ಕಡವ ಶಂಭುಶರ್ಮ ಕೃತಿ ಸಂಚಯ-1

Author : ಎಚ್.ಜಿ. ಶ್ರೀಧರ

Pages 222

₹ 160.00




Year of Publication: 2003
Published by: ಕಡವ ಶಂಭುಶರ್ಮ ಸ್ಮಾರಕ ಪ್ರತಿಷ್ಠಾನ
Address: ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ- 574203

Synopsys

ಕಡವ ಶಂಭುಶರ್ಮ ಅವರು ಸಂಸ್ಕೃತ, ಕನ್ನಡ ಭಾಷೆಗಳ ವಿದ್ವಾಂಸರೂ ಅಸಾಮಾನ್ಯ ಮಹಾಕವಿಗಳೂ ಆಗಿದ್ದವರು. ಇಪ್ಪತ್ತನೇ ಶತಮಾನದಲ್ಲಿ ಕರ್ನಾಟಕದ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬದುಕಿದ ಅವರ ಕುರಿತಾದ ಮಹಾಗ್ರಂಥವಿದು. ಪುತ್ತೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಮೂರು ದಶಕಗಳಿಗೂ ಮೀರಿ ವೃತ್ತಿಯಿಂದ ಕನ್ನಡ ಪಂಡಿತರಾಗಿದ್ದ ಅವರು ಪ್ರವೃತ್ತಿಯಿಂದ ಮಹಾಕವಿಗಳು, ಗಾಂಧೀಭಕ್ತರು. ಸ್ವತಃ ನೂಲುನೇಯ್ದು ಖಾದಿ ಗ್ರಾಮೋದ್ಯೋಗಕ್ಕೆ ಮಾದರಿಯಾದರು. ಇವರ ಬದುಕು- ಬರಹಗಳ ಮಾಹಿತಿಯನ್ನು ಸಂಪಾದಿಸಿ, ಕೃತಿ ರೂಪದಲ್ಲಿ ಪ್ರಕಟಿಸಿರುವುದು ಲೇಖಕ ಎಚ್.ಜಿ. ಶ್ರೀಧರ.

About the Author

ಎಚ್.ಜಿ. ಶ್ರೀಧರ

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಚ್.ಜಿ. ಶ್ರೀಧರ ಅವರು ಕನ್ನಡ ವಿಭಾಗ ಮುಖ್ಯಸ್ಥರು ಕೂಡ. ಹೆಸರಾಂತ ವಿಮರ್ಶಕ, ಸಂಶೋಧಕರಾಗಿರುವ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಮುಂಡಿಗೆಹಳ್ಳದವರು. ಸಾಗರದ ಲಾಲ್‌ಬಹಾದೂರ್ ಶಾಸ್ತಿ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದಿದ್ದಾರೆ. ’ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ' ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿ, ಪದವಿ ತರಗತಿ ಪಠ್ಯಪುಸ್ತಕಗಳ ರಚನಾ ಸಮಿತಿ; ಕ್ಯಾಲಿಕತ್ ವಿಶ್ವವಿದ್ಯಾಲಯದ ಪದವಿ ಪರೀಕ್ಷಾ ಮಂಡಳಿಯ ಸದಸ್ಯರಾಗಿರುವ ಅವರು ...

READ MORE

Related Books