ನೂ ಬಿಚ್ಚು ಮಾತಿನಲ್ಲಿ ಹೇಳಿರುತ್ತಾರೆ. ಗಳಗನಾಥರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅವು ನೇರ ಸಾಧನಗಳಾದ್ದರಿಂದ, ಅವುಗಳಿಂದ ಧಾರಾಳವಾಗಿ ಉದ್ಧರಿಸಿದ್ದೇನೆ. ಈ ಉಧೃತ ಭಾಗಗಳಿಂದ, ಇದರಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಪ್ರಾಮಾಣ್ಯತೆಯನ್ನು ಕಾಯ್ದುಕೊಂಡಂತಾಗಿದೆ. ಇಲ್ಲಿ ಗಳಗನಾಥರ ಅಂದಿನ ಭಾಷಾ ಶೈಲಿಗೂ, ಈಗಿನ ನಮ್ಮ ಶಿಷ್ಟ ಕನ್ನಡ ಬರವಣಿಗೆಗೂ ಅಂತರವಿರುವುದನ್ನು ಗಮನಿಸಬೇಕು. ಉದಾ. ಮಾಡುವದು-ಮಾಡುವುದು. ನಮ್ಮ ಗಳಗನಾಥರನ್ನು ಅಖಿಲ ಭಾರತ ಮಟ್ಟದಲ್ಲಿ ಪ್ರಚಾರಗೊಳಿಸುತ್ತಿರುವ ಕೇಂದ್ರ ಸಾಹಿತ್ಯ ಅಕಾಡೆಮಿಗೆ ಅಭಿವಂದಿಸುವೆ ಎಂದಿದ್ದಾರೆ ಲೇಖಕ ಶ್ರೀನಿವಾಸ ಹಾವನೂರ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books