ಕಜ್ಜಾಯ

Author : ಸುನಂದಾ ಬೆಳಗಾಂವಕರ

Pages 176

₹ 175.00




Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100

Synopsys

ಕನ್ನಡದ ಪ್ರಸಿದ್ಧ ಕತೆಗಾರ್ತಿ ಲೇಖಕಿ ಸುನಂದಾ ಬೆಳಗಾಂವಕರ ಅವರ ಲಲಿತ ಪ್ರಬಂಧಗಳ ಸಂಗ್ರಹ ‘ಕಜ್ಜಾಯ’. ತಾಯ್ತನದ ಅಕ್ಕರೆಯಿಂದ ಅಂತಃಕಾರಣದಿಂದ ಬರೆಯುವ ಸುನಂದಾರ ಬರಹಗಳು ಸಂಸ್ಕೃತಿಯ ಮೌಲ್ಯಗಳನ್ನು ಕಟ್ಟಿಕೊಡುವಂತಹದ್ದು ಇವರ ಪ್ರಬಂಧಗಳನ್ನು ಕುರಿತು ಕನ್ನಡದ ಪ್ರಸಿದ್ಧ ಕವಿ ಬಿ ಸಿ ರಾಮಚಂದ್ರಶರ್ಮರ ಕೆಲವು ಮಾತುಗಳು ಹೀಗಿವೆ; "ಶ್ರೀಮತಿ ಸುನಂದಾ ಅವರು ಈ ಪ್ರಬಂಧಗಳ ಮೂಲಕ ತಾವು ಕಂಡದ್ದರ ವಿಶಿಷ್ಟತೆಯನ್ನು, ಪೊರೆ ಬೆಳೆದು ಜಡ್ಡಾದ ನಮ್ಮ ಕಣ್ಣಿಗೆ ಹಿಡಿದಿದ್ದಾರೆ. ತಮಗನುಭವವಾದ ನೋವು-ನಲಿವುಗಳನ್ನು ನಮ್ಮದಾಗಿಸಿದ್ದಾರೆ. ಅವರ ಕಣ್ಣು ನೀರೊಡೆದಾಗ ನಮ್ಮ ಕಣ್ಣು ಮಂಜಾಗುವುದು ಅನಿವಾರ್ಯವೆನ್ನುವಂತೆ ಬರೆದಿದ್ದಾರೆ.ಇದೇ ತಾನೇ ಒಳ್ಳೆಯ ಸಾಹಿತ್ಯ ಮಾಡುವ ಕೆಲಸ? ಮಾಡಬೇಕಾದ ಕೆಲಸ?

About the Author

ಸುನಂದಾ ಬೆಳಗಾಂವಕರ
(20 October 1935)

ಇಪ್ಪತ್ತನೆ ಶತಮಾನದ ಪೂರ್ವಾರ್ಧದ ಸಮಕಾಲೀನ ಲೇಖಕಿಯರಲ್ಲಿ ಒಂದು ಗಣನೀಯ ಹೆಸರೆಂದರೆ ಸುನಂದಾ ಬೆಳಗಾಂವಕರ. ಧಾರವಾಡದ ಮಹಿಷಿ ಕುಟುಂಬದವರು. ವಿವಾಹದ ನಂತರ ಆಫ್ರಿಕಾ ಖಂಡದ ಝಾಂಬಿಯ ದೇಶದಲ್ಲಿ ತಮ್ಮ ಪತಿಯೊಡನೆ ಮೂವತ್ತು ವರ್ಷ ಕಳೆದು, ಬಳಿಕ ಭಾರತಕ್ಕೆ ಹಿಂತಿರುಗಿದರು. ಸುನಂದಾ ಬೆಳಗಾವಕರರವರು ಬರೆದ ‘ಕಜ್ಜಾಯ(ಪ್ರಬಂಧ)’ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ  ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಇದಲ್ಲದೆ ಅವರು ‘ಶಾಲ್ಮಲಿ’ ಎನ್ನುವ ಕಾವ್ಯಸಂಕಲನ, ‘ನಾಸು’, ‘ಝವೇರಿ’ ಎನ್ನುವ ಕಾದಂಬರಿಗಳನ್ನು ಬರೆದಿದ್ದಾರೆ. ಸುನಂದಾ ಬೆಳಗಾಂವಕರ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ‘ನಾಸು’ ಕಾದಂಬರಿಗೆ 1990 ರಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ ಲಭಿಸಿದೆ. 2017ರಲ್ಲಿ ನಿಧನ ಹೊಂದಿದರು.  ...

READ MORE

Related Books