ಕಾಡು ಹುವ್ವು

Author : ಚೀಮನಹಳ್ಳಿ ರಮೇಶಬಾಬು

Pages 102

₹ 75.00




Year of Publication: 2018
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ ಮಲ್ಲತ್ತಹಳ್ಳಿ, ಬೆಂಗಳೂರು- 560056

Synopsys

‘ಕಾಡು ಹುವ್ವು’ ಅನುವಾದಿತ ಕವಿತೆಗಳ ಸಂಕಲನ. ಕನಡದ ಲೇಖಕರು ತಾವು ಓದಿದ ಇತರೆ ಭಾಷೆಯ ಕವಿಗಳ ಬರಹಗಳನ್ನು ಇತರ ಓದುಗರು ಓದಲಿ ಎಂಬ ಉದ್ದೇಶದಿಂದ ತಮ್ಮ ಅನುವಾದಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆ. ಅವುಗಳು ಎಲ್ಲಾ ಓದುಗರ ಗಮನಕ್ಕೆ ಬಾರದೆ ಆ ಉಳಿಯುವ ಸಂಭವವೇ ಹೆಚ್ಚು. ಆ ರೀತಿ ಆಗಬಾರದು ಎಂಬ ಉದ್ದೇಶದಿಂದ ಅವುಗಳಲ್ಲಿ ಮುಖ್ಯವಾದವುಗಳನ್ನು ಆಯ್ಕೆಮಾಡಿ ಇಂತಹ ಸಂಕಲನ ಉಳಿಸಿಕೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶ. ಇಲ್ಲಿನ ಅನುವಾದ ಕವಿತೆಗಳನ್ನು ಅನುವಾದಕರೇ ಸ್ವಇಚ್ಛೆಯಿಂದ ಆರಿಸಿ ಅನುವಾದಿಸಿರಬಹುದು. ಆಯ್ಕೆ, ಅನುವಾದಕ್ಕೆ ಬೇಕಾದ ಭಾಷೆ, ಇವೆಲ್ಲವೂ ಅನುವಾದಕರೇ ನಿರ್ಧರಿಸಿ ಕೊಂಡಿರುತ್ತಾರೆ. ಜೊತೆಗೆ ಅನುವಾದದ ಹಿಂದೆ ಸಮಕಾಲೀನವಾದ ಒತ್ತಡಗಳ ಪ್ರಭಾವವೂ ಇರುತ್ತದೆ. ಏನೇ ಆಗಲಿ ಈ ಬಗೆಯ ಸಂಕಲನಗಳಿಂದ ಹಲವು ಬಗೆಯ ಉಪಯೋಗವಿದೆಯೆಂಬುದು ಸ್ಪಷ್ಟ.

ಇಂತಹ ಸಂಕಲನವನ್ನು ಸಿದ್ಧಪಡಿಸುವುದು ಸುಲಭವಾದ ಕೆಲಸವಲ್ಲ. ಇಡೀ ವರ್ಷದ ಪತ್ರಿಕೆಗಳನ್ನು ಗಮನಿಸಿ ಅವುಗಳನ್ನು ಕೂಡಿಟ್ಟು ಎಚ್ಚರದಿಂದ ಓದಿ ಅನುವಾದಕರನ್ನು ಸಂಪರ್ಕಿಸಿ, ಒಪ್ಪಿಗೆ ಪಡೆದು, ಸಂಕಲನವನ್ನು ಸಿದ್ಧಪಡಿಸಬೇಕು. ಸಂಪಾದಕರು ಈ ಕೆಲಸವನ್ನು ಎಚ್ಚರದಿಂದ ನಿರ್ವಹಿಸಿದ್ದಾರೆ. ಅವರ ಕಣ್ಣಪ್ಪಿ ಕೆಲವು ಕವಿತೆಗಳು ಈ ಸಂಕಲನದಲ್ಲಿ ಸೇರದೆ ಇರಬಹುದು. ಅವು ಈ ಸಂಕಲನದಲ್ಲಿ ಸೇರಲೇ ಬೇಕಾಗಿದ್ದಿರಬಹುದು. ನಿಗದಿಯಾದ ಅವಧಿಯಲ್ಲಿ ಇಂತಹ ಸಂಕಲನಗಳು ಸಿದ್ದಗೊಳ್ಳುವಾಗ ಕೆಲವು ಕೊರತೆಗಳು ಇರುವುದು ಸಹಜ. ಆದರೆ ಚೀಮನಹಳ್ಳಿ ರಮೇಶ್ ಬಾಬು ಅವರು ಆಸಕ್ತಿ ಮತ್ತು ಶ್ರಮವಹಿಸಿ ಈ ಸಂಕಲನವನ್ನು ಸಿದ್ದಪಡಿಸಿದ್ದಾರೆ. 

About the Author

ಚೀಮನಹಳ್ಳಿ ರಮೇಶಬಾಬು
(10 July 1974)

ಸಂಶೋಧನಾ ವಿಜ್ಞಾನಿಯಾಗಿರುವ ಚೀಮನಹಳ್ಳಿ ರಮೇಶಬಾಬು ಚಿಂತಾಮಣಿ  ತಾಲ್ಲೂಕಿನ ಚೀಮನಹಳ್ಳಿಯವರು. ‘ಪ್ರಶ್ನೆ ಮತ್ತು ದೇವರು’, ‘ಎರಡು ಲೋಟಗಳು’, ‘ಮಾಯಾ ಸರೋವರ’ ಎಂಬ ಕವಿತಾ ಸಂಗ್ರಹಗಳನ್ನು ‘ನಾಗ್ದಾಳೆ’ ಎಂಬ ಖಂಡಕಾವ್ಯವನ್ನು ‘ಹಸ್ತಬಲಿ’ ಎಂಬ ಕಥಾ ಸಂಕಲನ ಹಾಗು ‘ಹದ’, ‘ಬಲಿಹಾರ’, ‘ಟೈರ್ಸಾಮಿ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ‘ಕಾಡು ಹುವ್ವು’ ಇವರ ಸಂಪಾದಕತ್ವದಲ್ಲಿ ಬಂದಿರುವ ಅನುವಾದಿತ ಕವಿತೆಗಳ ಸಂಗ್ರಹ. ಮಾಸ್ತಿ ಕಾದಂಬರಿ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಬೆಟಗೆರಿ ಕೃಷ್ಣಶರ್ಮ ಕಾದಂಬರಿ ಪ್ರಶಸ್ತಿ, ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ, ವೀಚಿ ಉದಯೋನ್ಮುಖ ಪ್ರಶಸ್ತಿ, ಅರಳು ಸಾಹಿತ್ಯ ಪ್ರಶಸ್ತಿ ಸೇರಿದಂತೆ ಇನ್ನೂ ಹಲವು ...

READ MORE

Related Books