ಕಾಳಿದಾಸನ ನಾಟಕಗಳು

Author : ಕೆ.ಕೃಷ್ಣಮೂರ್ತಿ

Pages 84

₹ 80.00




Year of Publication: 2010
Published by: ಕೆ. ಕೃಷ್ಣಮೂರ್ತಿ ಸಂಸ್ಕೃತ ಸಂಶೋಧನಾ ಕೇಂದ್ರ
Address: #460, 39ನೇ ಅಡ್ಡರಸ್ತೆ, 9ನೇ ಮುಖ್ಯರಸ್ತೆ, ಜಯನಗರ, ಬೆಂಗಳೂರು
Phone: 9448553797

Synopsys

ಕಾಳಿದಾಸನ ಕೃತಿಗಳ ವಿಮರ್ಶೆ ಎಂದರೆ ಎಂದಿಗೂ ಮುಗಿಯದ ಮನೋರಥಗಳ ಸಾಲು..ಕಾಳಿದಾಸನ ದಿವ್ಯ ಕಲ್ಪನೆಯು ನಿರಾಯಾಸವಾಗಿ ಸಾಗುತ್ತದೆ. ಅನುವಾದಕ ಡಾ. ಕೆ. ಕೃಷ್ಣಮೂರ್ತಿ ಹೇಳುವಂತೆ ’ಕಾಳಿದಾಸನ ಸೃಷ್ಟಿಯಲ್ಲಿ ಪ್ರತಿಭೆ, ರಸ, ವರ್ಣನೆ, ದಿವ್ಯತ್ವ ಜೊತೆಗೆ ಮಾನವೀಯ ಸೃಷ್ಟಿ, ಉದಾತ್ತತೆ, ದುಃಖ ಹೀಗೆ ಇದ್ದು, ಕಾಳಿದಾಸನನ್ನು ವಿಶ್ವದಾರ್ಶನಿಕರ ಸಾಲಿನಲ್ಲಿ ನಿಲ್ಲಿಸುತ್ತವೆ. ಕಾಳಿದಾಸನ ಕಾವ್ಯವು ಮನಸ್ಸನ್ನು ಸೂರೆಗೊಳ್ಳುತ್ತದೆ. ಮುಗ್ದಗೊಳೀಸುತ್ತದೆ. ಪ್ರಕೃತಿ ದೇವಿಯು ತನ್ನ ವಿಲಾಸಲೀಲೆಗಳನ್ನು , ವೇಷ-ವಿನ್ಯಾಸಗಳನ್ನು , ಭಾವಭಂಗಿಗಳನ್ನು ಅಭಿನಯಿಸುತ್ತಾ, ಪ್ರತಿ ಕ್ಷಣವೂ ನಾಟ್ಯ ಮಾಡುತ್ತಾಳೆ, ಆತನ ಕಾವ್ಯರಂಗದಲ್ಲಿ ಎಂದು ಪ್ರಶಂಸಿಸಿದ್ದಾರೆ. ಕವಿ ಆನಂದವರ್ಮ ನುಡಿಯುವಂತೆ ಕಾಳಿದಾಸನು ನಾಟಕ ಸಾಮ್ರಾಜ್ಯದ ಅನಭಿಷಕ್ತ ಸಾರ್ವಭೌಮ; ಕವಿ ಎಂಬುದು. ಹೀಗೆ ಕಾಳಿದಾಸನು ರಚಿಸಿರುವ ನಾಟಕಗಳ ಅನುವಾದವೇ ಈ ಕೃತಿ-ಕಾಳಿದಾಸನ ನಾಟಕಗಳು.

About the Author

ಕೆ.ಕೃಷ್ಣಮೂರ್ತಿ

ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...

READ MORE

Related Books