ಕಬ್ಬಿಗರ ಕಾವಂ

Author : ಎಸ್.ಜಿ. ನರಸಿಂಹಾಚಾರ್

Pages 151




Year of Publication: 1930
Published by: ಎಂ.ಎ. ರಾಮಾನುಜಯ್ಯಂಗಾರ್ಯ
Address: ಮೈಸೂರು

Synopsys

ಕನ್ನಡ ನಾಡು-ನುಡಿ ಚಿಂತಕರಾದ ಎಂ.ಎ. ರಾಮಾನುಜಯ್ಯಂಗಾರ್ಯ ಹಾಗೂ ಎಸ್.ಜಿ. ನರಸಿಂಹಾಚಾರ್ ಅವರು ಸಂಯುಕ್ತವಾಗಿ ಬರೆದ ಕೃತಿ -ಅಂಡಯ್ಯ ಮಹಾಕವಿ ಪ್ರಣೀತ ಕಬ್ಬಿಗರ ಕಾವಂ. 1883 ಹಾಗೂ 1886 ಹೀಗೆ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಮುದ್ರಣದ ನಂತರ ಇದೀಗ 3ನೇ ಮುದ್ರಣ ಕಾಣುತ್ತಿದೆ. ಕರ್ಣಾಟಕ ಕಾವ್ಯಮಂಜರಿಯಲ್ಲಿ ಈ ಕೃತಿಯು ಪ್ರಕಟಗೊಂಡಿದೆ. ಸಂಸ್ಕೃತ ಪದಗಳ ಮಿಶ್ರವಿಲ್ಲದೆ ದೇಶೀ ಪದಗಳಿಂದ ರಚಿತವಾದ ಕೃತಿ ಇದು. ಆದ್ದರಿಂದ ಈ ಸಾಹಿತ್ಯವನ್ನು ಕಬ್ಬಿಗರ ಕಾವಂ, ಮದನ ವಿಜಯ, ಕಾವನ ಗೆಲ್ಲ, ಸೊಬಗಿನ ಸುಗ್ಗಿ ಎಂಬ ಹೆಸರುಗಳುಂಟು. ಅಂಡಯ್ಯ ಕವಿಯ ನಾಡು, ಕವಿಗೆ ರಾಜಾಶ್ರಯವಿತ್ತೆ?, ಕಬ್ಬಿಗರ ಕಾವಂ ಎಂಬುದು ಕವಿಯ ಹೆಸರೇ ಇಲ್ಲವೇ ಗ್ರಂಥದ ಹೆಸರೇ?, ಹೀಗೆ ಜಿಜ್ಞಾಸೆಯೊಂದಿಗೆ ಆತನ ಕಾವ್ಯವನ್ನು ವಿಶ್ಲೇಷಿಸಲಾಗಿದೆ.

About the Author

ಎಸ್.ಜಿ. ನರಸಿಂಹಾಚಾರ್
(11 September 1862 - 22 December 1907)

ಶ್ರೀರಂಗಪಟ್ಟಣದಲ್ಲಿ ಎಸ್.ಜಿ. ನರಸಿಂಹಾಚಾರ್ಯರು 11-09-1862 ರಂದು ಜನಿಸಿದರು. ತಂದೆ ಪೂಜಾಳಂ ಮನೆತನದ ಅಳಸಿಂಗಾಚಾರ್ಯರು. ತಾಯಿ ಸೀತಮ್ಮ.ಶ್ರೀರಂಗಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ಮೈಸೂರಿನಲ್ಲಿ ಬಿ.ಎ. ಪದವಿ ಹಾಗೂ 1892ರಲ್ಲಿ ಎಂ.ಎ. ಪದವೀಧರರು. ವಿದ್ಯಾ ಇಲಾಖೆಯಲ್ಲಿ ಸೇರಿ ಶ್ರೀರಂಗಪಟ್ಠಣದ ಶಾಲೆಯಲ್ಲೇ ಶಿಕ್ಷಕರು. ನಂತರ, ಮೈಸೂರು ಪ್ರಾಚ್ಯ ಕೋಶಾಗಾರದಲ್ಲಿ ಪಂಡಿತರಾಗಿ ಸೇರಿದರು.  ರಾಮಾನುಜ ಅಯ್ಯಂಗಾರ‍್ಯರೊಡನೆ ‘ಕರ್ನಾಟಕ ಕಾವ್ಯಮಂಜರಿ’ ಮಾಸಪತ್ರಿಕೆ ಆರಂಭಿಸಿದರು.  ನಂತರ, 1899ರಲ್ಲಿ ‘ಕರ್ನಾಟಕ ಕಾವ್ಯ ಕಲಾನಿ’ ಪತ್ರಿಕೆ ಪ್ರಾರಂಭಿಸಿದರು. ಕನ್ನಡ ಕವಿಗಳ ಚಂಪೂ, ಗದ್ಯ, ಪದ್ಯ, ನಾಟಕ, ಕೀರ್ತನೆ, ಶತಕ, ನಿಘಂಟುಗಳನ್ನು ಪರಿಷ್ಕರಿಸಿ ಪ್ರಕಟಿಸಿದರು. ಕರ್ನಾಟಕ ಕಾವ್ಯಮಂಜರಿಯಲ್ಲಿ ಗದಾಯುದ್ಧ, ಮಲ್ಲಿನಾಥ ಪುರಾಣ, ಲೀಲಾವತಿ ಪ್ರಬಂಧ, ಕರ್ನಾಟಕ ಪಂಚತಂತ್ರ, ಮಿತ್ರವಿಂದಾ ...

READ MORE

Related Books