ಕಲಾಗ್ರಾಮ ಮರಿಯಮ್ಮನಹಳ್ಳಿ

Author : ಗುಡಿಹಳ್ಳಿ ನಾಗರಾಜ

Pages 38

₹ 30.00




Year of Publication: 2019
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯಮ ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಪ್ರತಿ ಊರಿಗೂ ಸಾಮಾಜಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯವಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿಯ ಮರಿಯಮ್ಮನಹಳ್ಳಿಯೂ ಇದಕ್ಕೆ ಹೊರತಲ್ಲ. ಈ ಹಳ್ಳಿಯ ನಡು ಬೀದಿಯಲ್ಲಿ ನಿಂತು ಕಲ್ಲು ಎಸೆದರೆ ಅದು ಒಬ್ಬ ಕಲಾವಿದನಿಗೆ (ಅವರು ನಟರು, ಚಿತ್ರಕಲಾವಿದರು, ವಾದ್ಯಸಂಗೀತಗಾರರು, ಬಯಲಾಟದ ಭಾಗವತರು ಇತ್ಯಾದಿ) ತಾಗುತ್ತದೆ ಎಂಬುದು. ಈ ನೆಲವು ಕಲಾವಿದರ ಬೀಡು. 1952ರಲ್ಲಿ ತುಂಗಾಭದ್ರ ನದಿಗೆ ಆಣೆಕಟ್ಟು ನಿರ್ಮಿಸುವಾಗ ಈ ಭಾಗದ ಬಹುತೇಕ ಹಳ್ಳಿಗಳು ಮುಳುಗಡೆಯಾದವು. ಬಹುತೇಕರು ವಲಸೆ ಹೋದರು. ಕಲಾವಿದರು ತಮ್ಮ ಹಳ್ಳಿಯ ಸಮೀಪದ ದೊಡ್ಡ ಊರು ಮರಿಯಮ್ಮನಹಳ್ಳಿಗೆ ಬಂದು ನೆಲೆಸಿದರು. ಹೊಸಪೇಟೆ ಸುತ್ತಮುತ್ತ ಅದಿರು ಗಣಿ ಕಾರ್ಖಾನೆಗಳು ಸ್ಥಾಪಿತವಾಗಿದ್ದರಿಂದ ಕೆಲಸವೂ ಸಿಕ್ಕಿತ್ತು. ಬದಲಾಗುತ್ತಿರುವ ವಿದ್ಯಮಾನಗಳ ಮಧ್ಯೆಯೂ ಈ ಹಳ್ಳಿಯು ಹೇಗೆ ತನ್ನ ಕಲೆಯ ಜೀವಾಳವನ್ನು ಉಳಿಸಿಕೊಂಡು ಬಂದಿದೆ ಎಂಬುದರ ಕುತೂಹಲಕಾರಿ ಅಂಶಗಳನ್ನು ಬೆಳಕಿಗೆ ತರುವ ಪ್ರಯತ್ನ ಈ ಕೃತಿಯ ಉದ್ದೇಶವೂ ಆಗಿದೆ.

About the Author

ಗುಡಿಹಳ್ಳಿ ನಾಗರಾಜ

ವೃತ್ತಿ, ಹವ್ಯಾಸಿ, ಗ್ರಾಮೀಣ ಸೇರಿದಂತೆ ಸಮಗ್ರ ರಂಗಭೂಮಿ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು ಗುಡಿಹಳ್ಳಿ ನಾಗರಾಜ ಅವರು. ರಂಗಭೂಮಿ ಕುರಿತ ಇವರ ಬರಹಗಳು ರಂಗ ಇತಿಹಾಸದಲ್ಲಿ ಹೊಸ ಹಾದಿ ನಿರ್ಮಿಸಿವೆ. ಅಂತಹ ಹದಿನೈದಕ್ಕೂ ಹೆಚ್ಚು ರಂಗಕೃತಿ ರಚಿಸಿದ್ದಾರೆ. ರಂಗತಂಡಗಳ ರೂವಾರಿಯಾಗಿ ರಾಜ್ಯದ ನಾಲ್ಕಾರು ರಂಗತಂಡಗಳ ತೆರೆಯ ಹಿಂದಿನ ಶಕ್ತಿಯಾಗಿ ತೊಡಗಿಸಿಕೊಂಡಿದ್ದು- ಕಡೆಗಣಿಸಲ್ಪಟ್ಟ ನೂರಾರು ಕಲಾವಿದರನ್ನು ಬೆಳಕಿಗೆ ತಂದಿದ್ದಾರೆ. ಮುಖ್ಯವಾಹಿನಿಯಲ್ಲಿ ಅವಕಾಶ ಕಲ್ಪಿಸಿದ್ದಾರೆ. ದಾವಣಗೆರೆ (ಮತ್ತೆ ಈಗ ಬಳ್ಳಾರಿ) ಜಿಲ್ಲೆ ಹರಪನಹಳ್ಳಿ, ತಾಲ್ಲೂಕು ಗುಡಿಹಳ್ಳಿಯ ನಾಗರಾಜ ಅವರು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ.ಇಂಗ್ಲಿಷ್ ಪದವಿ ಪಡೆದು, ಹರಪನಹಳ್ಳಿಯಲ್ಲಿ ಮೂರು ವರ್ಷ (1980-83) ...

READ MORE

Related Books