ಕಾಗೆಯ ಕಾಯಕ

Author : ಕೃಷ್ಣಾನಂದ ಕಾಮತ್

₹ 35.00




Year of Publication: 2000
Published by: ಪ್ರಿಸಮ್ ಬುಕ್ಸ್ ಪ್ರೈ ಲಿ
Address: ನಂಬರ್ 53, 1ನೇ ಮಹಡಿ, 30ನೇ ತಿರುವು, 9ನೇ ಮುಖ್ಯರಸ್ತೆ, ಬನಶಂಕರಿ, ಬೆಂಗಳೂರು- 560070
Phone: 8026714108

Synopsys

‘ಕಾಗೆಯ ಕಾಯಕ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಪ್ರಿಸಮ್ ವಿಜ್ಞಾನ ಮಾಲಿಕೆ-9ರ ಲೇಖನಗಳ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಹೀಗೆ ಉಲ್ಲೇಖಿಸಿದೆ; ‘ಬೆಂಗಳೂರಿನಂಥ ಪಟ್ಟಣದಲ್ಲಿ ಕುಳಿತು ಯಾವ ಪಕ್ಷಿಯ ಅಧ್ಯಯನ ಮಾಡಲು ಸಾಧ್ಯ? 'ಕಾಗೆ' ಸುಲಭವಾಗಿ ಸಿಗುವ ಹಕ್ಕಿ ಅದನ್ನೇ ತಮ್ಮ ಅಧ್ಯಯನಕ್ಕಾಗಿ ಉಪಯೋಗಿಸಿಕೊಂಡು ಬರೆದ ಕತೆ 'ಕಾಗೆಯ ಕಾಯಕ ತನ್ನ ವಿಭಿನ್ನ ವರ್ತನೆಯಿಂದ ಪಕ್ಷಿಲೋಕದಲ್ಲಿ ವಿಶಿಷ್ಟವೆನ್ನಿಸುವ ಈ ಪಕ್ಷಿಗೆ ತನ್ನದೇ ಆದ ನೀತಿ ನಿಯಮಗಳುಂಟು, ಅವುಗಳ ಆಡುಭಾಷೆ ಸಂಗೀತ, ನೃತ್ಯ, ಜಾಣ್ಮೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿರುವ ಲೇಖಕರು, ಇವೆಲ್ಲ ನನ್ನ ಸ್ವಾನುಭವ ಹಾಗೂ ನಾನು ಬಂದು ಹೇಳಿದ್ದಲ್ಲ' ಎನ್ನುತ್ತಾರೆ. ಕಾಕರಾಜ ನ ಚಮತ್ಕಾರಿಕ ಜೀವನ ಈ ಪ್ರಸ್ತಕ ಬಹುಶಃ ಕನ್ನಡದಲ್ಲಿಯ ಮೊಟ್ಟ ಮೊದಲ ಕೃತಿ ಇದಾಗಿದೆ’ ಎಂದು. 

About the Author

ಕೃಷ್ಣಾನಂದ ಕಾಮತ್
(29 September 1934 - 20 February 2002)

ಖ್ಯಾತ ಸಾಹಿತಿ ಹಾಗೂ ವಿಜ್ಞಾನಿಯಾದ ಕೃಷ್ಣಾನಂದ ಕಾಮತ್ ಅವರು 1934ರ ಸೆಟ್ಪಂಬರ್ 29 ರಂದು ಜನಿಸಿದರು. ಊರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ.  ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೀಟ ವಿಜ್ಞಾನದಲ್ಲಿ ಎಂಎಸ್ಸಿ ಪದವಿ, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪರಿಸರ ಮತ್ತು ಅರಣ್ಯ ವಿಜ್ಞಾವ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ರಾಜಸ್ಥಾನದ ಉದಯಪುರ ವಿಶ್ವವಿದ್ಯಾಲಯದ ಜಾಬ್ನೇರ ಕೃಷಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ...

READ MORE

Related Books